ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದವಾರ್ಷಿಕೊತ್ಸವ ಮತ್ತು ಬೀಳ್ಕೊಡುಗೆ ಸಮಾರಂಭದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯ ದಲ್ಲಿವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ವಿದ್ಯಾಥಿಗಳಿಗೆ ಮತ್ತು ನಿವೃತ್ತಿಹೊಂದುತ್ತಿರುವ ಜಿಲ್ಲಾ ನ್ಯಾಯಾಧೀಶರಿಗೆ ಬೀಳ್ಕೂಡುಗೆ ಸಮಾರಂಭವನ್ನುಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಧಾಟಕರಾಗಿ ಆಗಮಿಸಿದ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಸಿ.ಎಸ್. ಮಾಳಗೆ ಕಾನೂನು ವಿದ್ಯಾಥಿಗಳಿಗೆ ಜೀವನದಲ್ಲಿ ಒಳ್ಳೆಯ ಭವಿಷ್ಯವಿದೆ ಎಲ್ಲ ವಿದ್ಯಾಥಿಗಳು ಸ್ನಾತಕೋತ್ತರ ಪದವಿ ಯನ್ನುಹೊಂದಿಬೇಕೆಂದು ಕಿವಿ ಮಾತನ್ನು ಹೇಳಿದರು. ಅತಿಥಿಗಳಾಗಿ ಆಗಮಿಸಿದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಥೀಶರಾದ ಶ್ರೀ.ಕೆ ಶಿವರಾಂ ಅವರು ವಕೀಲರುನ್ಯಾಯಾಲಯದಲ್ಲಿ ವೃತ್ತಿ ನೀತಿ ನಿಯಮಗಳನ್ನು ತಪ್ಪದೇ ಪಾಲಿಸಿದರುಯಶಸ್ವಿ ನ್ಯಾಯಾವಾದಿಗಳಾಗಬೇಕೆಂದು ಹೇಳಿದರು. ಇನ್ನೊರ್ವ ಅತಿಥಿ ಯಾದಕಿರಿಯ ಶ್ರೇಣೆ ನ್ಯಾಯಾಥೀಶರಾದ ಶ್ರೀ ಮತಿ. ಕಾವೇರಿ ಲೇ.ಲೇ ಅವರುಜೀವನದಲ್ಲಿ ಬರುವಂತಹ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯಶಸ್ವಿ ಯಾಗಬೇಕೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಕೆ.ಬಿ.ಬ್ಯಾಳಿ ವಹಿಸಿದ್ದರು.ಪ್ರಾಚಾರ್ಯರಾದ ಡಾ.ಬಿ.ಎಸ್. ಹನಸಿ ಅತಿಥಿಗಳನ್ನು ಸ್ವಾಗತಿಸಿದರು ಕಾಲೇಜಿನವಾರ್ಷಿಕ ವರದಿಯನ್ನು ಉಪನ್ಯಾಸತಿ ಶ್ರೀಮತಿ.ಉಷಾದೇವಿ ಹಿರೇಮಠ ಓದಿದರು.ವಿದ್ಯಾರ್ಥಿಯಾದ ಮೈಲಾರಗೌಡ ನಿರೂಪಿಸಿದರು ಮತ್ತು ಬೆಳ್ಳೆಪ್ಪ ವಂದನಾರ್ಪಣೆನೆರವೇರಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ. ಬಸವರಾಜ ಎಸ್.ಎಮ್. ಎಸ್.ಎಮ್. ಪಾಟೀಲ.ಸಯ್ಯದ ಅಮೀರ ಕುಸ್ಸುರು. ಬಸವರಾಜ ಅಳ್ಳಳ್ಳಿ ಮತ್ತು ಗ್ರಂಥಪಾಲಕರಾದ ರುದ್ರಪ್ಪ ಪೂಜಾರ ಮತ್ತು ಪ್ರಥಮ.ದ್ವಿತೀಯ ಮತ್ತುತೃತೀಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.
Sunday, June 3, 2012
ಕಪ್ಪು ಹಣ ವಾಪಸಾತಿ ,ಭ್ರಷ್ಟಾಚಾರ ನಿರ್ಮೂಲನೆಗೆ ಧರಣಿ ಸತ್ಯಾಗ್ರಹ
ಕೊಪ್ಪಳ. ಜೂ. ೩. ಕೊಪ್ಪಳ ನಗರದ ಅಶೋಕ ವೃತ್ತದ ಸಾಹಿತ್ಯ ಭವನದ ಮುಂದುಗಡೆ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಸೇರಿಸಿಕೊಂಡು ವಿದೇಶದಲ್ಲಿರುವ ಕಪ್ಪು ಹಣ ವಾಪಸಾತಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಧರಣಿ ಸತ್ಯಾಗ್ರಹವನ್ನು ನಡೆಸಿತು.
ಶ್ರೀ ರಾಮದೇವಬಾಬಾ ಮತ್ತು ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿ ನಡೆಯುತ್ತಿರುವ ಹೋರಾಟಕ್ಕೆ ಇಲ್ಲಿನ ಸಮಿತಿ ಹೋರಾಟ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ದೇಶದಲ್ಲಿ ಭ್ರಷ್ಟಾಚಾರಕ್ಕೆ ಮಿತಿಯಿಲ್ಲದಂತೆ ಆಗುತ್ತಿದೆ, ನಮ್ಮ ಜನಪ್ರತಿನಿಧಿಗಳು ಸಂಪೂರ್ಣವಾಗಿ ಲಜ್ಜೆಗೆಟ್ಟಿದ್ದಾರೆ, ಅವರು ನಿಜವಾಗಲು ತಿನ್ನುತ್ತಿರುವದು ಏನು ಎಂದು ತಿಳಿಯದಾಗಿದೆ, ಜನರು ಈಗ ಎಚ್ಚೆತ್ತುಕೊಳ್ಳದಿದ್ದರೆ ದೇಶವನ್ನು ಮಾರುವದರಲ್ಲಿ ಸಂದೇಹವೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸ್ವದೇಶಿ ವಸ್ತುಗಳ ಬಳಕೆ, ವಿಷಯುಕ್ತ ಆಹಾರ ನಿಷೇಧ ಇಂದು ತುರ್ತಾಗಿ ಆಗಬೇಕಿರುವ ಸಂಗತಿ ಎಂದರು.
ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೆಇಬಿ, ಮಾತನಾಡಿ ದೇಶದ ಹಣ ಕೆಲವೇ ಜನರ ಸ್ವತ್ತಾಗಿರುವದು, ಅಭಿವೃದ್ಧಿಗೆ ಬಂದ ಹಣ ಕೇವಲ ಲಂಚಕ್ಕೆ ಹೋಗುತ್ತಿರುವದು ಅನ್ಯಾಯದ ಪರಮಾವಧಿ ಎಂದರು, ಗೋವಿಂದರಾಜು ಮಾತನಾಡಿ, ಬಾಬಾರವರು ೧೫ ವರ್ಷದಿಂದ ಯೋಗ ಸಾಧನೆ ಮಾಡಿ ಜನರ ಆರೋಗ್ಯ ಸುಧಾರಿಸುತ್ತಿದ್ದರು ಇಂದು ಕೆಲವು ವರ್ಷಗಳಿಂದ ದೇಶವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ, ಯುವ ಸಮುದಾಯ ತಮ್ಮ ಭವಿಷ್ಯಕ್ಕಾಗಿ ದೇಶದ ಸೇವೆಗೆ ಬರಬೇಕು ಎಂದರು.
ಮಲ್ಲಿಕಾರ್ಜುನ ನೂಲ್ವಿ ಗಂಗಾವತಿ, ವಿರೇಶ ಬಂಗಾರಶೆಟ್ರ ಕುಷ್ಟಗಿ ಇತರರು ಮಾತನಾಡಿದರು.
ಉಪಾಧ್ಯಕ್ಷ ಭೀಮಸೇನ ಮೇಘರಾಜ, ಪತಂಜಲಿ ಯೋಗ ಸಮಿತಿ ಯುವ ಘಟಕದ ಅಧ್ಯಕ್ಷ ಮಂಜುನಾಥ ಸಜ್ಜನ, ಅಶೋಕಸ್ವಾಮಿ ಹಿರೇಮಠ, ಮಲ್ಲಪ್ಪ ಬೇಲೂರ, ದಿಲೀಪ ಮೇಘರಾಜ, ಡಿಕುಸಾ ಮೇಘರಾಜ, ಅನ್ವರ ಗಂಗಾವತಿ, ರುದ್ರಪ್ಪ ಭಂಡಾರಿ, ಶಿವಮೂರ್ತಿ ಮೇಟಿ, ಶರಣಬಸಪ್ಪ ದಾನಕೈ, ಶಕ್ಷಾವಲಿ ಗಂಗಾವತಿ, ಯಮನೂರಸಾಬ ಗಂಗಾವತಿ, ನಾರಾಯಣಗೌಡ, ಶಿವರಾಮ ಗಂಗಾವತಿ, ಜಂಬಣ್ಣ ದಂಡಿನ್, ರಾಕೇಶ ಕಾಂಬ್ಳೇಕರ, ಎ. ಜಿ. ಹಿರೇಮಠ, ಶಿವಾಜಿ, ಬಸವರಾಜ ಇರಕಲಗಡಾ, ಜಗದೀಶ ಹಿರೇಮಠ ಅನೇಕರು ಇದ್ದರು.
