ಕೊಪ್ಪಳ-20- ಜಿಲ್ಲೆಯ ಎಲ್ಲಾ ಟಿಇಟಿ ಮತ್ತು ಸಿಇಟಿಯಲ್ಲಿ ಉತ್ತೀರ್ಣರಾಗಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತೀರುವ ನಿರುದ್ಯೋಗಿ ಯುವಕ ಯುವತಿಯರು ಇಂದು ಜಿಲ್ಲಾದಿಕಾರಿಗಳ ಕಚೇರಿಗೆ ತೆರಳಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅಂತಿಮ ಆಯ್ಕೆ ಪಟ್ಟಿಯನ್ನು ತಕ್ಷಣ ಪಕ್ರಟಣೆ ಮಾಡಲು ಶಿಕ್ಷಣ ಸಚಿವ
ಹೀಗೆ ಮುಂದುವರೆದಲ್ಲಿ ರಾಜ್ಯಾಧ್ಯಂತ ಹೋರಾಟ ಮಾಡುವುದಾಗಿ ಅಭ್ಯರ್ಥಿಗಳು ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಮರಿಯಪ್ಪ, ಚಂದ್ರಪ್ಪ, ಮಂಜುನಾಥ. ಬಿ. ಕೆ, ಮಂಜುನಾಥ ಟಿ, ಮಾರುತಿ ಮ್ಯಾಗಳಮನಿ, ಈಶ್ವರ ಘಾಟಿ, ಐಯ್ಯನಗೌಡ, ರೇಖಾ ಮುಂತಾದವರು ಉಪಸ್ಥಿತರಿದ್ದರು.
ರಿಗೆ ಮತ್ತು ಶಿಕ್ಷಣ ಇಲಾಖೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. ಸದರಿ ಹುದ್ದೇಗಳಿಗೆ ಮೇ ೨೩-೨೦೧೫ ರಂದು ಸ್ಪರ್ದಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಜುಲೈ ತಿಂಗಳಿನಲ್ಲಿ ಅರ್ಹರಾದವರ ೧:೨ ಪಟ್ಟಿಯನ್ನು ಪ್ರಕಟಿಸಿ ಮೂಲ ದಾಖಲೆಗಳ ಪರಿಶಿಲನೆ ನಡೆಸಿ ಸುಮಾರು ನಾಲ್ಕು ತಿಂಗಳಾದರು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸದೇ ಇರುವುದು ಅಭ್ಯರ್ಥಿಗಳಲ್ಲಿ ಆತಂಕ ಉಂಟುಮಾಡಿದೆ. ಈ ಕುರಿತು ಸಂಬಂದಪಟ್ಟ ಇಲಾಖೆ ಗಮನಕ್ಕೆ ತಂದರು ವೃಥಾ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ಇಲಾಖೆ ಮತ್ತು ಅಧಿಕಾರಿಗಳ ಮೇಲೆ ಅಸಮಾಧಾನ ಉಂಟಾಗಿದೆ. ಹೀಗೆ ಮುಂದುವರೆದಲ್ಲಿ ರಾಜ್ಯಾಧ್ಯಂತ ಹೋರಾಟ ಮಾಡುವುದಾಗಿ ಅಭ್ಯರ್ಥಿಗಳು ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಮರಿಯಪ್ಪ, ಚಂದ್ರಪ್ಪ, ಮಂಜುನಾಥ. ಬಿ. ಕೆ, ಮಂಜುನಾಥ ಟಿ, ಮಾರುತಿ ಮ್ಯಾಗಳಮನಿ, ಈಶ್ವರ ಘಾಟಿ, ಐಯ್ಯನಗೌಡ, ರೇಖಾ ಮುಂತಾದವರು ಉಪಸ್ಥಿತರಿದ್ದರು.

0 comments:
Post a Comment