ಸಾಮಾಜಿಕ ಬದ್ಧತೆ ಪ್ರದರ್ಶಿಸಿದ ಗೊಂಡಬಾಳ ಕುಟುಂಬ
ಕೊಪ್ಪಳ, ಎ. ೧. ತಾಲೂಕಿನ ಭಾಗ್ಯನಗರದ ಕಿನ್ನಾಳ ರಸ್ತೆ ಎಫ್ಸಿಐ ಗೋದಾಮು ಹಿಂದುಗಡೆ ಇರುವ ಮಂಜುನಾಥ ಗೊಂಡಬಾಳರ ಮನೆಯಲ್ಲಿ ಅವರ ದ್ವಿತಿಯ ಸುಪುತ್ರಿಯ ನಾಮಕರಣ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
.jpg)

.jpg)
ಅಧ್ಯಕ್ಷತೆವಹಿಸಿ ಮಾತನಾಡಿದ ಹಿರಿಯ ಸಾಹಿತಿ ಹೆಚ್. ಎಸ್. ಪಾಟೀಲರು, ಗೊಂಡಬಾಳ ತಮ್ಮ ಮಗಳಿಗೆ ಅಕ್ಷರ ಎಂಬ ಹೆಸರನ್ನು ಇಡುವದರೊಂದಿಗೆ ಸಾಹಿತ್ಯದ ಜೊತೆಗೆ ಸಂಭಂದ ಬೆಸೆದುಕೊಂಡಿದ್ದಾರೆ, ಅದರ ಜೊತೆಗೆ ಕವಿಗೋಷ್ಠಿ, ಸಂಗೀತ ಕಾರ್ಯಕ್ರಮ, ನೇತ್ರದಾನ ಹಾಗೂ ರಕ್ತದಾನ ಅರಿವು ಮೂಡಿಸುವದು ಅದರ ಜೊತೆಗೆ ಎಲ್ಲರನ್ನೂ ಒಟ್ಟುಗೂಡಿಸಿ, ಮತದಾನ ಮಾಡುವಂತೆ ಆಗ್ರಹಿಸುವ ಪ್ರತಿಜ್ಞಾವಿಧಿ ಬೋಧಿಸಿರುವದು ಸ್ತುತ್ಯಾರ್ಹ ಎಂದರು.
ಪ್ರಾಸ್ತಾವಿಕ ನುಡಿಯನ್ನು ಮಂಜುನಾಥ ಜಿ. ಗೊಂಡಬಾಳ ಮಾಡಿ, ಕಡ್ಡಾಯ ಮತದಾನ ಮಾಡುವ ಸಲುವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಸಾಹಿತಿ ಡಿ. ಎಂ. ಬಡಿಗೇರ, ಅಕ್ಬರ್ ಸಿ. ಕಾಲಿಮಿರ್ಚಿ ಭಾಗ್ಯನಗರ, ಡಾ|| ಸಿದ್ದಲಿಂಗಪ್ಪ ಕೊಟ್ನೆಕಲ್ ಪ್ರಾಧ್ಯಾಪಕರು, ಶ್ರೀ ಗವಿಸಿದ್ಧೇಶ್ವರ ಕಾಲೇಜು, ಕೊಪ್ಪಳ, ಬಿ. ಎಸ್. ಪಾಟೀಲ ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕೊಪ್ಪಳ, ಈಶ್ವರ ಹತ್ತಿ ಸಾಹಿತಿಗಳು, ಕಲಾವಿದರು ಕೊಪ್ಪಳ ಆಗಮಿಸಿ ಶುಭಕೋರಿದರು.
ಸದಾಶಿವ ಪಾಟೀಲ ಅಶೋಕ ನೀಲಮ್ಮನವರ ಆಕೆಷ್ಟ್ರಾ ಕಲಾವಿದರು, ಬೆಳಗಾವಿ, ಅನುಸೂಯಾ ಜಾಗಿರದಾರ ಶಾಸ್ತ್ರೀ ಗಮಕ ಕಲಾವಿದರು, ಕುಮಾರ ವಿಜಯಕುಮಾರ ಗೊಂಡಬಾಳ ಕೆರೋಕೆ ಸಿಂಗರ್ ಕೊಪ್ಪಳ, ಕುಮಾರಿ ಸಾಹಿತ್ಯ ಗೊಂಡಬಾಳರವರಿಂದ ಸಂಗೀತ ಕಾರ್ಯಕ್ರಮ ನೀಡಿದರು. ಗವಿಸಿದ್ದಪ್ಪ ಕರ್ಕಿಹಳ್ಳಿ ಸ್ವಾಗತಿಸಿದರು, ವಿನೋದಕುಮಾರ ನೀಲಮ್ಮನವರ ವಂದಿಸಿದರು.
0 comments:
Post a Comment