ಮೇಲ್ಜಾತಿಯ ಧ್ರುವೀಕರಣದ ಅಪಾಯ
- ಸನತ್ಕುಮಾರ ಬೆಳಗಲಿ
ಜಾಗತೀಕರಣದ ಝಳದಲ್ಲಿ ಸಾಮಾಜಿಕ ನ್ಯಾಯದ ಆಶಯಗಳು ಕಮರಿ ಹೋಗುತ್ತಿರುವಾಗಲೇ ಜಾತಿ ಧ್ರುವೀಕರಣದ ವ್ಯಾಧಿ ಕರ್ನಾಟಕವನ್ನು ಆವರಿಸತೊಡಗಿದೆ.ಸಮಾಜದ ದಮನಿತ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಒಂದುಗೂಡಲು ತೊಡಗಿದರೆ ಆತಂಕಪಡಬೇಕಾಗಿಲ್ಲ.ಆದರೆ ಆಸ್ತಿ-ಅಂತಸ್ತುಗಳಲ್ಲಿ ಬಲಿಷ್ಠವಾಗಿರುವ ಜಾತಿಗಳು ಒಂದುಗೂಡಲು ತೊಡಗಿದರೆ, ಅದು ಅಪಾಯದ ಮುನ್ಸೂಚನೆ. ರಾಜ್ಯದಲ್ಲಿ ಒಂದೆಡೆ ದುರ್ಬಲ ಜಾತಿಗಳು ಮತ್ತು ವರ್ಗಗಳು ಒಡೆದು ಛಿದ್ರವಾಗುತ್ತಿವೆ. ಶೂದ್ರ ಮತ್ತು ದಲಿತ ಸಂಘಟನೆಗಳ ನಡುವೆ ವಿಭಜನೆಯ ಅಡ್ಡಗೋಡೆ ಎದ್ದುನಿಂತಿದೆ. ಆದರೆ ಬ್ರಾಹ್ಮಣ, ಲಿಂಗಾಯಿತ ಮತ್ತು ಒಕ್ಕಲಿಗರು ಒಳಪಂಗಡಗಳನ್ನು ಬದಿಗೊತ್ತಿ ಒಂದುಗೂಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೇಲ್ಜಾತಿಗಳ ಧ್ರುವೀಕರಣದ ಪ್ರಕ್ರಿಯೆ ಬಿರುಸಾಗಿ ಸಾಗಿದೆ.ಎಲ್ಲೆಡೆ ಈಗ ಜಾತಿ ಸಮಾವೇಶಗಳ ಅಬ್ಬರ ಕೇಳಿ ಬರುತ್ತಿದೆ. ಕಳೆದ ಮೂರು ವಾರಗಳಿಂದ ರಾಜ್ಯದ ಎರಡು ಪ್ರಮುಖ ಜಾತಿಗಳ ಜಗದ್ಗುರುಗಳ ಗುರುವಂದನೆ ಕಾರ್ಯಕ್ರಮ ಒಂದರ ಹಿಂದೆ ಒಂದರಂತೆ ನಡೆಯುತ್ತಿವೆ. ಕಳೆದ ತಿಂಗಳು ತುಮಕೂರಿನಲ್ಲಿ ಸಿದ್ದಗಂಗಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ನಡೆಯಿತು. ನಂತರ ಕೋಲಾರದಲ್ಲಿ ಒಕ್ಕಲಿಗರ ಗುರುತಿಲಕ ಬಾಲಗಂಗಾಧರನಾಥ ಸ್ವಾಮಿಗಳ ಗುರುವಂದನೆ ನಡೆಯಿತು.
ಇದು ಸಾಲದೆಂಬಂತೆ ರಾಜ್ಯ ಒಕ್ಕಲಿಗರ ಸಂಘ ಜೂನ್ 3ರಂದು ಅದೇಅ ಆದಿಚುಂಚನಗಿರಿ ಸ್ವಾಮಿಗಳ ಗುರುವಂದನೆ ಕಾರ್ಯ ಕ್ರಮ ನಡೆಸಿತು. ಇನ್ನೊಂದೆಡೆ ಶಿವಮೊಗ್ಗದಲ್ಲಿ ಬ್ರಾಹ್ಮಣರು ಪೇಜಾವರ ಮತ್ತು ರಾಘವೇಶ್ವರ ಸ್ವಾಮಿಗಳನ್ನು ಮುಂದಿಟ್ಟು ಕೊಂಡು ಸಮಾವೇಶ ನಡೆಸಿ ದರು. ಬಹುಶಃ ವಿಧಾನಸಭೆ ಚುನಾವಣೆಯವರೆಗೆ ಈ ಗುರುವಂದನೆ ಕಾರ್ಯಕ್ರಮ ಗಳು ನಿರಂತರವಾಗಿ ನಡೆಯುವ ಸಂಭವವಿದೆ.
ಹಿಂದುಳಿದ ಜಾತಿ-ಜನವರ್ಗಗಳು ಕೂಡ ಸುಮ್ಮಅನೆ ಕುಳಿತಿಲ್ಲ. ಇತ್ತೀಚೆಗೆ ದಾವಣಗೆರೆಯಲ್ಲಿ ಕುರುಬರ ಸಮ್ಮೇಳನ ನಡೆಯಿತು. ಅಲ್ಲಲ್ಲಿ ಛಲವಾದಿ ಸಮಾವೇಶಗಳು, ಮಾದಿಗ ಮೀಸಲಾತಿ ಹೋರಾಟದ ಸಭೆಗಳು ನಡೆಯುತ್ತಿವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ತಳಪಾಯದಲ್ಲಿರುವ ಈ ಜನಗಳು ಒಂದುಗೂಡಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿಲ್ಲ.ಕುರುಬರ ಸಮಾವೇಶವನ್ನು ಎಲ್ಲ ಹಿಂದುಳಿದ ವರ್ಗಗಳ ಸಮಾವೇಶವನ್ನಾಗಿ ಮಾಡಬಹುದಿತ್ತು.ದಲಿತರು ಬಲಗೈ ಮತ್ತು ಎಡಗೈ ಪಂಗಡಗಳು ಪ್ರತ್ಯೇಕ ಸಭೆ-ಹೋರಾಟಗಳನ್ನು ನಡೆಸುವ ಬದಲು ಒಂದುಗೂಡಿ ತಮ್ಮನ್ನು ಬಾಧಿಸುತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಶೋಷಿತ ವರ್ಗಗಳ ಮತ್ತು ಜಾತಿಗಳಲ್ಲಿ ಛಿದ್ರೀಕರಣದ ಪ್ರಕ್ರಿಯೆ ತೀವ್ರವಾಗಿದೆ.
