PLEASE LOGIN TO KANNADANET.COM FOR REGULAR NEWS-UPDATES


ಅಳವಂಡಿ ಗ್ರಾಮದಲ್ಲಿಕೆ.ಎಮ್ ಸಯ್ಯದ್‌ರಿಂದ.   ಇಪ್ತಿಯಾರಕೂಟ ವ್ಯವಸ್ಥೆ ಹಾಗೂ ನೋಟ್‌ಬುಕ್ ವಿತರಣೆ : 
ಕೊಪ್ಪಳ ೦೯ : ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ದಿನಾಂಕ:೦೮-೦೮-೨೦೧೨ ರಂದು ಸೈಯದ್ ಫೌಂಡೇಶನ್ ವತಿಯಿಂದ ಫೌಂಡೇಶನ್ ಅಧ್ಯಕ್ಷ ಹಾಗೂ ಬಿ.ಎಸ್.ಆರ್. ಪಕ್ಷದ ಮುಖಂಡರಾದ ಕೆ.ಎಂ.ಸೈಯದ್‌ರವರು ಎಸ್.ಸಿ.,ಎಸ್.ಟಿ., ಕಾಲೋನಿಯ ಪ್ರಾಥಮಿಕ ಶಾಲೆಯಲ್ಲಿ ಬಡ ವಿಧ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆ ಮಾಡಿದರು ನಂತರ ಸಂಜೆ ರಂಜಾನ ಮಾಹೆಯ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ಮಸೀದಿಯಲ್ಲಿ ಇಫ್ತಿಯಾರ್‌ಕೂಟವನ್ನು ಏರ್ಪಡಿಸಿದ್ದರು ಮತ್ತು ವಿವಿಧ ಅಂಗವಿಕಲರ ಕುಂದು-ಕೊರತೆಗಳನ್ನು ಆಲಿಸಿ ಸಹಾಯಧನ ನೀಡಿದರು. ಈ ಸಮಾರಂಭದಲ್ಲಿ ಮಂಜುನಾಥ ಭಾವಿಕಟ್ಟಿ ಅಳವಂಡಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಮೆಹಬೂಬ, ವಿರೇಶ ಚೌಡಪ್ಪ ಜಂತ್ಲಿ .ಎಸ್.ಡಿ.ಎಮ್.ಸಿ., ಅಧ್ಯಕ್ಷರು, ಶಾಮಿದಸಾಬ ಕಿಲ್ಲೇದಾರ್, ಗೌಸಸಾಬ್ ನೀರಲಗಿ, ವಿರೇಶ ನವನಳ್ಳಿ, ರಾಜಾಸಾಬ ಹಂದ್ರಾಳ, ಖಾಸಿಂಪೀರ್ , ಉಸ್ಮಾನ್.ಎಸ್.ಕಟ್ಟಿ, ಮೆಹಬೂಬಸಾಬ್ ಮುಲ್ಲಾ, ದೇವಪ್ಪ ಮಾಗಳದ್, ಉಸ್ಮಾನಸಾಬ್ ಮಂಗಳಾಪುರ, ಮಾರುತಿ ಮಾಗಳದ್, ಹಾಗೂ ಊರಿನ ಅನೇಕ ಪದಾಧಿಕಾರಿಗಳು ಮತ್ತು ಸಮಸ್ತ ಗಣ್ಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top