PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಶ್ರೀ ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ದಿನಾಂಕ ೧೭-೦೮-೨೦೧೨ ರಂದು ಶುಕ್ರವಾರ ಅಮವಾಸ್ಯೆಯ ದಿನ ಸಾಯಂಕಾಲ ೬-೩೦ಕ್ಕೆ ಶ್ರೀ ಗವಿಮಠದ ಕೆರೆಯ ದಡದಲ್ಲಿ ೩೫ ನೇ ಮಾಸಿಕ ಬೆಳಕಿನೆಡೆಗೆ ಕಾರ್ಯಕ್ರಮವು  ಜರುಗಲಿದೆ. ಮುಖ್ಯ ಅತಿಥಿಗಳಾಗಿ   ಟಿ.ವಿಶ್ವನಾಥ ತರಬೇತುದಾರರು ಯೋಗ ವಿದ್ಯಾ ಪ್ರಾಣಿಕ್ ಹೀಲಿಂಗ್ ಫೌಂಡೇಶನ್,ಬಳ್ಳಾರಿ ಇವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಖ್ಯಾತ ಕೊಪ್ಪಳದ ವಕೀಲರಾದ ಶ್ರೀ ರಾಘವೇಂದ್ರ ಪಾನಗಂಟಿ ವಹಿಸಲಿದ್ದಾರೆ. ಇದೇ ವೇದಿಕಯಲ್ಲಿ   ವಾದಿರಾಜ ಪಾಟೀಲ ಕೊಪ್ಪಳ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.  ಈ ಕಾರ್ಯಕ್ರಮದ ಭಕ್ತಿಸೇವೆಯನ್ನು   ಲಿಂ.ಶ್ರೀಮತಿ ಮಣ್ಣೂರು ಪಾರಮ್ಮ ಸಾ. ಕಂಪ್ಲಿ ಇವರ ಸಂಸ್ಮರಣೆಗೆ ಎಸ್.ಜಿ.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ.ಚಂದ್ರಶೇಖರಗೌಡರು ಆಯೋಜಿಸಿದ್ದಾರೆ. ಭಕ್ತರು ಹೆಚ್ಚು ಹೆಚ್ಚು  ಸಂಖ್ಯೆಯಲ್ಲಿ ಆಗಮಿಸಬೇಕೆಂದು  ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top