ಈ ಮೇಲು ಜಾತಿಗಳ ಸಮಾವೇಶಗಳ ಹಿಂದೆ ರಾಜಕೀಯ ಅಧಿಕಾರವನ್ನು ಸ್ವಾಧೀನಪಡಿಸಿ ಕೊಳ್ಳುವ ಮಸಲತ್ತು ಎದ್ದು ಕಾಣುತ್ತಿದೆ. ಯಡಿಯೂರಪ್ಪ ಲಿಂಗಾಯಿತರ ಪ್ರಾತಿನಿಧಿಕ ಸಂಕೇತವಾಗಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಒಕ್ಕಲಿಗ ನಾಯಕರೆಂದು ಬಿಂಬಿಸಲ್ಪಡುತ್ತಿದ್ದಾರೆ. ಇವರೆಲ್ಲರ ಮೇಲೆ ಸವಾರಿ ಮಾಡುವ ವಿಪ್ರರು ತಮ್ಮದೇ ರಹಸ್ಯ ಅಜೆಂಡಾ ಇಟ್ಟುಕೊಂಡು ಆಟವಾಡುತ್ತಿದ್ದಾರೆ. ಈ ಎಲ್ಲ ಧ್ರುವೀಕರಣದ ಹಿಂದೆ ಮಠಾಧೀಶರ ನೇರ ಕೈವಾಡ ಎದ್ದು ಕಾಣುತ್ತದೆ. ಆದರೆ ಈ ಮೇಲ್ಜಾತಿಗಳಲ್ಲಿ ಇರುವ ಬಡವರಿಗೆ ಈ ಜಾತಿ ಸಂಘಟನೆಯಿಂದ ಯಾವುದೇ ಪ್ರಯೋಜನ ವಿಲ್ಲ. ಬೆಳೆ ವಿಫಲವಾಗಿ ಮೇಲ್ಜಾತಿಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಅವರ ಜಾತಿಯ ಸಂಘಟನೆ ಮತ್ತು ಸ್ವಾಮಿಗಳು ನೆರವಿಗೆ ಬರಲಿಲ್ಲ. ಆದರೆ ಅಧಿಕಾರದ ಕುರ್ಚಿ ಹಿಡಿಯಲು ಬಡವರ ಕುತ್ತಿಗೆಗೆ ಜಾತಿಯನ್ನು ಬಿಗಿದು ತಮ್ಮ ಸ್ವಾರ್ಥ ಸಾಧಿಸಲು ಮೇಲ್ಜಾತಿಗಳಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ.ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಒಂದೇ ವೇದಿಕೆಗೆ ತಂದು ಪ್ರಬಲವಾದ ರಾಜಕೀಯ ಶಕ್ತಿಯೊಂದನ್ನು ರೂಪಿಸಿದರು. ಆಗ ಎಡ ಪ್ರಗತಿಪರ ಶಕ್ತಿಗಳನ್ನು ತಮ್ಮ ಜೊತೆಗೆ ಕೂಡಿಸಿಕೊಂಡಿದ್ದರು. ಈ ರಾಜಕೀಯ ಶಕ್ತಿಯ ಮೂಲಕ ಅಧಿಕಾರಕ್ಕೆ ಬಂದು ಭೂ ಸುಧಾರಣೆಯಂತಹ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಹಾವನೂರು ವರದಿ ಅನುಷ್ಠಾನಕ್ಕೆ ಬಂತು ಅಂತಲೇ ರಾಜಕೀಯ ಅಧಿಕಾರ ಕೈತಪ್ಪಿ ಹೋದದ್ದರಿಂದ ರೊಚ್ಚಿಗೆದ್ದ ಲಿಂಗಾಯಿತ ಮತ್ತು ಒಕ್ಕಲಿಗರಲ್ಲಿನ ಮೇಲ್ವರ್ಗಗಳ ಪಟ್ಟಭದ್ರ ಹಿತಾಸಕ್ತಿಗಳು ಅರಸು ಸರಕಾರದ ವಿರುದ್ಧ ಭೂಮಿ ಆಕಾಶ ಒಂದು ಮಾಡಿ ಕೂಗಾಡಿದರು. ಕೈತಪ್ಪಿ ಹೋದ ಅಧಿಕಾರಕ್ಕಾಗಿ ಚಡಪಡಿಸಿದರು.ಅರಸು ನಂತರ ಸಾಮಾಜಿಕ ನ್ಯಾಯದ ಅವನತಿ ಆರಂಭವಾಯಿತು. ತಾವು ತುಂಬ ಭರವಸೆಯಿಟ್ಟು ಬೆಳೆಸಿದ ದಲಿತ ಮತ್ತು ಹಿಂದುಳಿದ ನಾಯಕರು ಕೊನೆಯವರೆಗೂ ತಮ್ಮ ಜಾತಿಗೆ ಉಳಿಯಲಿಲ್ಲ ಎಂಬ ನೋವು ಅರಸರನ್ನು ಸಾಯುವವರೆಗೆ ಬಾಧಿಸಿತು. ಇಂದಿರಾ ಗಾಂಧಿಯವರ ಕೃಪೆಯಿಂದ ಮುಖ್ಯಮಂತ್ರಿಯಾದ ಗುಂಡೂರಾಯರು ರಾಜ್ಯದ ಪ್ರಥಮ ಬ್ರಾಹ್ಮಣ ಮುಖ್ಯಮಂತ್ರಿ ಎನಿಸಿದರು. ಅರಸು ಸಂಪುಟದಲ್ಲಿ ಜೊತೆಗಿದ್ದ ದುರ್ಬಲ ವರ್ಗಗಳ ರಾಜಕಾರಣಿಗಳು ಗುಂಡೂರಾವ್ ಪಾಳಯಕ್ಕೆ ಜಿಗಿದು ಮಂತ್ರಿಗಳಾದರು.
ತೊಂಬತ್ತರ ದಶಕದಲ್ಲಿ ಹಿಂದುತ್ವದ ರಾಜಕಾರಣ ಕರ್ನಾಟಕಕ್ಕೆ ಕಾಲಿರಿಸಿತು. ದೇವರಾಜ ಅರಸು ಒಂದುಗೂಡಿಸಿದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜಾತಿಗಳು ಒಡೆದು ಛಿದ್ರವಾದವು. ಅದರಲ್ಲೂ ಮುಖ್ಯ ವಾಗಿ ಹಿಂದುಳಿದ ಜಾತಿಗಳು ಚೂರುಚೂರಾಗಿ ಕೋಮುವಾದಿ ರಾಜಕಾರಣದ ಬಲೆಗೆ ಬಿದ್ದವು. ಅರಸು ಅವರ ಭೂಸುಧಾರಣಾ ಶಾಸನದ ಪ್ರಯೋಜನ ಪಡೆದ ಕರಾವಳಿ ಮತ್ತು ಮಲೆನಾಡಿನ ಹಿಂದುಳಿದ ಜಾತಿಗಳ ಯುವಕರು ಕೇಸರಿ ಬಾವುಟ ಹಿಡಿದರು. ಇನ್ನೊಂದೆಡೆ ವೀರೇಂದ್ರ ಪಾಟೀಲರ ನಂತರ ನಾಯಕರ ಹುಡುಕಾಟದಲ್ಲಿದ್ದ ಉತ್ತರ ಕರ್ನಾಟಕದ ಲಿಂಗಾಯಿತರು ಯಡಿಯೂರಪ್ಪ ನವರನ್ನುತಮ್ಮ ನಾಯಕನ್ನಾಗಿ ಮುಂದೆ ತಂದು ನಿಲ್ಲಿಸಿದರು. ಬಿಜೆಪಿ ಮೊದಲ ಬಾರಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು.
ಹಿಂದುತ್ವವಾದದಿಂದ ಆರಂಭವಾದ ದಲಿತ- ಹಿಂದುಳಿದ ವರ್ಗಗಳ ಛಿಧ್ರೀಕರಣ ಪ್ರಕ್ರಿಯೆ ಪರವಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಸಂಘ ಪರಿವಾರದ ಸೂತ್ರದ ಗೊಂಬೆಯಂತೆ ಕಾರ್ಯ ನಿರ್ವಹಿಸತೊಡಗಿತು. ಸಾಮಾಜಿಕ ನ್ಯಾಯದ ಆಶಯಗಳು ಸಮಾಧಿಯಾಗಿ ಭಗವದ್ಗೀತೆ ಅಭಿಯಾನ, ಗೋ ಹತ್ಯೆ ನಿಷೇಧ,ಮತಾಂತರ ನಿರ್ಬಂಧ,ಶಾಲಾ ಪಠ್ಯಪುಸ್ತಕಗಳ ಕೇಸರೀಕರಣ ದಂತಹ ತನ್ನ ಕಾರ್ಯಸೂಚಿಯನ್ನು ಆರೆಸ್ಸೆಸ್ ಸರಕಾರದ ಮೂಲಕ ಜಾರಿಗೆ ತರತೊಡಗಿತು. ಕಬಳಿಕೆಯಲ್ಲಿ ಮಾತ್ರ ಅಪಾರ ಆಸಕ್ತಿಯನ್ನು ಹೊಂದಿದ್ದ ಯಡಿಯೂರಪ್ಪ ಅವರಿಗೆ ಇದ್ಯಾವುದೂ ಅಪಾಯಕಾರಿ ಅನ್ನಿಸಲಿಲ್ಲ. ಆರೆಸ್ಸೆಸ್ ಶಾಖೆಯಲ್ಲಿ ಬೆಳೆದ ಯಡಿಯೂರಪ್ಪನವರಿಗೆ ಈ ಅಜೆಂಡಾ ಜಾರಿಗೆ ಅಡ್ಡಿಯಾಗಲಿಲ್ಲ.
ಬರೀ ನುಂಗುವುದರಲ್ಲಿ ತೊಡಗಿ ನುಂಗಿದ್ದನ್ನು ದಕ್ಕಿಸಿಕೊಳ್ಳಲಾಗದೇ ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ.ಯಡಿಯೂರಪ್ಪ ಜಾಗದಲ್ಲಿ ಮುಖ್ಯಮಂತ್ರಿ ಯಾಗಿರುವ ಸದಾನಂದ ಗೌಡರಿಗೆ ತಮ್ಮ ಕುರ್ಚಿಯನ್ನು ಉಳಿಸಿ ಕೊಳ್ಳಲು ಒಕ್ಕಲಿಗ ಎಂಬ ಜಾತಿಯ ಅಸ್ತ್ರ ಬೇಕಾಗಿದೆ. ಈ ಗೌಡರನ್ನು ಮುಂದಿಟ್ಟುಕೊಂಡು ತಮ್ಮ ಲೂಟಿಯನ್ನು ಮುಂದುವರೆಸಲು ಹೊರಟಿರುವ ಪಟ್ಟಭದ್ರ ಹಿತಾಸಕ್ತಿಗಳಿಗೂ ಕೂಡ ಜಾತಿಯ ರಕ್ಷಾಕವಚ ಬೇಕಾಗಿದೆ. ಅದಕ್ಕಾಗಿ ಗುರುವಂದನೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಮಾವೇಶ ನಡೆಸು ತ್ತಿದ್ದಾರೆ. ಪಕ್ಷಬೇಧವಿಲ್ಲದೇ ಒಕ್ಕಲಿಗ ರೆಲ್ಲ ಒಂದು ಎಂದು ತೋರಿಸಲು ದೇವೇಗೌಡ, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ, ಸದಾನಂದಗೌಡ, ಅಶೋಕ್, ಅಂಬರೀಶ, ಡಿಕೆಶಿ ಇವರೆಲ್ಲ ಫೋಟೋ ಹಾಕಿ ಪ್ರಚಾರ ಮಾಡುತ್ತಿದ್ದಾರೆ.
