PLEASE LOGIN TO KANNADANET.COM FOR REGULAR NEWS-UPDATES









ಅಮೇರಿಕಾದಲ್ಲಿ ನೆಲೆಸಿರುವ ಕುಕನೂರಿನ ಉತ್ಸಾಹಿ ಯುವಕ ಮೆಹಬೂಬ ಪಾಷಾ ಕಳೆದ ೩ ವರ್ಷಗಳಿಂದ ರಾಜ್ಯಮಟ್ಟದ ಮ್ಯಾರಾಥಾನ್ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ನಶಿಸುತ್ತಿರುವ ಕ್ರೀಡೆಗಳಿಗೆ ಜೀವ ತುಂಬವ, ಆಟೋಟಗಳ ಬಗೆಗೆ ಅರಿವು ಮೂಡಿಸುವ, ಅದರಲ್ಲೂ ಓಟ-ಹಳ್ಳಿಗಾಡು ಓಟ, ಕಾಲ್ನಡಿಗೆಗಳತ್ತ ಜನರಲ್ಲಿ ಒಲವು,ಪ್ರೀತಿ,ಆಸಕ್ತಿ ಬಿತ್ತುವ ಉದ್ದೇಶದಿಂದ ಈ ಮ್ಯಾರಾಥಾನ್ ಎರ್ಪಡಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯ ಹೆಸರು ಭಾನಾಪೂರ್ ಎಕ್ಸ್ ಪ್ರೆಸ್. ದೊಡ್ಡವರಿಗಾಗಿ ೫ ಕಿ.ಮಿ ಮತ್ತು ೬ ರಿಂದ ೧೨ ವರ್ಷದ ಮಕ್ಕಳಿಗಾಗಿ ೬೦೦ ಮೀಟರ್ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಗೆದ್ದವರಿಗೆ ಆಕರ್ಷಕ ಟ್ರೋಪಿ, ನಗದು ಬಹುಮಾನ ನೀಡುತ್ತಿದ್ದಾರೆ. ಪ್ರತಿ ಸಾರಿ ೫೦೦ ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.
ಈ ಸಲ ೬-೩-೨೦೧೧ ರವಿವಾರ ಬೆಳಿಗ್ಗೆ ೭.೦೦ ಗಂಟೆಗೆ ಕುಕನೂರು ಗ್ರಾಮದ ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ.
ಆಸಕ್ತರು ಸಂಪರ್ಕಿಸಲು,ಭಾಗವಹಿಸಲು ಕೋರಲಾಗಿದೆ.
ಆಸಕ್ತರು ೪-೩-೨೦೧೧ ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು.
ನವೀನ್ ಕಲ್ಮನಿ ೯೯೬೪೪೪೦೬೦೬೫
ಶಿವಕುಮಾರ ತಳಕಲ್ಲ ೯೯೮೬೫೬೯೦೭೮
ಮಹ್ಮದ ರಫಿ 9449663597
ರವಿ ಜಕ್ಕಾ 9986254825
ಇ-ಮೇಲ್ : bhanapurexpress@gmail.com ನಲ್ಲಿ ನೋಂದಾಯಿಸಿ

Advertisement

0 comments:

Post a Comment

 
Top