PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-01- ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಭಕ್ತ ಕನಕದಾಸರ ೫೨೮ನೇ ಜಯಂತಿ ಪ್ರಯುಕ್ತ ನೂತನ ಕನಕದಾಸರ ಶಂಕು ಸ್ಥಾಪನೆ ಭಾವಚಿತ್ರ ಮೆರವಣಿಗೆ, ಕುಂಭೋತ್ಸವ ಶ್ರೀ ಭಕ್ತಕನಕದಾಸ ಸೇವಾಸಮಿತಿ ನಾಮ ಫಲಕದ ಅನಾವರಣ, ಸಮಸ್ತಾ ಸದ್ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಈ ಕಾರ್ಯಕ್ರಮಕ್ಕೆ ಶ್ರೀ ಶಾಸಕರಾದ ರಾಘೆವೇಂದ್ರ ಹಿಟ್ನಾಳ ಶ್ರೀ ಭಕ್ತ ಕನಕದಾಸರ ಸೇವಾ ಸಮಿತಿ ನಾಮಫಲಕವನ್ನು ಅನಾವರಣಗೊಳಿಸಿದರು. ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕನಕದಾಸರು ಹಾಲು ಮತ ಸಮಾಜಕ್ಕೆ ಮಾತ್ರ ಸೀಮಿತವಾಗಿದವರಲ್ಲ ಇಡೀ ಜಗತ್ತಿಗೆ ಸೀಮಿತರಾದವರು ಕುರುಬನಾಗಿ ಹುಟ್ಟಿ ಹರ ಶರಣಾಗಿ ಬಾಳಿದವರು, ಸಮಾಜ ಸುದಾರಣೆಯ ಮಹಾನ್ ವ್ಯಕ್ತಿಯಾಗಿ ದಾಸ ಸಾಹಿತ್ಯವನ್ನು ಜಗತ್ತಿಗೆ ತಿಳಿಸಿಕೊಟ್ಟ ಶ್ರೇಷ್ಟ ಕವಿಗಳು ಇವರ ಆದರ್ಶಗಲನ್ನು ಅರಿತು ನಡೆದರೆ ಜಯಂತಿ ಆಚರಣೆ ಸಾರ್ಥಕ ಎಂದರು. ಮುಂದುವರೆದು ೩೭೧ಜೇ ವಿಧಿಯ ಲಾಭಗಳ ಬಗ್ಗೆ, ಹೂವಿನಾಳ - ಕುಣಿಕೇರಿ ಏತ ನೀರಾವರಿ ಯೋಜನೆ ಪ್ರಾರಂಭಿಸಲಿಕ್ಕೆ ತಮ್ಮ ಸಹಕಾರ ಮತ್ತು ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳ ಅಭಿವೃದ್ದಿಯ ಬಗ್ಗೆ ಮಾತನಾಡಿದರು.
    ತದನಂತರದಲ್ಲಿ ಚಾಂಧಪಾಷಾ ಬಹದೂರಬಂಡಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಊರಿನ ಹಿರಿಯ ಸಾಹಿತಿಗಳಾದ ವಿ.ಎಸ್ ಹಿರೇಮಠ, ಗ್ರಾಮಸ್ಥರ ಪರವಾಗಿ ಗ್ರಾಮದ ಬೇಡಿಕೆಗಳನ್ನು ಮೌಖಿಕವಾಗಿ ಶಾಸಕರಿಗೆ ತಲುಪಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಕೊಪ್ಪಳ ಕೆಂಡದ ಮಠದ ಕೆಂಡಯ್ಯ ಸ್ವಾಮಿಗಳು ಶ್ರೀ ಚನ್ನವೀರಯ್ಯ ಹಿರೇಮಠ ಸ್ವಾಮಿಗಳು ವಹಿಸಿದ್ದರು, ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಡಾ. ಸೀತಾ ಗೂಳಪ್ಪ ಹಲಗೇರಿ, ಬಸಣ್ಣ ಬಂಗಾಳಿ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ವಿರ
ಗವಿಶ್ರೀ ಶಾಲಾ ಮುಖ್ಯಶಿಕ್ಷಕರಾದ ಫಕೀರಪ್ಪ ಅಜ್ಜಿ ನಿರೂಪಿಸಿದರು, ಕವಿಗಳಾದ ವಿಶ್ವನಾಥಯ್ಯ ಹಿರೇಮಠ ಸ್ವಾಗತಿಸಿದರು, ರಾಮಣ್ಣ ಬೆಳವಿನಾಳ ವಂದಿಸಿದರು.

ಪಣ್ಣ ಕುರುಬರ್, ಭರಮಜ್ಜ ಗೊರವರ್, ಹನುಮಂತ ಗೂರಿಕಾರ, ಗ್ರಾ.ಪಂ ಉಪಾಧ್ಯಕ್ಷರಾದ ರಾಮಣ್ಣ ಬೆಳವಿನಾಳ, ಹ್ಯಾಟಿ ಗ್ರಾಮದ ರಾಮನಗೌಡ ಪೋ.ಪಾ, ನಗರ ಸಭೆಯ ಅಧ್ಯಕ್ಷರ ಪತಿ ರಾಮಣ್ಣ ಹಳ್ಳಿಗುಡಿ, ಗ್ರಾ.ಪಂ ಸದಸ್ಯರು ಮಹೇಶ ಗಣಪಾ, ಪಿಡಿಓ ವಿರನಗೌಡ್ರು, ವಿರಪ್ಪ ಮುತ್ತಾಳ, ಸೇವಾ ಸಮಿತಿಯ ಯುವಕರಾದ ಬೆಟದಪ್ಪ ಮೇಟಿ, ಫಕೀರಪ್ಪ ಅಜ್ಜಿ, ಮಾರುತಿ ಎಂ.ಡಿ, ಬಸವರಾಜ ಕೆ, ಈಶಪ್ಪ ಸೊಂಪೂರ, ಗವಿಸಿದ್ದಪ್ಪ ಕುರುಬರ್, ಅಮರೇಶ ಮುತ್ತಾಳ, ಹುಲಿಗೇಶ ಭಜಂತ್ರಿ ಗ್ರಾ,ಪಂ ಸದಸ್ಯರು, ಶಿವಕುಮಾರ ಕೆ, ಬಸವರಾಜ ಗಣಪಾ, ಸುರೇಶ ಕೆ, ದೇವರಾಜ ಕೆ,  ಬಸವರಾಜ ಜೀ, ಬಾಳು, ಪವನ,   ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top