ವೈ.ಸಂಪಂಗಿ ಈಗ ಕೈದಿ ನಂ.5627
ಲಂಚ ಸ್ವೀಕಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೆಜಿಎಫ್ ಶಾಸಕ ವೈ.ಸಂಪಂಗಿ ಈಗ ಕೈದಿ ನಂ.5627.ಸಜಾ ಬಂಧಿಯಾಗಿರುವ ವೈ.ಸಂಪಂಗಿ ಮನೆಯ ಊಟಕ್ಕೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಎಲ್ಲ ಕೈಅಗಳಿಗೆ ನೀಡುವ ಊಟವನ್ನು ಅವರು ಸೇವಿಸಿದ್ದಾರೆ. ಕೈದಿಗಳಂತೆಯೇ ಸಮವಸ್ತ್ರ ಧರಿಸಿರುವ ಸಂಪಂಗಿ, ಸಹ ಕೈದಿಗಳೊಂದಿಗೆ ಯಾವುದೇ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.ನಿವೇಶನ ವಿವಾದ ಬಗೆಹರಿಸುವ ಸಂಬಂಧ ಲಂಚ ಸ್ವೀಕಾರ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯ ನಿನ್ನೆಯೆಷ್ಟೇ ಶಾಸಕ ಸಂಪಂಗಿಗೆ ಮೂರುವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1ಲಕ್ಷ ರೂ.ಅದಂಡ ವಿಧಿಸಿ ತೀರ್ಪು ನೀಡಿತ್ತು.
ಮೂಲ ಕಾಂಗ್ರೆಸಿಗರಿಗೆ ಸೂಕ್ತ ಸ್ಥಾನಮಾನ ನೀಡಿ
ದಾವಣಗೆರೆಯಲ್ಲಿ ರಾಹುಲ್ ಗಾಂಧಿ ಫರ್ಮಾನು
ದಾವಣಗೆರೆ, ಜೂ.೩: ಪದೇ ಪದೇ ಪಕ್ಷ ಬದಲಿಸುವವರಿಗೆ ಆದ್ಯತೆ ನೀಡಬೇಡಿ, ಮೂಲ ಕಾಂಗ್ರೆಸ್ಸಿಗರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ, ಮೂರು ಬಾರಿ ಚುಅವಣೆಯಲ್ಲಿ ಸೋತವರಿಗೆ ಟಿಕೆಟ್ ಕೊಡಬೇಡಿ ಇದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ನೀಡಿದ ಫರ್ಮಾನು.ಅವರು ಹುಬ್ಬಳ್ಳಿಯಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕಾರಿಣಿಯ ಬಳಿಕ ಇಂದು ಕರ್ನಾಟಕದ ಮ್ಯಾನ್ಚೆಸ್ಟರ್ ಎಂದೇ ಖ್ಯಾತವಾದ ದಾವಣಗೆರೆಗೆ ಆಗಮಿಸಿದರು. ಸ್ಥಳೀಯ ಸಂಸ್ಥೆಗಳ ಪಕ್ಷದ ಚುನಾಯಿತ ಪ್ರತಿನಿಧಿಗಳೊಂದಿಗೆ ಒಂದು ಗಂಟೆಗಳಿಗೂ ಹೆಚ್ಚುಕಾಲ ಸಂವಾದ ನಡೆಸಿದ ಅವರು, ಪಕ್ಷದ ನಾಯಕರ ಒಳ ಜಗಳದಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಒಗ್ಗಟ್ಟಿನಿಂದ ಕಾರ್ಯೋನ್ಮುಖರಾಗಿ ಎಂದು ತಿಳಿಯ ಹೇಳಿದರು.ಪಕ್ಷದಲ್ಲಿ ಹಿರಿಯ-ಕಿರಿಯ ನಾಯಕರೆಂಬ ಭೇದ-ಭಾವ ಮಾಡದೆ ನಾವೆಲ್ಲರೂ ಕಾಂಗ್ರೆಸ್ಸಿಗರೆಂಬ ಭಾವನೆಯಿಂದ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ ಎಂದು ರಾಹುಲ್ ಗಾಂಧಿ ತಿಳಿಸಿದರು.
ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂದಿನ ಆರು ತಿಂಗಳುಗಳಲ್ಲಿಯೇ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು, ಇದರಿಂದ ಪೂರ್ವಭಾವಿಯಾಗಿ ಚುನಾವಣಾ ಪ್ರಚಾರ ನಡೆಸಲು ಮತ್ತು ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಕೆಲವು ನಾಯಕರು ಹಾಗೂ ಕಾರ್ಯಕರ್ತರು ಪಕ್ಷದ ಅಧಿಕತ ಅಭ್ಯರ್ಥಿಗಳೇ ಸೋಲುವಂತೆ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಹುಲ್ಗಾಂಧಿ, ನಮ್ಮ ನಮ್ಮ ಕಚ್ಚಾಟದ ಲಾಭವನ್ನು ಮೂರನೆಯವರು ಪಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಹಂಚಿಕೆಯಿಂದ ತಲೆದೋರುವ ಭಿನ್ನಾಭಿಪ್ರಾಯಗಳನ್ನು ನಿವಾರಣೆ ಮಾಡುವ ಸಲುವಾಗಿಯೇ ಚುನಾವಣೆಗೆ 6 ತಿಂಗಳ ಮೊದಲೇ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದ ಅವರು, ಪಕ್ಷದಿಂದ ಪಕ್ಷಕ್ಕೆ ಪದೇ ಪದೇ ಹಾರುವವರಿಗೆ, ಮೂರು ಬಾರು ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡದಂತೆ ಪಕ್ಷದ ರಾಜ್ಯ ನಾಯಕರಿಗೆ ತಾಕೀತು ಮಾಡಿದರು.ಜನರಿಗೆ ತಲುಪಿಸಿ: ಕೇಂದ್ರ ಸರಕಾರ ಶ್ರೀಸಾಮಾನ್ಯರ ಒಳಿತಿಗಾಗಿ ನೂರಾರು ಜನಪರ ಕಾರ್ಯಕ್ರಮ ರೂಪಿಸಿದೆ.
ಈ ಎಲ್ಲ ಕಾರ್ಯಕ್ರಮಗಳ ಲಾಭ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿ ಎಂದು ಅವರು ಇದೇ ಸಂದರ್ಭದಲ್ಲಿ ಪಕ್ಷದ ಜನಪ್ರತಿನಿಧಿಗಳಿಗೆ ಕರೆ ನೀಡಿದರು.ರಾಜ್ಯ ಸರಕಾರ ಕೇಂದ್ರದ ಯೋಜನೆಗಳನ್ನು ತನ್ನದೆಂದು ಬಿಂಬಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ,ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿರುವ ಮಧುಸೂದನ್ ಮಿಸ್ತ್ರಿ, ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ,ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಈ ಸಭೆಯಲ್ಲಿ ಹಾಜರಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
Saturday, June 2, 2012
ಶಾಸಕ ಸಂಪಂಗಿಗೆ ಮೂರುವರೆ ವರ್ಷ ಜೈಲು ಶಿಕ್ಷೆ
ಲಂಚ ಸ್ವೀಕಾರ:
ಬೆಂಗಳೂರು, ಜೂ.2: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿ ಕೆಜಿಎಫ್ನ ಬಿಜೆಪಿ ಶಾಸಕ ವೈ.ಸಂಪಂಗಿಯನ್ನು ತಪ್ಪಿತಸ್ಥ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಅವರಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಜಮೀನು ವಿವಾದದ ಪ್ರಕರಣ ಇತ್ಯರ್ಥಕ್ಕೆ ಸಂಬಂಧಿಸಿ ಉದ್ಯಮಿ ಹುಸೈನ್ ಮೊಯಿನ್ ಫಾರೂಕ್ರಿಂದ ಲಂಚ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಶಾಸಕ ಸಂಪಂಗಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ವಿಚಾರಣೆಯನ್ನು ಮುಗಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಲೋಕಾಯುಕ್ತ ವಿಶೇಷ ನ್ಯಾಯಮೂರ್ತಿ ಎನ್.ಕೆ.ಸುದೀಂದ್ರ ರಾವ್, ಲಂಚ ಸ್ವೀಕಾರ ಪ್ರಕರಣದಲ್ಲಿ ಸಂಪಂಗಿ ತಪ್ಪಿತಸ್ಥ ಎಂದು ತೀರ್ಪು ನೀಡಿದರು ಹಾಗೂ ಸಂಪಂಗಿಗೆ ಒಂದು ಲಕ್ಷ ರೂ. ದಂಡ ಹಾಗೂ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು.
