PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೦೧ (ಕ ವಾ) ರಾಜ್ಯ ಚುನಾವಣಾ ಆಯೋಗವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಾ ಪಂಚಾಯತಿಯ ಅಧಿಕಾರ ವ್ಯಾಪ್ತಿಯೊಳಗಿರುವ ಪ್ರದೇಶವನ್ನು ೨೫ ಏಕ ಸದಸ್ಯ ತಾಲೂಕಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿದ್ದು, ತಾಲೂಕಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ನಿಗದಿಪಡಿಸಿದೆ.
     ಕುಷ್ಟಗಿ ತಾಲೂಕಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರ ನಿಲೋಗಲ್ಲ ವ್ಯಾಪ್ತಿಗೆ ನಿಲೋಗಲ್ಲ, ಅಚನೂರು, ರಾಂಪೂರ, ವಕ್ಕಂದುರ್ಗಾ, ಬೊಮ್ಮನಾಳ, ಬಸಾಪೂರ ಗ್ರಾಮಗಳನ್ನು ನಿಗದಿಪಡಿಸಲಾಗಿದೆ. ತುಗ್ಗಲದೋಣಿ ವ್ಯಾಪ್ತಿಯಲ್ಲಿ ತುಗ್ಗಲಡೋಣಿ, ಮಿಟ್ಟಲಕೋಡ, ಶ್ಯಾಡಲಗೇರಿ, ನೀರಲಕೊಪ್ಪ, ಬಿಳೇಕಲ್ಲ, ಎಂ.ಕುರುಬನಾಳ. ಹನುಮನಾಳ ವ್ಯಾಪ್ತಿಯಲ್ಲಿ ಹನುಮನಾಳ, ಕೋನಾಪೂರ, ಪರಮನಹಟ್ಟಿ, ಜಾಗೀರಗುಡದೂರು, ಗುಡ್ಡದೇವಲಾಪೂರ. ಮಾಲಗಿತ್ತಿ ವ್ಯಾಪ್ತಿಯಲ್ಲಿ ಅಕ್ಕೇರಿ, ಪಟ್ಟಲಚಿಂತಿ, ಕೊಡತಗೇರಾ, ರಂಗಾಪೂರ, ಕಡಿವಾಳ. ಹನಮಸಾಗರ ವ್ಯಾಪ್ತಿಯಲ್ಲಿ ಹನಮಸಾಗರ. ಕಬ್ಬರಗಿ ವ್ಯಾಪ್ತಿಯಲ್ಲಿ ಕಬ್ಬರಗಿ, ಬೀಳಗಿ, ಸೇಬಿನಕಟ್ಟಿ, ಮನ್ನೇರಾಳ, ಉಸಲಕೊಪ್ಪ. ಕಾಟಾಪೂರ ವ್ಯಾಪ್ತಿಯಲ್ಲಿ ಕಾಟಾಪೂರ, ಬಂಡರಗಲ್ಲ, ಯರಿಗೋನಾಳ, ಕಡೂರ, ಕಲ್ಲಗೋನಾಳ, ಹುಚನೂರ, ತುರಕನೂರ. ಹೂಲಗೇರಾ ವ್ಯಾಪ್ತಿಯಲ್ಲಿ ಹೂಲಗೇರಾ, ಹೂನಮಟ್ಟಿ, ತತ್ತಕುಂಟಿ, ಅಂಟರಠಾಣ, ಪುರತಗೇರಾ. ಕುಂಭಳಾವತಿ ವ್ಯಾಪ್ತಿಯಲ್ಲಿ ಕುಂಭಳಾವತಿ, ಹಾಬಲಕಟ್ಟಿ, ಗೊರಬಿಹಾಳ, ತುಮರಿಕೊಪ್ಪ, ಪರಸಾಪೂರ, ಮಜಾರ, ನರಸಾಪೂರ, ಹಿರೇಗೊಣ್ಣಾಗರ. ಬೆನಕನಾಳ ವ್ಯಾಪ್ತಿಯಲ್ಲಿ ಬೆನಕನಾಳ, ಯಲಬುಣಚಿ, ಚಿಕ್ಕಗೋಣ್ಣಾಗರ, ವಾರಿಕಲ್ಲ, ಗಡಚಿಂತಿ, ಮಾಸ್ತಿಕಟ್ಟಿ, ಮಡಿಕೇರಿ, ಮೂಗನೂರ. ಯರಗೇರ ವ್ಯಾಪ್ತಿಯಲ್ಲಿ ಮಾವಿನಿಟಗಿ, ಗುಡದೂರಕಲ್ಲ, ಮದ್ನಾಳ, ಚಂದ್ರಗಿರಿ, ತಿಮ್ಮನಹಟ್ಟಿ, ಬಾದಿಮನಾಳ, ವೆಂಕಟಾಪೂರ. ಅಡವಿಭಾವಿ ವ್ಯಾಪ್ತಿಯಲ್ಲಿ ಅಡವಿಭಾವಿ, ಹನುಮಗಿರಿ, ದೇವಲಾಪೂರ, ಮುದೋಟಗಿ, ಮೆಣಸಗೇರಾ ಮತ್ತು