ಭರ್ಜರಿ ದಾಸೋಹ
ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಆಂಗವಾಗಿ ಶ್ರೀಮoದಲ್ಲಿ ನಡೆಯುತ್ತಿರುವ ಮಹಾದಾಸೋಹವು
ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ಖ್ಯಾತಿಯಾಗುತ್ತಿದೆ. ಇಂದಿನ ದಿವಸದ ದಾಸೋಹದಲ್ಲಿ ಭಕ್ತರಿಗೆ ಸಿಹಿಬೂಂದಿ ಬಾದೂರಷಾ ಹಾಗೂ ಗೋಧಿಹುಗ್ಗಿ ವಿಶೇಷವಾಗಿತ್ತು. ಇದರಜೊತೆಗೆ ತುಪ್ಪ,ಅನ್ನ,ಸಾಂಬಾರ ಇವೆಲ್ಲವುಗಳು ಭಕ್ತರ ಹಸಿವಿನಂಗಳಕ್ಕೆ ಕೃಪೆಯಾದವು. ದಾಸೋಹ ಮಂಟಪದೊಳಗೆ ಜಾತ್ರೆಯಷ್ಟೇಜನರು ಪ್ರಸಾದ ಸ್ವೀಕರಿಸುತ್ತಾ ಇರುವದು ವಿಶೇಷವಾಗಿತ್ತು. ಇಂದಿನ ದಾಸೋಹದಲ್ಲಿ ಅಡುಗೆ ಸಿದ್ದಪಡಿಸುವ ಉಸ್ತುವಾರಿಯನ್ನು ಕೊಪ್ಪಳ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಸದ್ಭಕ್ತರು ವಹಿಸಿದ್ದರು.
ದಾಸೋಹದಲ್ಲಿ ಸಿಹಿಮೋತಿಚೂರು
ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಆಂಗವಾಗಿ ಮಹಾದಾಸೋಹಕ್ಕಾಗಿ ಸಿಂಪಿಲಿಂಗಣ್ಣ ರಸ್ತೆಯಲ್ಲಿನ ಶ್ರೀಲಕ್ಷ್ಮಿ ಸ್ವಸಹಾಯಗುಂಪು ಹಾಗೂ ಶ್ರೀಗಜಾನನ ಗೆಳೆಯರ ಬಳಗವು ಜಂಟಿಯಾಗಿ ಮಹಾಸೋಹಕ್ಕಾಗಿ ಸುಮಾರು ೬ ಕ್ವಿಂಟಾಲ್ ಮೋತಿಚೂರು ( ಸಿಹಿಲಾಡು) ತಯಾರಿಸಿದ್ದಾರೆ. ಇಂದು ಸಂಜೆ ಶ್ರೀಮಠಕ್ಕೆ ಮೇಳದೊಂದಿಗೆ ಅಗಮಿಸಿ ದಾಸೋಹಕ್ಕೆ ಸಮರ್ಪಿತವಾಯಿತು. ಎರಡು ಸಂಘಟಣೆಗಳ ಪ್ರಮುಖರು ಉಪಸ್ಥಿತರಿದ್ದರು
0 comments:
Post a Comment