ನ್ಯಾಯಾಧೀಶರು ತೀರ್ಪು ಘೋಷಿಸುತ್ತಿದ್ದಂತೆಯೇ ನ್ಯಾಯಾಲಯದಲ್ಲೇ ಇದ್ದ ಶಾಸಕ ಸಂಪಂಗಿ ಬಿಕ್ಕಿ, ಬಿಕ್ಕಿ ಅತ್ತರು. ಆ ಸಂದರ್ಭ ಅವರನ್ನು ಅವರ ತಾಯಿ ಸಮಾಧಾನಿಸಿದರು.
ಈ ಪ್ರಕರಣದ ಎರಡನೆ ಆರೋಪಿ ಮುಸ್ತಾಫ ಪಾಷನನ್ನು ನ್ಯಾಯಾಲಯ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಬಳಿಕ ಸಂಪಂಗಿಯನ್ನು ವಶಕ್ಕೆ ತೆಗೆದುಕೊಂಡಿರುವ ಲೋಕಾಯುಕ್ತ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.
ಏನಿದು ಪ್ರಕರಣ: 2009ರಲ್ಲಿ ಉದ್ಯಮಿ ಹುಸೈನ್ ಮೊಯಿನ್ ಫಾರೂಕ್ ವಿರುದ್ಧ ಜಮೀನು ವಿವಾದ ಸಂಬಂಧ ಕೆಜಿಎಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಇತ್ಯರ್ಥಕ್ಕೆ ಸಂಪಂಗಿ ಫಾರೂಕ್ನಿಂದ 5ಲಕ್ಷ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿತ್ತು. ಈ ಬಗ್ಗೆ ಫಾರೂಕ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಇದರಂತೆ 50 ಸಾವಿರ ನಗದು ಮತ್ತು 4.50 ಲಕ್ಷ ರೂ.ಗಳ ಚೆಕ್ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಶಾಸಕರ ಭವನದಲ್ಲೇ ಸಂಪಂಗಿಯನ್ನು ಬಂಧಿಸಿದ್ದರು.
ಬಳಿಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ, ಅವರು ಅನಾರೋಗ್ಯದ ನೆಪದಲ್ಲಿ ಜಯದೇವ, ನಿಮಾನ್ಸ್ ಆಸ್ಪತ್ರೆಗೆ ಸಂಪಂಗಿ ದಾಖಲಾಗಿದ್ದರು. ಆಸ್ಪತ್ರೆಯಲ್ಲೇ ಇದ್ದುಕೊಂಡೇ 2009 ಫೆ.3ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದುಕೊಂಡಿದ್ದರು.
ಈ ಪ್ರಕರಣದ ವಿಚಾರಣೆ ಮೇ 22ಕ್ಕೆ ಪೂರ್ಣಗೊಂಡಿತ್ತು. ಇದರ ತೀರ್ಪನ್ನು ಜೂ.2ಕ್ಕೆ ಕಾಯ್ದಿರಿಸಲಾಗಿತ್ತು.
ಕೊಪ್ಪಳದಲ್ಲಿ ನಾಲ್ವರು ಬಾಲಕಾರ್ಮಿಕರ ರಕ್ಷಣೆ
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಮಕ್ಕಳ ರಕ್ಷಣಾ ಘಟಕ ಶನಿವಾರ ಕೊಪ್ಪಳ ನಗರದ ವಿವಿಧೆಡೆ ಜಂಟಿ ಕಾರ್ಯಾಚರಣೆ ನಡೆಸಿ, ನಾಲ್ವರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ರಕ್ಷಿಸಿದೆ.
ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಎಫ್ಸಿಐ ಗೋದಾಮು ಹತ್ತಿರ ಚಿಂದಿ ಆಯುತ್ತಿದ್ದ ೧೦ ವರ್ಷ ವಯಸ್ಸಿನ ದುರ್ಗಮ್ಮ ತಂದೆ ಬಸವರಾಜ ಭಜಂತ್ರಿ, ೬ ವರ್ಷ ವಯಸ್ಸಿನ ನಾಗಮ್ಮ ತಂದೆ ಬಸವರಾಜ ಭಜಂತ್ರಿ, ೮ ವರ್ಷ ವಯಸ್ಸಿನ ಮಾರುತಿ ತಂದೆ ಬಸಪ್ಪ ಅಲ್ಲದೆ ನಗರದ ಗದಗ ರಸ್ತೆಯಲ್ಲಿರುವ ಆರ್ಡಿಸಿಸಿ ಬ್ಯಾಂಕ್ಯ ಮುಂಭಾಗದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ೯ ವರ್ಷ ವಯಸ್ಸಿನ ರವಿ ತಂದೆ ಸಿದ್ಲಿಂಗಪ್ಪ ಗೌಳಿಕೇರಿ ಸೇರಿದಂತೆ ನಾಲ್ವರು ಬಾಲಕರನ್ನು ಪತ್ತೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಎಂ. ಅವರ ಮುಂದೆ ಹಾಜರು ಪಡಿಸಲಾಯಿತು. ನಂತರ ಬಾಲಕೀಯರ ಬಾಲಮಂದಿರ ಹಾಗೂ ಬಾಲಕರ ಬಾಲಮಂದಿರದಲ್ಲಿ ರಕ್ಷಣೆಗಾಗಿ ಸೇರಿಸಲಾಗಿದೆ. ಪೋಷಕರ ಒಪ್ಪಿಗೆ ಪಡೆದು ಹಾಗೂ ಶಾಲಾ ದಾಖಲಾತಿ ಪರಿಶೀಲಿಸಿ ಜಿಲ್ಲಾ ಬಾಲಕಾರ್ಮಿಕ ವಿಶೇಷ ಶಾಲೆಗೆ ದಾಖಲಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್ರ, ಕ್ಷೇತ್ರಾಧಿಕಾರಿಗಳಾದ ವೀರಣ್ಣ ಕುಂಬಾರ, ಮಾರುತಿ ಎನ್. ಅಕೌಂಟೆಂಟ್ ಮಂಜುನಾಥ ವಣಗೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ, ಮಹಮದ್ ಹುಸೇನ್ ಪೀರಾ, ತಾಹೇರ್ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.ಪ್ರಥಮ ಅಖಿಲ ಕರ್ನಾಟಕ ಸಾಂಸ್ಕೃತಿಕ ಉತ್ಸವ
: ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಸಮ್ಮೇಳನದಲ್ಲಿ ಚಿತ್ರರಂಗದ ಕಣ್ಮಣಿ ದ್ವಾರಕೀಶ ಗೆ ೭೦ ಅಭಿನಂದನೆ
ಕೊಪ್ಪಳ. ಜೂ ೨, ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವದ ಸಮ್ಮೇಳನಾಧ್ಯಕ್ಷ ರಮೇಶ ಸುರ್ವೆಯವರನ್ನು ಶಾಲುಹೊದಿಸಿ ಆಹ್ವಾನಿಸಲಾಯಿತು.
ಈ ಕುರಿತು ಪ್ರಕಟಣೆ ನೀಡಿರುವ ಸಮ್ಮೇಳನದ ಪ್ರಧಾನ ಸಂಯೋಜಕ ಮಂಜುನಾಥ ಜಿ. ಗೊಂಡಬಾಳ ಅವರು, ಪತ್ರಕರ್ತರು, ಚಲನಚಿತ್ರ ನಿರ್ದೆಶಕರು, ಸಾಂಸ್ಕೃತಿಕ ಸಂಘಟಕ ರಮೇಶ ಸುರ್ವೆರವರು ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಚುನಾವಣೆಗಳು ಮತ್ತು ಶಾಲಾ ಕಾಲೇಜುಗಳ ಪ್ರಾರಂಭೋತ್ಸವದ ಕಾರಣಗಳಿಂದ ಜೂನ್ ೯ ಮತ್ತು ೧೦ ರ ಬದಲಾಗಿ ಜುಲೈ ೧೩, ೧೪ ಮತ್ತು ೧೫ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.
ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ಉಪಹಾರ ಮತ್ತು ಮದ್ಯಾಹ್ನದ ಊಟದ ವ್ಯವಸ್ಥೆ ಮತ್ತು ಸಮ್ಮೇಳನದ ನೆನಪಲ್ಲಿ ಸ್ಮರಣ ಸಂಚಿಕೆ ತರುವದು, ಕೆಲವು ಪುಸ್ತಕಗಳನ್ನು ಬಿಡುಗಡೆಗೊಳಿಸುವದು ಸೇರಿದಂತೆ ಮೂರು ಬಹುಭಾಷಾ ಕವಿಗೋಷ್ಠಿಗಳು, ಎರಡು ಕನ್ನಡ ಕವಿಗಳ ಗೋಷ್ಠಿಗಳು ಮತ್ತು ಎರಡು ಸಾಹಿತ್ಯ ಗೋಷ್ಠಿಗಳು ಸೇರಿದಂತೆ ನಾಲ್ಕು ಸಾಂಸ್ಕೃತಿಕ ಗೋಷ್ಠಿಗಳು ಇರುತ್ತವೆ ಮೂರು ದಿನಗಳ ಕಾಲ ಸಾಹಿತ್ಯ ಮತ್ತು ಸಾಂಸ್ಕೃತಿಕ ನಿನಾದ ಜಿಲ್ಲೆಯ ಜನರಿಗೆ ಸಿಗಲಿದೆ ಜೊತೆಗೆ ರಾಜ್ಯದ ವಿವಿಧ ಭಾಷಿಕ ಜನರಿಗೆ ಕನ್ನಡದ ಕುರಿತು ಕಾಳಜಿ ಪ್ರೀತಿ ಹುಟ್ಟಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಚಿತ್ರರಂಗದ ಕಣ್ಮಣಿ ದ್ವಾರಕೀಶ ಗೆ ೭೦ ಅಭಿನಂದನೆ : ಸಮ್ಮೇಳನದಲ್ಲಿ ಕನ್ನಡ ಚಿತ್ರರಂಗದ ಕಣ್ಮಣಿ, ಕುಳ್ಳ ಖ್ಯಾತಿಯ ನಟ, ನಿರ್ದೇಶಕ, ನಿರ್ಮಾಪಕ ಬಿ. ಎಸ್. ದ್ವಾರಕೀಶ್ ರವರಿಗೆ ಅವರು ೭೦ ವರ್ಷ ಪೂರೈಸಿದ ಸಂದರ್ಭದಲ್ಲಿ ಹಾಗೂ ಚಿತ್ರ ರಂಗದಲ್ಲಿ ೪೦ ವರ್ಷ ಸಲ್ಲಿಸಿದ ಸೇವೆಯನ್ನು ಗೌರವಿಸಲು ವಿಶ್ವಜ್ಯೋತಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ನೀಡಿ ಅಭಿನಂದಿಸಲಾಗುವದು ಎಂದು ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ.
ಸಭೆಯಲ್ಲಿ ಮಾಜಿ ಕಸಾಪ ಅಧ್ಯಕ್ಷ ಜಿ.ಎಸ್.ಗೋನಾಳ, ಶಿವಾನಂದ ಹೊದ್ಲೂರ, ಶ್ರೀನಿವಾಸ ಚಿತ್ರಗಾರ, ವೈ. ಬಿ. ಜೂಡಿ, ಹನುಮಂತರಾವ್ ಎಂ. ಎ., ಶರಣಗೌಡ ಯದೊಡ್ಡಿ, ವಿಠ್ಠಲ ಮಾಲಿಪಾಟೀಲ, ಶಿವಮೂರ್ತಿ ಮೇಟಿ ಇತರರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕವಿಗೋಷ್ಠಿ ಗೆ ಹೆಸರು ನೊಂದಾಯಿಸಲು ಮತ್ತೊಂದು ಅವಕಾಶ : ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಛೆಯುಳ್ಳ ರಾಜ್ಯದ ಕಲಾವಿದರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ರಾಜ್ಯ ಎಲ್ಲಾ ಜಿಲ್ಲೆಗಳ ಕವಿಗಳು ತಮ್ಮ ಆಸಕ್ತಿಯನ್ನು ಜೂನ ೧೨ ರೊಳಗೆ ಹೆಸರು ನೊಂದಾಯಿಸಿಕೊಂಡು ರಾಜ್ಯಮಟ್ಟದ ಬಹುಭಾಷಾ ಕವಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವರು ವಿನಂತಿಸಿದ್ದಾರೆ. ಪಾಲ್ಗೊಂಡ ಕಲಾವಿದರಿಗೆ ಮತ್ತು ಕವಿಗಳಿಗೆ ವಿಶ್ವಜ್ಯೋತಿ ರಾಷ್ಟ್ರಮಟ್ಟದ ಪ್ರಶಸ್ತಿ ಮತ್ತು ಕರ್ನಾಟಕ ಜ್ಯೋತಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುವದು ಎಂದು ಗೊಂಡಬಾಳ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ : ೯೮೪೫೩೦೭೩೨೭, ೯೪೪೮೩೦೦೦೭೦.
ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿಮಲಾ ಇನಾಮದಾರ
ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿಮಲಾ ಇನಾಮದಾರ ಆಯ್ಕೆ
ಕೊಪ್ಪಳ : ಆಗಷ್ಟನಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕೊಪ್ಪಳ ತಾಲೂಕಿನ ಕೇಸಲಾಪೂರದ ಸಾಹಿತಿ ವಿಮಲಾ ಇನಾಮದಾರರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ವಿಮಲಾ ಇನಾಮದಾರ ರವರು ೧೯೭೯ ರಲ್ಲಿ ಹೊಂಬಳಕು, ೧೯೮೪ ರಲ್ಲಿ ಮಾಂಗಲ್ಯ ಭಾಗ್ಯ ೧೯೯೩ ರಲ್ಲಿ ಮಿನುಗುತಾರೆ ಎಂಬ ಸಾಮಾಜಿಕ ಕಾದಂಬರಿಗಳನ್ನು , ೨೦೦೧ ರಲ್ಲಿ ಚುರುಕು ಚುಟುಕು ಹನಿಗವನ ಸಂಕಲನ, ೨೦೦೧ ರಲ್ಲಿ ಮಲ್ಲಿಗೆ ಮಾಲೆ ಸ್ವರಚಿತ ಜಾನಪದ ಗೀತೆಗಳು, ೨೦೦೩ ರಲ್ಲಿ ಬಿದಿಗೆಯ ಚಂದ್ರ ಮಕ್ಕಳ ಹಾಡುಗಳು, ೨೦೦೩ ರಲ್ಲಿ ಹಾಡ ಬರೆದೆನವ್ವಾ ಕವನ ಸಂಕಲನ, ೨೦೦೬ ರಲ್ಲಿ ಮಾಧುರ್ಯ ಕವನ ಸಂಕಲನ ೨೦೧೦ ರಲ್ಲಿ ಅರಳು ಮಲ್ಲಿಗೆ ಕವನ ಸಂಕಲನ ಹೊರತಂದಿದ್ದಾರೆ.
ಪ್ರಜಾಮತ, ವನಿತಾ, ಗೃಹಶೋಭಾ, ವಿಜಯ ಕರ್ನಾಟಕ, ಕನ್ನಡ ಪ್ರಭ , ಕರ್ಮವೀರ, ತರಂಗ, ತಳಮಳ, ಬಿಸಿಲ ಬದುಕು, ಪ್ರಿಯಾಂಕ, ವಿಶ್ವವಾಣಿ, ತುಷಾರ, ಮಯೂರ ಮುಂತಾದ ಪತ್ರಿಕೆಯಲ್ಲಿ ಇವರ ಕವನ, ಲೇಖನಗಳು ಪ್ರಕಟಗೊಂಡಿವೆ.
೨೦೧೦ ರಲ್ಲಿ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ೨೦೧೧ ರಲ್ಲಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ,
೨೦೧೦-೧೧ ನೇ ಸಾಲಿನ ಸಾಹಿತ್ಯ ಕ್ಷೇತ್ರದಲ್ಲಿ ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿ ಲಭಿಸಿದೆ.
ಒಟ್ಟಾರೆಯಾಗಿ ಇವರು ಸಮಗ್ರ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ಸಾಣೆಹಳ್ಳಿಯಲ್ಲಿ ರಂಗಶಿಕ್ಷಣ ಡಿಪ್ಲೋಮಾ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಸಾಣೆಹಳ್ಳಿಯಲ್ಲಿರುವ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ಒಂದು ವರ್ಷ ಅವಧಿಯ ರಂಗಶಿಕ್ಷಣ ಡಿಪ್ಲೋಮಾ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೋಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಎಸ್ಎಸ್ಎಲ್ಸಿ, ಪದವೀಧರರಿಗೆ ಆದ್ಯತೆಯಿದೆ. ತರಬೇತಿ ಅವಧಿಯಲ್ಲಿ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ. ಈ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ, ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು, ಕಳರಿ, ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆಮೇಳ, ವೀರಗಾಸೆ, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮುಂತಾದ ಕಾರ್ಯಾಗಾರಗಳ ಜೊತೆಗೆ ಕಾವ್ಯ, ಸಿನಿಮಾ, ಚಿತ್ರಕಲೆ ಕುರಿತಾದ ಕಮ್ಮಟಗಳು ನಡೆಯುತ್ತವೆ. ಒಂದು ವರ್ಷದ ಅವಧಿಯಲ್ಲಿ ನಾಲ್ಕರಿಂದ ಐದು ನಾಟಕಗಳ ಅಭ್ಯಾಸ ಹಾಗೂ ಪ್ರದರ್ಶನ ನಡೆಯುತ್ತದೆ. ಆಸಕ್ತರು ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲಾ, ಸಾಣೇಹಳ್ಳಿ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಬರೆದು, ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದು. ಜು. ೨ ರಂದು ಬೆಳಿಗ್ಗೆ ೧೦ ಗಂಟೆಗೆ ಸಾಣೇಹಳ್ಳಿ ರಂಗಪ್ರಯೋಗ ಶಾಲೆಯಲ್ಲಿ ಸಂದರ್ಶನ ನಡೆಯಲಿದೆ. ಜು. ೧೫ ರಿಂದ ತರಗತಿಗಳು ಪ್ರಾರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ೦೮೧೯೯- ೨೪೩೭೭೨, ಮೊಬೈಲ್- ೯೪೪೮೩೯೮೧೪೪ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯ ನಟರಾಜ ಹೊನ್ನವಳ್ಳಿ ಅವರು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಜೂ. ೫ ರಂದು ವಿಶ್ವ ಪರಿಸರ ದಿನಾಚರಣೆ : ಯಕ್ಷಗಾನ ಕಾರ್ಯಕ್ರಮ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವೋದಯ ಸಮಗ್ರ ಗ್ರಾಮಿಣ ಅಭಿವೃದ್ಧಿ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ. ೫ ರಂದು ಕೊಪ್ಪಳದಲ್ಲಿ ಯಕ್ಷಗಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ ೧೦-೩೦ ಗಂಟೆಗೆ ಹೊಸಪೇಟೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಲಿದೆ. ನಂತರ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಪರಿಸರ ಜಾಗೃತಿ ಕುರಿತ ಸಮಾರಂಭ ನಡೆಯಲಿದ್ದು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್. ಭಾಂಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಕುರಿತಂತೆ ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಜಿ. ಹೆಗಡೆ ಮತ್ತು ಸಂಗಡಿಗರಿಂದ ಪರಿಸರ ವಿಜಯ ಎಂಬ ಪರಿಸರ ಜಾಗೃತಿ ಕುರಿತ ಯಕ್ಷಗಾನ ಕಾರ್ಯಕ್ರಮ ನೆರವೇರಲಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಎಂ. ಶ್ರೀಧರ ಅವರು ತಿಳಿಸಿದ್ದಾರೆ.
