PLEASE LOGIN TO KANNADANET.COM FOR REGULAR NEWS-UPDATES


ಶಿವಮೊಗ್ಗ, ಮಾ.30: ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಮಾ. 31ರಂದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನಿಗಳ ಬಳಗ ಆಯೋಜಿಸಿ ರುವ ಸನ್ಮಾನ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಪ್ರಮುಖ ಸಚಿವರು ಗೈರು ಹಾಜರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಮೂಲಗಳ ಪ್ರಕಾರ, ಕಾರ್ಯಕರ್ತರಿಗೆ ಈ ಸಮಾವೇಶಕ್ಕೆ ತೆರಳದಂತೆ ಬಿಜೆಪಿಯ ಕೆಲವು ಮುಖಂಡರು ಹಾಗೂ ಸಂಘಪರಿವಾರ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಕೆಲವು ಸಚಿವ ಸಂಪುಟ ಸದಸ್ಯರು ಸಮಾರಂಭಕ್ಕೆ ಭಾಗವಹಿಸುತ್ತಿಲ್ಲ. ಈ ಸಮಾರಂಭಕ್ಕೆ ಸರಿಸುಮಾರು 2 ಲಕ್ಷ ಜನರನ್ನು ಸೇರಿಸುವ, ಇರಾದೆ ಯನ್ನು ಬಿಎಸ್‌ವೈ ಅಭಿಮಾನಿಗಳ ಬಳಗ ಹೊಂದಿದೆ. ಜಿಲ್ಲೆಯ ಇತಿ ಹಾಸದಲ್ಲಿಯೇ, ಇದೊಂದು ದಾಖ ಲೆಯ ಸಮಾವೇಶವನ್ನಾಗಿಸಲು ಯತ್ನಿಸುತ್ತಿದ್ದಾರೆ.

Advertisement

0 comments:

Post a Comment

 
Top