ಹೊಸಪೇಟೆ- ಪ್ರತಿಯೊಬ್ಬ ಮಹಿಳೆಯರು ಸ್ವ ಉದ್ಯೋಗಗಳನ್ನು ಕೈಗೊಂಡು ತಮ್ಮ ಕುಟುಂಬದ ಸ್ಥಿತಿಯನ್ನು ಸುಧಾರಿಸಿಕೊಳ್ಳುವಲ್ಲಿ ಗಣನೀಯವಾದ ಪಾತ್ರವನ್ನು ವಹಿಸಬೇಕು ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್ ಹೇಳಿದರು.
ನಗರದಲ್ಲಿ ಸೋಮವಾರ ಡಾನ್ ಬಾಸ್ಕೊ ಸಂಸ್ಥೆ , ತರುಣಿ ಮಹಿಳಾಭಿವೃದ್ದಿ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮಹಿಳಾ ಸ್ವ ಶಕ್ತತಾ ರ್ಯಾಲಿಯನ್ನು ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ರ್ಯಾಲಿಯನ್ನು ಉದ್ಘಾಟಿಸಿ ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಮಾತನಾಡಿ, ಪ್ರತಿಯೊಬ್ಬ ಹೆಣ್ಣು ಮಕ್ಕಳು ಸಹ ಪುರುಷರಿಗೆ ಸಮನಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಭಾಗವಹಿಸಬೇಕು ಆ ಮೂಲಕ ಹೆಣ್ಣು ಮಕ್ಕಳಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು ಎಂದರು.
ಪೊಲೀಸ್ ಇಲಾಖೆಯ ದುರ್ಗಾ ವಾಹಿನಿ ತಂಡದ ಮೀನಾಕ್ಷಿ, ಸರಳಾ, ಡಾನ್ ಬಾಸ್ಕೊ ಸಂಸ್ಥೆಯ ಕಾರ್ಯದರ್ಶಿ ಫಾದರ್ ಲಾರೆನ್ಸ್, ತರುಣಿ ಮಹಿಳಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಸಾವಿತ್ರಿ, ಖಜಾಂಚಿ ಬಸಂತಿ, ಸಲಹೆಗಾರರಾದ ಸಿಸ್ಟರ್ ಸೀಮಾ, ಶ್ರೀಮತಿ ಹನುಮಂತಮ್ಮ, ಫಾದರ್ ಸೆಬಾಸ್ಟೀನ್, ಫಾದರ್ ಸಿಜು, ಹಾಜರಿದ್ದರು. ಈ ಸಮಾರಂಭದಲ್ಲಿ ಸ್ವ ಸಹಾಯ ಸಂಘದ ಆರು ಜನ ಮಹಿಳೆಯರಿಗೆ ’ಉತ್ತಮ ಸಾಧಕ ಸ್ತ್ರೀ’ ಪ್ರಶಸ್ತಿ ಪ್ರಧಾನ ನಡೆಸಲಾಯಿತು. ನಗರಸಭಾ ಆವರಣದಿಂದ ಡಾನ್ ಬಾಸ್ಕೊ ಸಂಸ್ಥೆಯವರೆಗೆ ರ್ಯಾಲಿ ನಡೆಯಿತು. ಈ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಸಹಾಯ ಗುಂಪುಗಳ ಮಹಿಳೆಯರು ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.