ಕೊಪ್ಪಳ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಯಶೋಗಾಥೆ
ಕೊಪ್ಪಳ ಜಿಲ್ಲೆ ಸೋನಾಮಸೂರಿ ಅಕ್ಕಿಗೆ ಹೆಸರುವಾಸಿ, ಭತ್ತದ ಕಣಜ ಎಂದೇ ಜಿಲ್ಲೆ ಪ್ರಖ್ಯಾತಿ ಪಡೆದಿದೆ. ಜಿಲ್ಲೆಯ ಖ್ಯಾತಿ ಇಷ್ಟಕ್ಕೆ ಸೀಮಿತವಾಗಿಲ್ಲ, ಇಡೀ ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿಯೇ ಕೊಪ್ಪಳ ಜಿಲ್ಲೆ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
.jpg)
.jpg)

ಈ ವರ್ಷ ರಾಜಾಸಾಬ್ ೫ ಟನ್ಗಳಷ್ಟು ಹಣ್ಣನ್ನು ಒಣದ್ರಾಕ್ಷಿಯಾಗಿ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಣದ್ರಾಕ್ಷಿ ಮಾಡಲು ಈಗ ಹೊಸ ತಾಂತ್ರಿಕತೆ ಲಭ್ಯವಿದ್ದು, ಹಿಂದೆಂದಿಗಿಂತಲೂ ಒಳ್ಳೆಯ ಗುಣಮಟ್ಟದ ಒಣ ದ್ರಾಕ್ಷಿ ತಯಾರಿಸಬಹುದಲ್ಲದೆ, ಗುಣಮಟ್ಟ ಕೆಡುವ ಶೇ. ಪ್ರಮಾಣ ಕೂಡ ಕಡಿಮೆ ಎನ್ನುವ ರಾಜಾಸಾಬ್ ಒಣದ್ರಾಕ್ಷಿ ಮಾಡುವ ವಿಧಾನವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅದೇ ವಿಧಾನವನ್ನು ಅನುಸರಿಸುತ್ತಿದ್ದೇನೆ ಎಂದು ರಾಜಾಸಾಬ್ ವಿವರಿಸಿದ್ದು ಹೀಗೆ, ದ್ರಾಕ್ಷಿ ಹಣ್ಣುಗಳನ್ನು ಕುದಿಯುವ ಕಾಸ್ಟಿಕ್ ಸೋಡಾದಲ್ಲಿ ೩೦ ಸೆಕೆಂಡ್ವರೆಗೂ ಮುಳುಗಿಸಿ ತಕ್ಷಣವೇ ಹೊರತೆ ತೆಗೆದು, ತಣ್ಣೀರಿನಲ್ಲಿ ತೊಳೆಯಬೇಕು. ಇದನ್ನು ಶೇ. ೯೦ ರಷ್ಟು ನೆರಳು ಪರದೆ ಮಾಡಿ ಜಾಲಿ ಪರದೆಯ ಮೇಲೆ ಹಣ್ಣುಗಳನ್ನು ಹರಡಬೇಕು. ಇದಕ್ಕೆ ಗಂಧಕದ ಧೂಪದಿಂದ ಉಪಚರಿಸಿ ನಂತರ ಇಥೈಲ್ ಓಲಿಯೇಟ್ ಹಾಗೂ ಪೊಟ್ಯಾಷಿಯಮ್ ಕಾರ್ಬೋನೇಟ್ ದ್ರಾವಣದಿಂದ ಉಪಚರಿಸಿ ಸ್ವಲ್ಪ ಬಣ್ಣ ಬರುವ ದ್ರಾವಣ ಬೆರೆಸಿದರೆ ೧೫ ರಿಂದ ೨೨ ದಿನಗಳಲ್ಲಿ ಒಣದ್ರಾಕ್ಷಿ ರೆಡಿ. ಇದನ್ನು ಗ್ರೇಡಿಂಗ್ ಮಾಡಿ ೧ ಕೆ.ಜಿ. ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ತಿಂಗಳಾನುಗಟ್ಟಲೆ ಸಂಗ್ರಹಿಸಿಟ್ಟು ಯೋಗ್ಯ ಬೆಲೆ ಬಂದಾಗ ದೂರದೂರಿನ ಮಾರುಕಟ್ಟೆಗೆ ಸಾಗಿಸುವುದೂ ಸಹ ಸುಲಭ ಎನ್ನುತ್ತಾರೆ ರೈತ ರಾಜಾಸಾಬ್ ಹರ್ಷದಿಂದ. ಇದೀಗ ಜಿಲ್ಲೆಯ ಯಲಬುರ್ಗಾ ತಾಲೂಕು ಬೇವೂರು ಗ್ರಾಮದ ಪ್ರಗತಿಪರ ರೈತ ದೇವೇಂದ್ರಗೌಡ ಸಹ ಒಣದ್ರಾಕ್ಷಿ ಮಾಡುವ ಮೂಲಕ ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ ಮಾಡಲು ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದ್ರಾಕ್ಷಿ ಬೆಳೆಗಾರರು ಒಣದ್ರಾಕ್ಷಿ ಮಾಡುವ ಸಾಹಸಕ್ಕೆ ಮುಂದಾದಲ್ಲಿ, ಜಿಲ್ಲೆಯ ದ್ರಾಕ್ಷಿ ಬೆಳೆ ಬೆಳೆಯುವ ವಿಸ್ತೀರ್ಣವೂ ವೃದ್ಧಿಸಿ, ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ರಾಜಾಸಾಬ್- ೯೭೪೦೫೪೭೯೯೫, ದೇವೇಂದ್ರಗೌಡ- ೯೯೭೨೫೧೯೩೬೦, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೊಪ್ಪಳ- ೦೮೫೩೯-೨೩೦೧೭೦ ಕ್ಕೆ ಸಂಪರ್ಕಿಸಬಹುದಾಗಿದೆ.
- ತುಕಾರಾಂ ರಾವ್ ಬಿ.ವಿ.
ಜಿಲ್ಲಾ ವಾರ್ತಾಧಿಕಾರಿ,
ವಾರ್ತಾ ಇಲಾಖೆ,
ಕೊಪ್ಪಳ.
0 comments:
Post a Comment