PLEASE LOGIN TO KANNADANET.COM FOR REGULAR NEWS-UPDATES

ಸಂಪ್ರದಾಯದ ಸೋಗಿನಲ್ಲಿ
ನೂರೆಂಟು ಸಂಕೋಲೆಗಳು
ಹೆಸರು ಬದಲಿಸಿ
ವೇಷ ಮರೆಸಿಕೊಂಡು
ಕಾಡುತ್ತವೆ

ನೂರೆಂಟು ತವಕ ತಲ್ಲಣಗಳು
ಅದುಮಿಟ್ಟ ಸಾವಿರಾರು ಬಿಕ್ಕುಗಳು,
ಕಣ್ಣಲ್ಲೇ ಕರಗಿಹೋದ ಕನಸುಗಳು
ಹುಸಿ ಬದುಕಿನ
ಇಲ್ಲದ ಪ್ರತಿಷ್ಠೆಗೆ
ತಲ್ಲಣಿಸಿ ಕುದ್ದುಹೋದ
ಅಸಹಾಯಕ ದೇಹಗಳು
ಬೆಂದು ಹೋಗುತ್ತವೆ
ಉಸಿರುಗಟ್ಟಿ ಒದ್ದಾಡುತ್ತವೆ
ಹೊದ್ದ ಬಟ್ಟೆಯೊಳಗೆ

ಮುಚ್ಚಿಕೊಳ್ಳಲಿಕ್ಕೇನಿದೆ
ಹರಿದ ಬಟ್ಟೆ, ,ಹಸಿದ ಹೊಟ್ಟೆ
ಮೂಳೆಗಂಟಿದ ಚರ್ಮ
ಹೊದ್ದ ಚಾದರದೊಳಗೆ
ಭಯಕ್ಕೆ ತತ್ತರಿಸಿದ ಪಿಳಿಪಿಳಿ ಕಣ್ಣುಗಳು,
ಕಫನ್ ಏಕೆ ಬೇಕು
ಬುರ್ಖಾ ಇರುವಾಗ !

- ಸಿರಾಜ್ ಬಿಸರಳ್ಳಿ

Advertisement

0 comments:

Post a Comment

 
Top