PLEASE LOGIN TO KANNADANET.COM FOR REGULAR NEWS-UPDATES


ಕಾಂಗ್ರೇಸನದ್ದು ಸತತ ೫ ದಶಕಕ್ಕು ಹೆಚ್ಚು ಕಾಲ ದೇಶವನ್ನಾಳಿದವರು ಈಗ ಭಾರತ ನಿರ್ಮಾಣ ಎಂದು ಬೊಬ್ಬೆ ಹಾಕುತಿದ್ದಾರೆ. ಹಿಂದೆ ಮಾಡದ ಅಭಿವೃದ್ದಿ ಕಾರ್ಯವನ್ನು ಈಗ ಏನು ಮಾಡುತ್ತಾರೆ. ಕಾಂಗ್ರೇಸ್ ಪಕ್ಷದವರು ಓಟು ಬ್ಯಾಂಕಗಾಗಿ ದೇಶವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಜನರು ಈಗ ಅತ್ಯಂತ ಪ್ರಜ್ಞಾವಂತರಾಗಿದ್ದು ಅಭಿವೃದ್ದಿಯ ಪರವಾಗಿರುವ ಬಿಜೆಪಿ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಸಂಗಣ್ಣ ಕರಡಿ ಮಾತನಾಡಿದರು. ಅವರು ದಿನಾಂಕ ೩೧-೦೩-೨೦೧೪ ರಂದು ಕೊಪ್ಪಳದ ದೇವರಾಜ ಅರಸು ಕಾಲೋನಿಯಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಗುಜರಾತ ರಾಜ್ಯವು ಇಡೀ ವಿಶ್ವಕ್ಕೆ ಅಭಿವೃದ್ದಿಯಲ್ಲಿ ಮಾದರಿ ರಾಜ್ಯವಾಗಿದೆ ಹಿಂದಿನ ಬಿಜೆಪಿ ಸರಕಾರವು ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಸಣ್ಣ ಭೂಹಿಡುವಳಿದಾರರಿಗೆ ಸಹಾಯದನ, ನಗರಗಳ ಅಭಿವೃದ್ದಿಗೆ ೩೦ ಕೋಟಿ ಅನುದಾನ ಕೊಟ್ಟಿದೆ. ಆದರೆ ಕಾಂಗ್ರೇಸ್ ಸರಕಾರದ ಯೋಜನೆಗಳು ರಾಜ್ಯವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ ಎಂದು ಕಿಡಿಕಾರಿದರು. 
ಬಿಜೆಪಿ ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ ಕೊಪ್ಪಳ ನಗರಕ್ಕೆ ಶಾಶತ ಕುಡಿಯುವ ನೀರು ತಂದಿರುವ ಕೀರ್ತಿ ಕರಡಿ ಸಂಗಣ್ಣನವರಿಗೆ ಸಲ್ಲುತ್ತದೆ ನಗರದಲ್ಲಿರುವ ಬಡವರಿಗಾಗಿ ನಗರ ವಾಜಪೇಯಿ ಆಶ್ರಯ ಯೋಜನೆ ಅಡಿ ನಾಲ್ಕು ಸಾವಿರ ಮನೆಗಳನ್ನು ತಂದಿದ್ದಾರೆ. ಗವಿಸಿದ್ದೇಶ್ವರ ಯಾತ್ರಿ ನಿವಾಸ, ಜಿಲ್ಲಾ ರಂಗ ಮಂದಿರದಂತಹ ಯೋಜನೆಗಳನ್ನು ತಂದವರಿಗೆ ಮತ ನೀಡಬೇಕೆಂದು ಮನವಿಮಾಡಿದರು. 
ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ ಮಾತನಾಡಿ ನಗರದಲ್ಲಿ ಹಾದುಹೋಗುವ ಎನ್.ಹೆಚ್-೬೩ ಹೆದ್ದಾರಿ ಕಾಮಗಾರಿ ಬಿಜೆಪಿ ಸರಕಾರದ ಕೊಡುಗೆ, ವೈದ್ಯಕೀಯ ಕಾಲೇಜು, ಸುಸಜ್ಜಿತ ಜಿಲ್ಲಾ ಸರಕಾರಿ ಆಸ್ಪತ್ರೆಯಂತಹ ಮಹತ್ತರವಾದ ಯೋಜನೆಗಳನ್ನು ನೋಡಿ ಬಿಜೆಪಿಗೆ ಮತದಾನ ಮಾಡಬೇಕೆಂದು ಹೇಳಿದರು.
 ಈ ಸಂದರ್ಬದಲ್ಲಿ ಮುಖಂಡರಾದ ಸಿದ್ದಣ್ಣ, ಮಹಾದೇವಪ್ಪ ಜವಳಿ, ರಶಿದಸಾಬ್ ಮಿಠಾಯಿ, ಮರ್ದಾನಸಾಬ್ ಮಿಠಾಯಿ, ಸಿದ್ದು ಮ್ಯಾಗೇರಿ, ವೀರಪಾಕ್ಷಪ್ಪ ಗದಗಿನಮಠ, ಧವಲತ್ ಸಿಕ್ಕಗಾರ ಮುಂತಾದ ಬಿಜೆಪಿ ಯುವಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಭಾಗವಹಿಸಿದ್ದರು. 

Advertisement

0 comments:

Post a Comment

 
Top