Friday, June 1, 2012
ವರುಣನ ಕೃಪೆಗಾಗಿ ಬಾಲ ಮಕ್ಕಳಿಂದ ಭಜನೆ
ಕೊಪ್ಪಳ ಜೂ: ಮುನಿಸಿಕೊಂಡ ಮಳೆರಾಯನ ಆಗಮನಕ್ಕೆ ತಾಲೂಕಿನ ಓಜನಹಳ್ಳಿ ಗ್ರಾಮದ ಬಾಲಮಕ್ಕಳು ಒಂಭತ್ತು ದಿನಗಳಕಾಲ ಶ್ರದ್ಧ್ದೆ ಭಕ್ತಿಯಿಂದ ಪ್ರತಿದಿನ ಬೆಳಿಗಿನ ಜಾವ ಐದುಗಂಟೆಗೆ ಹಾಗೂ ಸಂಜೆ ಐದುಗಂಟೆಗೆ ಮಡಿ-ಹುಡಿಯಿಂದ ಸ್ನಾನ ಮಾಡಿ, ಗ್ರಾಮದಲ್ಲಿರುವ ಎಲ್ಲಾ ದೇವರಿಗೆ ದೀಪ ಬೆಳಗಿಸುವ ಮೂಲಕ ಬೇಗ ಬಾರೋ ಮಳೆರಾಯ ಎಂದು ಪ್ರಾರ್ಥಿಸಿಕೊಂಡರು. ಈ ಮಕ್ಕಳಿಗೆ ಗ್ರಾಮದ ಹಿರಿಯರಾದ ಹುಸೇನ್ಪಾಷಾ ಟೇಲರ್, ಸಿದ್ಧಪ್ಪ ಕಾಟ್ರಳ್ಳಿ ಮುಂತಾದವರು ಪ್ರೋತ್ಸಾಹಿಸಿದ್ದಾರೆ ಎಂದು ಕಲಾತಂಡದ ನಾಯಕ ಶಿವಮೂರ್ತಿ ಮೇಟಿತಿಳಿಸಿದ್ದಾರೆ.
ಜಾನು ಚಿತ್ರ ವಿಮರ್ಶೆ
ಅರ್ಧ ಪಯಣ, ಇನ್ನರ್ಧ ಹೈರಾಣಾ!
ಕೆಲವು ಸಲ ಯಾರ್ಯಾರೋ ಯಾರದೋ ಹಿಂದೆ ಯಾಕೆ ಬಿಳ್ತಾರೆ ಅಂತ ಗೊತ್ತಾಗಲ್ಲ ಬಿಡ್ರಿ ಅಂತ ಒಂದು ದೃಶ್ಯದಲ್ಲಿ ನಾಯಕ ಸಿದ್ದು ಜಾನುವಿನೊಂದಿಗೆ ಮದುವೆ ನಿಶ್ಚಯವಾಗಲಿರುವ ಹುಡುಗನಿಗೆ ಹೇಳುತ್ತಾನೆ. ಹಾಗೆಯೇ ಪ್ರೀತಂ ಗುಬ್ಬಿ ಈಗಾಗಲೇ ಆಗಾಗ ನೋಡಿರುವ ಕೆಲ ಸಿನಿಮಾಗಳ ಹಿಂದೆ ಬಿದ್ದು ಕತೆ ಮಾಡಿದಂತಿದೆ. ಆದರೆ ಪ್ರೇಕ್ಷಕರಿಗೆ ಒಂದೊಂದೂ ಸೀನು `ಇದು ಆ ಸಿನಿಮಾದಲ್ಲಿದ್ದಂತೆ ಇದೆ. ಈ ಸಿನಿಮಾದಲ್ಲಿದ್ದಂತೇ ಇದೆ' ಎಂಬುದು ಗೊತ್ತಾಗಿಬಿಡುತ್ತದೆ. ಚಿತ್ರದ ಮೊದಲರ್ಧ ಮೆರವಣಿಗೆ, ಚಿರುವಿನ ಕತೆ ನೆನಪಿಸಿದರೆ, ಉಳಿದರ್ಧ ಮರ್ಯಾದೆ ರಾಮಣ್ಣ, ಸಾರಥಿ, ಪರಮಾತ್ಮನ ಕತೆಯನ್ನು ಮಿಕ್ಸ ಮಾಡಿ ಕೊಟ್ಟಂತೆ ಕಾಣುತ್ತದೆ.
ಆದರೂ ಜಾನು ಸಿನಿಮಾ ಬೋರ್ ಹೊಡೆಸದಂತೆ ನಿರೂಪಿಸಿರುವುದು ನಿರ್ದೇಶಕರ ಜಾಣ್ಮೆ ಎನ್ನಲಡ್ಡಿಯಿಲ್ಲ. ಬಯಲುಸೀಮೆಯ ತಿಂಡಿಪೋತಿ ಹುಡುಗಿ ಜಾನು ಊರನ್ನೆ ನಡುಗಿಸುವ ಗೌಡನ ಮಗಳು. ಮೈಸೂರು ದಸರಾ ನೋಡಲು ಮನೆಯಲ್ಲಿ ಯಾರಿಗೂ ಹೇಳದೇ, ಕೇಳದೇ ಪ್ರೀತಿಸಿದ ಹುಡುಗನೊಂದಿಗೆ ಓಡಿಹೋಗುತ್ತಿದ್ದೇನೆ ಎಂದು ಚೀಟಿ ಬರೆದಿಟ್ಟು ಒಬ್ಬಳೇ ಮೈಸೂರಿಗೆ ಬಂದು ಸಾಕಷ್ಟು ರೊಕ್ಕ ಖಾಲಿ ಮಾಡ್ತಾಳ. ಹೋಟೇಲ್ನಲ್ಲಿ ಬರೀ ಉಪಹಾರಕ್ಕೆ ಆಕೆಗೆ ೮೦೦ ರು. ಬಿಲ್ ಮಾಡಿಸಿ ಕತೆಯನ್ನು ಓಡಿಸಿದ್ದಾರೆ ನಿರ್ದೇಶಕರು.
ತಿಂದ ಬಿಲ್ ಕೊಡಲು ಹಣ ಇರದ ಹುಡುಗಿಯನ್ನು ಸೇಫಾಗಿ ಮನೆ ತಲುಪಿಸುವ ಕಾಯಕವನ್ನು ನಾಯಕನಿಗೆ ಹೊರಿಸಿ ಮಾರ್ಗ ಮಧ್ಯೆದಲ್ಲಿಯೇ ಇಬ್ಬರಿಗೂ ಲವ್ ಆಗುವ ಹಂತಕ್ಕೆ ತಂದು, ಪ್ರೀತಿಯ ಜಾನುವನ್ನು ಅವರೂರಿಗೆ ಬಿಟ್ಟು ನಾಯಕ ಸಿದ್ದು ಒಲ್ಲದ ಮನಸ್ಸಿನಿಂದ ತನ್ನೂರಿಗೆ ಮರಳಬೇಕೆನ್ನುವಷ್ಟರಲ್ಲಿ ದಾಂಡಿಗರ ದಂಡನ್ನು ದಂಡಿಸಿ ಮುಗಿಸುವ ಹೊತ್ತಿಗೆ ಥೇಟರ್ನ ಹೊರಗಡೆ ಇರುವ ನೀರು, ಚಹಾ, ಕೂಲ್ಡ್ರಿಂಕ್ಸ ಕುಡಿಯಲು ಪ್ರೇಕ್ಷಕರಿಗೆ ವಿರಾಮ.
