PLEASE LOGIN TO KANNADANET.COM FOR REGULAR NEWS-UPDATES


ಗವಿಮಠದ ಜಾತ್ರಾ ಪ್ರಯುಕ್ತ ಶ್ರೀ ಗುರು ನಮನ ಧನ್ಯತೆ ವಿಡಿಯೋ ಸಾಂಗ್ಸ ಸಿ.ಡಿ ಯನ್ನು ರಾಜ್ಯಾಧ್ಯಂತ ಬಿಡುಗಡೆ ಗೊಳಿಸಲಾಯಿತು. 
 ಬೆಂಗಳೂರಿನ ಸ್ಟೂಡಿಯೋದಲ್ಲಿ ಚಲನ ಚಿತ್ರ ಖ್ಯಾತ  ನಿರ್ದೇಶಕರಾದ ಯೋಗರಾಜ್ ಭಟ್ & ಅಣ್ಣಾ ತಂಗಿ ನಿರ್ಮಾಪಕರಾದ ಕೆ. ಪ್ರಭಾಕರ, ನಿರ್ದೇಶಕ ಬಸವರಾಜ ಕೊಪ್ಪಳ ಸಿ.ಡಿ ಗಳನ್ನು ಬಿಡುಗಡೆ ಗೋಳಿಸಿ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಕೊಪ್ಪಳದ ಸ್ವಾಮಿಜಿಯವರು ಆಸಕ್ತಿ ಬಗ್ಗೆ ಗೌರವ ಪೂರ್ವಕ ಮೆಚ್ಚುಗೆಯ ಮಾತುಗಳನ್ನು ತಿಳಿಸಿದರು. 
ಕೊಪ್ಪಳದಲ್ಲಿ ಮೊದಲು ಅಭಿನವಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಯವರಿಂದ ಬಿಡುಗಡೆ ಗೊಂಡ ವಿಡಿಯೋ ಸಿ.ಡಿ ಯಶಸ್ವಿಯಾಗಿ ಜನರ ಮೆಚ್ಚುಗೆ ಗಳಿಸಿ ಮಾರಾಟವಾದ ಕಾರಣ. ನಿರ್ದೇಶಕ ಬಸವರಾಜ ಕೊಪ್ಪಳ ರಾಜ್ಯಾದ್ಯಂತ ಬಿಡುಗಡೆ ಗೊಳಿಸಿದರು. 
ರಾಜ್ಯದ ಜನರ ಪ್ರತಿಕ್ರೀಯೆ ತಿಳಿದ ನಂತರ ವಲ್ಡ್ ವೈಡ್ ಇಂಟರನೆಟ್ ನಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದಾರೆ.
ಸ್ಥಳೀಯ ಕೊಪ್ಪಳದ ಸಾಹಿತ್ಯ ಸಂಸ್ಕೃತಿಯನ್ನು ರಾಜ್ಯಾದ್ಯಂತ ವಿಸ್ತರಿಸುತ್ತಿರುವುದು ನಿರ್ದೇಶಕ ಬಸವರಾಜ  ಕೊಪ್ಪಳ ರವರ ಕಾರ್ಯ ಶ್ಲಾಘನೀಯ ಈ ಮಟ್ಟದ ಯಶಸ್ವ್ವಿ ಕಾರ್ಯಕ್ಕೆ ಶ್ರೀಗಳ ಆರ್ಶಿರ್ವಾದ ಭಕ್ತರ & ಮಾದ್ಯಮದವರ ಸಹಕಾರಕ್ಕೆ ಯಾವಾಗಲು ಕೃತಜ್ಞ ಎಂದು ಬಸವರಾಜ ಕೊಪ್ಪಳ ತಿಳಿಸಿದರು.  

Advertisement

0 comments:

Post a Comment

 
Top