PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೦೯ (ಕ ವಾ) ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕರ್ಕಿಹಳ್ಳಿ ಮತ್ತು ಕೊಪ್ಪಳದ ರೈತರಿಗೆ ಮತ್ತು ರೈತಮಹಿಳೆಯರಿಗೆ ಅಣಬೆ ಕೃಷಿಯ ಬಗ್ಗೆ ಒಂದು ದಿನದ ತರಬೇತಿ ನೀಡಲಾಯಿತು.
     ಈ ಕಾರ್ಯಕ್ರಮದಲ್ಲಿ ಗೃಹವಿಜ್ಞಾನ ವಿಷಯ ತಜ್ಞರಾದ ಕವಿತಾ ಉಳ್ಳಿಕಾಶಿಯವರು ಅಣಬೆ ಬೇಸಾಯ, ಮೌಲ್ಯವರ್ಧನೆ, ಪೌಷ್ಠಿಕತೆಯ ಮಹತ್ವ ಮತ್ತು ಅಣಬೆ ತಳಿಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಅಣಬೆ ಬೆಳೆಯಲು ಬೇಕಾದ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.

Advertisement

0 comments:

Post a Comment

 
Top