ಉಳಿದ ಕತೆ ನೋಡುತ್ತಿದ್ದಂತೆ ಥೇಟ್ ಮರ್ಯಾದೆ ರಾಮಣ್ಣ. ಕುಸ್ತಿ ಪಂದ್ಯವಂತೂ ಸಾರಥಿ ಸಿನಿಮಾ ಬೇಡವೆಂದರೂ ನೆನಪಿಗೆ ಬರುತ್ತದೆ. ವಿಭಿನ್ನವಾದ ಸಿನಿಮಾಗಳನ್ನು ನೀಡಿರುವ ಗುಬ್ಬಿಗೆ ಇದೆಲ್ಲ ಬೇಕಿತ್ತಾ ಎಂದು ಸಿನಿಮಾ ನೋಡುವವರಿಗೆ ಅನ್ನಿಸಿದರೆ ಪ್ರೀತಂ ಬೇಸರಿಸಿಕೊಳ್ಳಬಾರದು. ಉಳಿದ ಕತೆ ಪ್ರೇಕ್ಷಕರ ನಿರೀಕ್ಷೆಯಂತೆ ಸಾಗುತ್ತದೆ ಹಾಗೂ ಮುಗಿಯುತ್ತದೆ.
ಸಾಧುಕೋಕಿಲಾ ನಟನೆಯ ಕಿಕ್, ಭಟ್ಟರ ಹಾಡುಗಳು, ಕೃಷ್ಣ ಅವರ ಕ್ಯಾಮರಾ ಕಣ್ಣಿನಲ್ಲಿ ಮೂಡಿಬಂದಿರುವ ದೃಶ್ಯಗಳು ಮಸ್ತ್ ಮಜಾ ಕೊಡುತ್ತದೆ. ಹರಿಕೃಷ್ಣ ಸಂಗೀತದಲ್ಲಿ ಪರಮಾತ್ಮನ ಗುಂಗಿದೆ. ಕಣ್ ಮುಚ್ರೋ ಹಾಡಿಗೆ ನೀಡಿರುವ ಸಂಗೀತ ಹುಡುಗರು ಸಿನಿಮಾದ ನಾ ಬೋರ್ಡು ಇರದ ಬಸ್ನು ಹತ್ತಿ ಬಂದ ಚೋಕರಿ ಹಾಡನ್ನು ನೆನಪಿಸುತ್ತದೆ. ಅಲ್ಲಲ್ಲಿ ಕಚಗುಳಿ ಇಡುವ ಸಂಭಾಷಣೆಗಳು ಚಿತ್ರದ ಓಟಕ್ಕೆ ತುಸು ವೇಗ ತಂದುಕೊಟ್ಟಿವೆ. ಉತ್ತರ ಕರ್ನಾಟಕ ಭಾಷೆಯ ಮೇಲೆ ಹಿಡಿತ ಸಾಽಸಲು ಪ್ರಯತ್ನಿಸಿರುವ ಗುಬ್ಬಿ ಪ್ರೇಕ್ಷಕರಿಗೆ ನಗೆಯನ್ನು ಉಣಬಡಿಸಿ ತಾವು ನಗೆಪಾಟೀಲಿಗೀಡಾಗಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಯಾವ ಗಂಡನೂ ಹೆಂಡತಿಗೆ ಬೇ ಎನ್ನುವ ಪದ ಬಳಸುವುದಿಲ್ಲ. ಚಿತ್ರದಲ್ಲಿ ಬರುವ ನಾಯಕಿಯ ತಂದೆ ಗೌಡ ತನ್ನ ಹೆಂಡತಿಗೆ ಪದೇ ಪದೇ ಬೇ ಬೇ ಎನ್ನುವ ಪದ ಬಳಸುತ್ತಾನೆ. ಮೂಲತಃ ಬೇ ಎನ್ನುವ ಪದ ಹುಟ್ಟಿದ್ದು ಅಬ್ಬೆ ಎಂಬ ಪದದಿಂದ. ಅಬ್ಬೆ ಎಂದರೆ ತಾಯಿ ಎಂದರ್ಥ. ಉತ್ತರ ಕರ್ನಾಟಕ ಭಾಷೆಯನ್ನು ಬಳಸುವಾಗ ಗುಬ್ಬಿ ಕೊಂಚ ಅಧ್ಯಯನ ಮಾಡಬೇಕಿತ್ತು. ಇಲ್ಲ ಭಟ್ಟರನ್ನು ಸರಿಯಾಗಿ ಕೇಳಬೇಕಿತ್ತು.
ಜಾನಿಯ ಗೆಲುವಿನ ಜೋಶ್ನಲ್ಲಿ ಜಾನುವನ್ನು ತಯಾರಿಸಿರುವ ಜಯಣ್ಣ ಹಾಗೂ ಭೋಗೇಂದ್ರ ಅವರಿಗೆ ಪ್ರೀತಂ ಮೇಲೆ ಸಾಕಷ್ಟು ಭರವಸೆ ಇದೆ ಎನ್ನುವುದು ಚಿತ್ರದ ಪ್ರತಿ ದೃಶ್ಯಗಳಿಂದ ಸಾಬೀತಾಗಿದೆ. ರಂಗಾಯಣ ರಘು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶೋಭ್ರಾಜ್ ಗೌಡನ ಪಾತ್ರಕ್ಕೆ ಇನ್ನಷ್ಟೂ ಗತ್ತು, ಗೈರತ್ತು ತರಬೇಕಿತ್ತು. ಸಂಗು ಪಾತ್ರ ನಿರ್ವಹಿಸಿದ ಮಧು ಗುರುಪಾದಸ್ವಾಮಿ ಅತ್ತ ಖಳನಟರು ಆಗದ, ಇತ್ತ ಕಾಮಿಡಿಯನ್ ಆಗದ ಪಾತ್ರವನ್ನು ಇನ್ನೊಂಚೂರು ನಿಬಾಯಿಸಬೇಕಿತ್ತು. ನಟನೆಯಲ್ಲಿ ಸಾಧುಕೋಕಿಲಾ, ನಾಯಕ ಯಶ್ ಹಾಗೂ ನಾಯಕಿ ದೀಪಾ ಸನ್ನಿಽಗೆ ಫುಲ್ ಮಾರ್ಕ್ಸ. ಕಾಡೊಂದರಲ್ಲಿರುವ ಪೊಲೀಸ್ ಸ್ಟೇಷನ್ನಲ್ಲಿ ಪೋಲಿಯಾಗಿ ಹಾಗೂ ಜಾಲಿಯಾಗಿ ಮಾತನಾಡುವ ಪೊಲೀಸ್ ಪಾತ್ರ ಚಿಕ್ಕದಾದರೂ ಗಮನ ಸೆಳೆಯುತ್ತದೆ.
ಮಧ್ಯಂತರದವರೆಗೂ ಪ್ರಯಾಣದಲ್ಲಿ ಸಾಗುವ ಜಾನು ಕತೆ ಮಿಕ್ಕಂತೆ ಸರಳವಾಗಿ ಊಹೆಗೆ ನಿಲುಕುತ್ತದೆ. ಒಟ್ಟಿನಲ್ಲಿ ಅರ್ಧ ಪ್ರಯಾಣ, ಉಳಿದರ್ಧ ಹೈರಾಣಾ!
-ಚಿತ್ರಪ್ರಿಯ ಸಂಭ್ರಮ್
Wednesday, May 30, 2012
ನಮ್ಮೂರಲ್ಲೂ ನಗರ ಸಂಚಾರಿ ಪೊಲೀಸ್ ಠಾಣೆ ಆರಂಭ
ಕೊಪ್ಪಳ ನಗರ ಸಂಚಾರಿ ಪೊಲೀಸ್ ಠಾಣೆಗೆ ಜಿ.ಪಂ. ಸಿಇಓ ರಾಜಾರಾಂ ಚಾಲನೆ
ಕೊಪ್ಪಳ. ಮೇ. ಕೊಪ್ಪಳ ನಗರದ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಬುಧವಾರ ನೆರವೇರಿಸುವುದರ ಸಂಚಾರಿ ಪೊಲೀಸ್ ಠಾಣೆ ಕಾರ್ಯ ನಿರ್ವಹಣೆಗೆ ಅಧಿಕೃತ ಚಾಲನೆ ನೀಡಿದರು.
ಜಿ.ಪಂ.ಸದಸ್ಯ ಟಿ. ಜನಾರ್ಧನ ಹುಲಿಗಿ, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ನಗರಸಭೆ ಸದಸ್ಯರಾದ ಮಾನ್ವಿ ಪಾಷಾ, ಮಹೆಬೂಬ ನಾಲಬಂದ, ಡಿವೈಎಸ್ಪಿ ವಿಜಯಕುಮಾರ ಡಂಬಳ, ಗ್ರಾಮೀಣ ಠಾಣೆ ಸಿಪಿಐ ವೆಂಕಟಪ್ಪ ನಾಯಕ, ನಗರ ಠಾಣೆ ಪಿಐ ಪ್ರಕಾಶ ಸಿಂಗ್ ಮತ್ತಿತರರು ಉಪಸ್ಥಿತರರಿದ್ದರು.
Subscribe to:
Posts (Atom)


.jpg)

