PLEASE LOGIN TO KANNADANET.COM FOR REGULAR NEWS-UPDATES

 ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸುವಂತೆ  ಗ್ರಾ.ಪಂ ಸದಸ್ಯ ಸೋಮಲಿಂಗಪ್ಪ ಮೆಣಿಸಿನಕಾಯಿ ಮನವಿ ಮಾಡಿದರು.
ಅವರು  ಭಾಗ್ಯನಗರದ ಧನ್ವಂತರಿಕಾಲೋನಿ, ವೀರಾಂಜನೇಯ ಬಡಾವಣೆ, ಪದ್ಮಾವತಿಕಾಲೋನಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿ ಪ್ರಚಾರ ಕೈಗೊಂಡು ಮಾತನಾಡಿದ ಅವರು  ಈ ಬಾರಿ ಸದೃಢ ಭಾರತ ನಿರ್ಮಾಣಕ್ಕೆ  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಆಯ್ಕೆಗೊಳಿಸಲು,   ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಬೆಂಬಲಿಸುವಂತೆ ಮನವಿ ಮಾಡಿದರು.  
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಜಗದೀಶ್ ಮಾಲಗಿತ್ತಿ, ಪ್ರಶಾಂತ ಮೇಟಿ, ಶರಣಪ್ಪ ಮೇಟಿ, ಸುನೀಲ್, ಮಾರುತಿ, ಪ್ರಶಾಂತ ಸಾಲಿ, ಬಸವರಾಜ್ ಶಿವಪ್ಪ ದೊಡ್ಡಮನಿ,ಸಂಗಮೇಶ ಮುಧೋಳ, ಬಸವರಾಜ್ ಜಾಲಿಹಾಳ, ಪಕ್ಷದ ಕಾರ್ಯಕರ್ತರು,ಅಭಿಮಾನಿಗಳು ಪಾಲ್ಗೋಂಡಿದ್ದರು.

Advertisement

0 comments:

Post a Comment

 
Top