PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ೩೦: ಕೊಪ್ಪಳ ಜಿಲ್ಲ ಭಾರತಿ ಜನತಪಕ್ಷದ ಚಟುವಟಿಕೆಗಳನ್ನು ಮಾಧ್ಯಮದ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಪಕ್ಷಕ್ಕೆ ಇವರ
ನ್ನು ಜಿಲ್ಲಾ ಭಾರತಿಯ ಜನತಾ ಪಕ್ಷದ ವಕ್ತಾರರಾಗಿ ನೇಮಿಸಲು ಸ್ಥಳಿಯ ವರಿಷ್ಠರ ಶಿಪಾರಸ್ಸಿನ ಮೇರೆಗೆ ವಕ್ತಾರ ಸ್ಥಾನಕ್ಕೆ ಯುವ ನಾಯಕರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ ಸಹ ವಕ್ತಾರರಾಗಿ ಪರಮಾನಂದ ಯಾಳಗಿ ನೇಮಕಗೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ವಕ್ತಾರ ಸ್ಥಾನದ ಕಾರ್ಯiನಿರ್ವಹಿಸಲು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರು ಚಂದ್ರಶೇಖರಗೌಡ ಪಾಟೀಲ ಹಲಗೇರಿ, ಹಾಗೂ ಪರಮಾನಂದ ಯಾಳಗಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತಕ್ಷಣದಿಂದಲೆ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಂಗಣ್ಣ ಕರಡಿ ಇತರ ಮುಖಂಡರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾಗಿ ಪಕ್ಷದ ಸಂಘಟನೆ ಮತ್ತು ಪಕ್ಷದ ಕಾರ್ಯಕ್ರಮಗಳ ಜೊತೆಗೆ ಪಕ್ಷದ ಚಟುವಟಿಕೆಗಳನ್ನು ಜನರ ಗಮನಕ್ಕೆ ತರುವಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೆಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ಪ್ರಹ್ಲಾದ ಜ್ಯೋಶಿ  ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ. 

Advertisement

0 comments:

Post a Comment

 
Top