PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ.೨೭ (ಕ ವಾ) ಗದಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ವರ್ಗಾವಣೆಯಾಗಿ ಬಾಲಮಂದಿರದ ಸ್ವಾಗತ ಘಟಕಕ್ಕೆ ಬಂದಿರುವ ಕೊಪ್ಪಳ ಜಿಲ್ಲೆಯ ಬಾಲಕ ಆಲಂಪಾಷಾನ ಪೋಷಕರ ಪತ್ತೆಗೆ ಸಹಕರಿಸುವಂತೆ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
      ಕೊಪ್ಪಳ ಜಿಲ್ಲೆಯವನಾಗಿರುವುದರಿಂದ ಬಾಲಕ ಆಲಂಪಾಷಾನನ್
ಬಾಲಕನ ವಿವರ : ಹೆಸರು : ಆಲಂಪಾಷಾ, ವಯಸ್ಸು : ೧೨ ವರ್ಷ, ತಂದೆ : ಹುಸೇನಿ, ತಾಯಿ :ಫಾತಿಮಾ ಗೋಸಾ, ಭಾಷೆ : ಹಿಂದಿ, ಜಾತಿ : ಮುಸ್ಲಿಂ, ತೂಕ : ೨೦ ಕೆ.ಜಿ, ಎತ್ತರ : ೧೪೪ ಸೆಂ.ಮೀ, ಬಣ್ಣ ಮತ್ತು ಚಹರೆ : ಕೆಂಪು ಮೈಬಣ್ಣ, ಹಣೆಯ ಮೇಲೆ ತೆರೆಚಿದ ಗಾಯದ ಕಲೆ ಇರುತ್ತದೆ. ಮೇಲ್ಕಣಿಸಿದ ಚಹರೆಯುಳ್ಳ ಬಾಲಕನ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳ. ಸರ್ಕಾರಿ ಬಾಲಕರ ಬಾಲ ಮಂದಿರ, ವಿಜಯನಗರ ಬಡಾವಣೆ, ಅನ್ನಪೂರ್ಣೇಶ್ವರಿ ದೇವಸ್ಥಾನದ ಹಿಂದುಗಡೆ, ಕಿನ್ನಾಳ ರಸ್ತೆ, ಕೊಪ್ಪಳ, ದೂರವಾಣಿ ಸಂಖ್ಯೆ : ೦೮೫೩೯-೨೦೦೭೫೫, ೯೭೪೩೪೨೫೨೫೯, ೯೯೭೨೫೨೪೨೧೫, ೦೮೫೩೯-೨೨೫೦೩೦ ಇವರನ್ನು ಸಂಪರ್ಕಿಸುವಂತೆ ಬಾಲಕರ ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.
ನು ಅ.೧೭ ರಂದು ಬಾಲಮಂದಿರದ ಸ್ವಾಗತ ಘಟಕಕ್ಕೆ ದಾಖಲಿಸಿಕೊಳ್ಳಲಾಗಿದ್ದು, ಅ.೨೯ ರಂದು ನಡದ ಜಿಲ್ಲಾ ಮಕ್ಕಳ ಕಲ್ಯಾಣ ಸಭೆಯಲ್ಲಿ ಜಿಲ್ಲೆಯಲ್ಲಿರುವ ಬಾಲಕನ ಆರೈಕೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಕ್ಕೆ ವರ್ಗಾಯಿಸಲಾಗಿದೆ. ಆದರೆ ಬಾಲಕನು ಪೋಷಕರ ವಿಳಾಸದ ಸರಿಯಾದ ಮಾಹಿತಿ ನೀಡುತ್ತಿಲ್ಲವಾದ ಕಾರಣ ಸಾರ್ವಜನಿಕರು ಬಾಲಕನ ಪೋಷಕರ ಪತ್ತೆಗೆ ಸಹಕರಿಸುವಂತೆ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಕೋರಿದ್ದಾರೆ.

Advertisement

0 comments:

Post a Comment

 
Top