ತಾಂಡಾ, ಹುಲಸಗೇರಾ, ಮಿಯ್ಯಾಪೂರ, ಹೊಸಳ್ಳಿ, ಮಲಕಾಪುರ. ಚಳಗೇರಾ ವ್ಯಾಪ್ತಿಯಲ್ಲಿ ಚಳಗೇರಾ, ಜೂಲಕಟ್ಟಿ, ತೋಪಲಕಟ್ಟಿ, ಜುಂಜುಲಕೊಪ್ಪ, ಕಲಾಲಬಂಡಿ. ಕ್ಯಾದಿಗುಪ್ಪ ವ್ಯಾಪ್ತಿಯಲ್ಲಿ ಕ್ಯಾದಿಗುಪ್ಪ, ತೊನಸಿಹಾಳ, ಕಲಕೇರಿ, ನಡುವಲಕೊಪ್ಪ, ಕೇಸೂರ, ಉಪ್ಪಾರಬಸಾಪೂರ, ಕಡೇಕೊಪ್ಪ, ತಿಮ್ಮನಹಟ್ಟಿ, ಗೋತಗಿ. ಬಿಜಕಲ್ಲ ವ್ಯಾಪ್ತಿಯಲ್ಲಿ ಬಿಜಕಲ್ಲ, ಮಣ್ಣಕಲಕೇರಿ, ಕೌಲಬೋದೂರ ಮತ್ತು ತಾಂಡ, ಟೆಂಗುಂಟಿ, ಮಜರಾಬಸಾಪೂರ, ಕೆ.ಹೊಸೂರು, ಟಕ್ಕಳಕಿ, ಕೆ.ಗೋನಾಳ, ವಣಗೇರಾ. ಕಂದಕೂರು ವ್ಯಾಪ್ತಿಯಲ್ಲಿ ಕಂದಕೂರ, ಯಲಬುರ್ತಿ, ಶಾಕಾಪೂರ, ಉಮಳಿ, ಕುರುಬನಾಳ, ನೆರೆಬೆಂಚಿ. ತಳುವಗೇರ ವ್ಯಾಪ್ತಿಯಲ್ಲಿ ತಳುವಗೇರಾ, ನಿಡಶೇಸಿ, ಬ್ಯಾಲಿಹಾಳ, ಜಿ.ಬೆಂಚಮಟ್ಟಿ, ಮದಲಗಟ್ಟಿ, ಚಿಕ್ಕನಂದಿಹಾಳ. ಕೊರಡಕೇರಾ ವ್ಯಾಪ್ತಿಯಲ್ಲಿ ಕೊರಡಕೇರಾ, ಹಿರೇಬನ್ನಿಗೋಳ, ಕನಕೊಪ್ಪ, ಬಿಸನಾಳ, ದೊಣ್ಣೆಗುಡ್ಡ, ಬಿಂಗಿಕೊಪ್ಪ, ಹಿರೇನಂದಿಹಾಳ, ಪರಸಾಪೂರ. ಹಿರೇಮನ್ನಾಪೂರ ವ್ಯಾಪ್ತಿಯಲ್ಲಿ ಹಿರೇಮನ್ನಾಪೂರ, ಮಾಯದಹುಣಸಿ, ನೀರಲೂಟಿ, ಗುಮಗೇರಾ, ನಾಗರಾಳ, ಗಂಗನಾಳ. ಮುದೇನೂರ ವ್ಯಾಪ್ತಿಯಲ್ಲಿ ಮುದೇನೂರ, ಬನ್ನಟ್ಟಿ, ಕೆ.ಬೆಂಚಮಟ್ಟಿ, ಮಾದಾಪೂರ, ಕೂಡ್ಲೂರು, ತೆಗ್ಗಿಹಾಳ, ನವಲಹಳ್ಳಿ, ಹಂಚಿನಾಳ, ಮುಕ್ತಾಗುಡದೂರ. ದೋಟಿಹಾಳ ವ್ಯಾಪ್ತಿಯಲ್ಲಿ ದೋಟಿಹಾಳ, ಮಾಟೂರ, ರ್‍ಯಾವಣಕಿ, ಹೆಸರೂರ, ಜಾಲಿಹಾಳ, ಬಳೂಟಗಿ, ಮೇಗೂರ, ಶಿರಗುಂಪಿ. ಜುಮಲಾಪೂರ ವ್ಯಾಪ್ತಿಯಲ್ಲಿ ಜುಮಲಾಪೂರ, ಮುದ್ದಲಗುಂದಿ, ನಂದಾಪೂರ, ಅಡವಿಭಾವಿ, ಸಾಸ್ವಿಹಾಳ, ಹಾಗಲದಾಳ, ಐನಾಪೂರ, ಇದ್ಲಾಪೂರ, ಜಾಗೀರರಾಂಪೂರ, ಮ್ಯಾದರಡೊಕ್ಕಿ ಮತ್ತು ತಾಂಡಾ. ಹುಲಿಯಾಪೂರ ವ್ಯಾಪ್ತಿಯಲ್ಲಿ ಹುಲಿಯಾಪೂರ ಮತ್ತು ತಾಂಡಾ, ಲಿಂಗದಹಳ್ಳಿ, ಗುಡ್ಡದಹನುಮಸಾಗರ, ಹೊಮ್ಮಿನಾಳ, ಹೊನಗಡ್ಡಿ, ಮುಕ್ತಾರಾಂಪೂರ, ಹಿರೇಮುಕರ್ತಿನಾಳ, ವಿರುಪಾಪುರ, ಸಿದ್ದಾಪೂರ. ಕಳಮಳ್ಳಿ ವ್ಯಾಪ್ತಿಯಲ್ಲಿ ಕಳಮಳ್ಳಿ, ಕಿಲ್ಲಾರಹಟ್ಟಿ, ಕಳಮಳ್ಳಿತಾಂಡಾ, ಮಜರೆಅಮರಾಪೂರ, ಅಮರಾಪೂರತಾಂಡಾ, ಕೋನಾಪೂರ, ಕಿಡದೂರ, ಜೂಲಕುಂಟಿ, ಗರ್ಜನಾಳ, ನಾರಿನಾಳ, ಉಮಳಿರಾಂಪೂರ. ಕುಷ್ಟಗಿ ತಾಲೂಕಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರ ಮೇಣೇದಾಳ ವ್ಯಾಪ್ತಿಯಲ್ಲಿ ಮೆಣೇದಾಳ, ಚಿಕ್ಕತೆಮ್ಮನಾಳ, ಚಿಕ್ಕಮುರ್ಕತಿನಾಳ, ಪುರ, ಕನ್ನಾಳ, ಸಂಗನಾಳ, ಹಡಗಲಿ, ಗಂಗನಾಳ, ಮೆತ್ತಿನಾಳ, ಹಿರೇತೆಮ್ಮಿನಾಳ, ಬಚನಾಳ ಗ್ರಾಮಗಳನ್ನೊಳಗೊಂಡ ಪ್ರದೇಶ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಡಿ.೦೩ ರಂದು ವಿಶ್ವ ವಿಕಲಚೇತನರ ದಿನಾಚರಣೆ.
ಕೊಪ್ಪಳ, ಡಿ.೦೧ (ಕ ವಾ)  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಮತ್ತು ಜಿಲ್ಲೆಯ ವಿವಿಧ ವಿಕಲಚೇತನರ ಸೇವಾ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಡಿ.೦೩ ರಂದು ಬೆಳಿಗ್ಗೆ ೦೯ ಗಂಟೆಗೆ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
     ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ. ನಾಗರತ್ನ ಅವರು ಕಾಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ|| ಪ್ರವೀಣಕುಮಾರ್ ಜಿ.ಎಲ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ದಶರಥ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಂಸುಂದರ್, ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಜಿಲ್ಲಾ ಸರ್ಕಾರಿ ವಕೀಲ ಆಸಿಫ್‌ಅಲಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ ಪಾನಘಂಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ||ಲೋಕೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ||ಶಾರದಾ ನಿಂಬರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಜಿಲ್ಲಾ ವಕೀರ ಸಂಘದ ಕಾರ್ಯದರ್ಶಿ ರಾಜಶೇಖರ ಮಾಲೀಪಾಟೀಲ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
     ಕಾರ್ಯಕ್ರಮದ ಬಳಿಕ ಬೆಳಿಗ್ಗೆ ೧೦ ಗಂಟೆಯಿಂದ ವಿಕಲಚೇತನರ ಕ್ರೀಡಾಕೂಟಗಳು ನಡೆಯಲಿವೆ ಹಾಗೂ ಮಧ್ಯಾಹ್ನ ೩.೦೦ ಗಂಟೆಗೆ ಜಿಲ್ಲಾ ಪೊಲೀಸ್ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದೆ. 

Advertisement

0 comments:

Post a Comment

 
Top