PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೦೨ (ಕ ವಾ)  ಕೊಪ್ಪಳದ ಬಾಲಕರ ಬಾಲ ಮಂದಿರದ ಸ್ವಾಗತ ಘಟಕ್ಕೆ ದಾಖಲಾಗಿದ್ದ ಸಚಿನ್ (೧೩) ತಂದೆ ರಾಜು ಉಪ್ಪಾರ  ಎಂಬ ಬಾಲಕ ಕಾಣೆಯಾಗಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ನಗರ ಪೊಲೀಸ್ ಠಾಣೆಯ ಮಹಿಳಾ ಪಿ.ಎಸ್.ಐ ಫಕೀರಮ್ಮ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಕಾಣೆಯಾಗಿರುವ ಸಚಿನ್ ಎಂಬ ಬಾಲಕನನ್ನು ಕೊಪ್ಪಳದ ಬೇಂದ್ರೆ ಕಾಲೋನಿಯಲ್ಲಿರುವ ಬಾಲಕರ ಬಾಲ ಮಂದಿರದ ಸ್ವಾಗತ ಘಟಕದಲ್ಲಿ ಕಳೆದ ನ.೦೪ ರಂದು ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಬಾಲಕನು ನ.೨೮ ರಂದು ಬೆಳಿಗ್ಗೆ ೫.೩೦ ಗಂಟೆ ಅವಧಿಯಲ್ಲಿ ಬಾಲಮಂದಿರದಿಂದ ರಕ್ಷಕರ ಕಣ್ಣು ತಪ್ಪಿಸಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ. ಈ ಕುರಿತು ನಗರ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದ್ದು, ಕಾಣೆಯಾದ ಬಾಲಕನ ವಿವರ ಈ ಕೆಳಗಿನಂತಿದೆ. ಹೆಸರು : ಸಚಿನ್ ತಂದೆ ರಾಜು ಉಪ್ಪಾರ. ವಯಸ್ಸು : ೧೩ ವರ್ಷ. ಜಾತಿ : ಉಪ್ಪಾರ. ಸಾ : ಶಾಸ್ತ್ರಿ ಕಾಲೋ
     ಈ ಚಹರೆಯುಳ್ಳ ಬಾಲಕನ ಬಗ್ಗೆ ತಮ್ಮ ಠಾಣೆ ವ್ಯಾಪ್ತಿಯಲ್ಲಿ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಕೊಪ್ಪಳ ಕಂಟ್ರೋಲ್ ರೂಂ, ದೂರವಾಣಿ ಸಂಖ್ಯೆ : ೦೮೫೩೯-೨೩೦೧೦೦, ೨೩೦೨೨೨. ಪೊಲೀಸ್ ಇನ್ಸ್‌ಪೆಕ್ಟರ್, ನಗರ ಪೊಲೀಸ್ ಠಾಣೆ, ಕೊಪ್ಪಳ, ಮೊಬೈಲ್ ಸಂಖ್ಯೆ : ೯೪೮೦೮೦೩೭೪೫ ಅಥವಾ ಕೊಪ್ಪಳ   ನಗರ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ : ೦೮೫೩೯-೨೨೦೩೩೩ ಇವರನ್ನು ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಮಹಿಳಾ ಪಿ.ಎಸ್.ಐ ಫಕೀರಮ್ಮ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿ, ಭಾಗ್ಯನಗರ, ಕೊಪ್ಪಳ. ಎತ್ತರ : ಸುಮಾರು ೪ಫೀಟು ೯ ಇಂಚು. ಚಹರೆ ಪಟ್ಟಿ : ತೆಳ್ಳನೆಯ ಮೈಕಟ್ಟು, ದುಂಡು ಮುಖ, ಗೋಧಿಗೆಂಪು ಮೈಬಣ್ಣ, ಅಗಲ ಕಣ್ಣು, ಕಪ್ಪು ತಲೆ ಕೂದಲು, ಬಲಗಾಲಲ್ಲಿ ಹಳೆಯ ಗಾಯದ ಕಲೆ ಇದೆ. ಧರಿಸಿದ ಉಡುಪುಗಳು : ನೀಲಿ ಟೀಷರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.

Advertisement

0 comments:

Post a Comment

 
Top