ಕೊಪ್ಪಳ - ಶುಕ್ರವಾರ ಸ್ವರ ಸೌರಭ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ (ರಿ) ಭಾಗ್ಯನಗರ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಭಾಗ್ಯನಗರ ಇವರ ಸಹಯೋಗದಲ್ಲಿ ೩ ನೇ ಸ್ವರ ಸೌರಭ ಸಂಗೀತ ಸಂಜೆ ಕಾರ್ಯಕ್ರಮ ವನ್ನು ಭಾಗ್ಯನಗರದ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲಗಪ್ಪ ಮೇಟಿ ವಹಿಸಲಿದ್ದಾರೆ, ಉದ್ಘಾಟಕರಾಗಿ ಎಸ್.ಎಸ್. ಕೆ ಸಮಾಜದ ಮುಖಂಡರಾದ ಜವಾಹರಲಾಲಸಾ ಅಂಟಾಳಮರದ ಆಗಮಿಸಲಿದ್ದು, ಅತಿಥಿಗಳಾಗಿ ಶಂಕ್ರಪ್ಪ್ಪ ಮೇಟಿ, ಹನುಮಂತಪ್ಪ ಸಿಂಗಾಪೂರ, ಸಂಜಯ ಮುಂತಾದವರು ಆಗಮಿಸಲಿದ್ದಾರೆ.
ಹಿಂದುಸ್ಥಾನಿ ಗಾಯನಕ್ಕಾಗಿ ಗಂಗಾವತಿಯ ಗಾಯಕ ಸಂಜಯ ವಿಶ್ವನಾಥ ಆಗಮಿಸಲಿದ್ದು, ಭಾಗ್ಯನಗರದ ಕಲಾವಿದರಾದ ಕು. ಬಾರ್ಗವಿ, ವಿಶ್ವನಾಥ, ಮಾರುತಿ ಬಿನ್ನಾಳ, ವಿಶ್ವನಾಥ ಅಂದ್ರಾಳ, ಕೃಷ್ಣ ಸೊರಟೂರ, ಸಾರತ್ಯ ವಹಿಸಲಿದ್ದಾರೆ.





0 comments:
Post a Comment
Click to see the code!
To insert emoticon you must added at least one space before the code.