PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-23-  ಶಿವಪೂರ ಗ್ರಾಮದಲ್ಲಿ ವ್ಹಿ.ಎಸ್.ಎಸ್.ಎನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಮುನಿರಾಬಾದ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಸಿಂಡಿಕೇಟ್ ಬ್ಯಾಂಕ ವ್ಯವಸ್ಥಾಪಕರಾದ ಶ್ರೀ ರಾಮಚಂದ್ರ ಕೆ.ವಿ ರವರು ಮಾತನಾಡುತ್ತಾ ಪಿ.ಎಮ್.ಜೆ.ಜೆ.ಬಿ.ವಾಯ್ ಮತ್ತು ಪಿ.ಎಮ್.ಎಸ್.ಬಿ.ವಾಯ್ ಯೋಜನೆಯ ಬಗ್ಗೆ ಮಾಹಿತಿ ತಿಳಿಸುತ್ತಾ ಶಿವಪೂರ ಗ್ರಾಮದ ದಿ ವಾಣಿಶ್ರಿ ಗಂಡ ನಗರೇಶ ಇವರು ಸಿಂಡಿಕೇಟ್ ಮುನಿರಾಬಾದ ಯಲ್ಲಿ ಎಸ್ಬಿ ಖಾತೆ ಹೊಂದಿದ್ದು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಸದ್ರಿ ಮಹಿಳೆ ಕ್ಯಾನ್ಸರನಿಂದ ತುತ್ತಾಗಿ ೨ ತಿಂಗಳ ಹಿಂದೆ ಮೃತ್ತಪಟ್ಟಿರುವುದರಿಂದ ಅವರ ನಾಮಿನಿಯಾದ ನಗರೇಶ ರವರ ಎಸ್.ಬಿ ಖಾತೆಗೆ ೨ ಲಕ್ಷ ರೂ ಜಮವಾಗಿರುತ್ತದೆ. ಇದರ ಅಂಗವಾಗಿ ಶಿವಪೂರ ಗ್ರಾಮವು ಸಿಂಡಿಕೇಟ್ ಬ್ಯಾಂಕಿನ  ಸೇವಾ ಗ್ರಾಮವಾಗಿರುವುದರಿಂದ ಪ್ರತಿಯೊಂದು ಕುಟುಂಬವು ಜನಧನ ಯೊಜನಡೆಯಲ್ಲಿ ಎಸ್.ಬಿ ಕತೆಯನ್ನು ಹೊಮದಿರುತ್ತದೆ ಪ್ರತಿಯೊಬ್ಬರು ಸಾಮಾಜಿಕ ಬದ್ರತೆ ಯೋಜನೆಗಳಾದ ಪಿ.ಎಮ್.ಜೆ.ಜೆ.ಬಿ.ವಾಯ್ ಮತ್ತು ಪಿ.ಎಮ್.ಎಸ್.ಬಿ.ವಾಯ್ ಯೋಜನೆ ಹಾ
     ಕುಮಾರಗೌಡ ಲೀಡ್ ಬ್ಯಾಂಕ ವ್ಯವಸ್ಥಾಪಕರು ಸಿಂಡಿಕೇಟ್ ಬ್ಯಾಂಕ ಬಳ್ಳಾರಿಯವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ  ಗ್ರಾಮೀಣ ಭಾಗದ ಜನರು ಬ್ಯಾಂಕಿನಿಂದ ಕೃಷಿ ಚಟುವಟಿಕೆಗಳ ಸಾಲ, ಸಣ್ಣ ವ್ಯಾಪರಸ್ಥರ ಸಾಲ, ಹಾಗೂ ಸ್ವಸಹಾಯ ಸಂಘಗಳುಮ, ಜಂಟಿ ಬಾದ್ಯತೆ ಗುಂಪು ಬ್ಯಾಂಕಿನಿಂದ ನಿಯಮಾನುಸಾರವಾಗಿ ಸಾಲ ಪಡೆದು ಸಾಮಾಜಿಕ ಆರ್ಥಿಕ ಅಭಿವೃದ್ದಿ ಹೊಂದಿ ಸಕಾಲಕ್ಕೆ ಮರುಪಾವತಿಸುವಂತೆ ತಿಳಿಸಿದರು.   ಚನ್ನಬಸಯ್ಯ ಶಿವಪೂರ, ಮಾರುತಿ ಜಂಟಿ ಬಾದ್ಯತೆ ಗುಂಪು ಮಹಮ್ಮದ ನಗರ ರವರಿಗೆ ಸಾಲದ ಚಕ್‌ನ್ನು ವಿತರಿಸಿದರು. 
    ಕಾರ್ಯಕ್ರಮದ ಪ್ರಾರ್ಥನೆಯನ್ನು ಹನುಮಂತಪ್ಪ ಶಿವಪೂರ, ಸ್ವಾಗತ ಹನುಮೇಶ, ಉದ್ಘಾಟಕರು ಶ್ರೀಮತಿ ಮೈತ್ರಮ್ಮ, ರೂಪಲಾ ನಾಯ್ಕ ಅಧ್ಯಕ್ಷರು ಗ್ರಾ.ಪಂ ಶಿವಪೂರ, ಉಪಾಧ್ಯಕ್ಷರಾದ ಸುರೇಶ, ಶ್ರೀನಿವಾಸ ರಾವ್ ಅಧ್ಯಕ್ಷರು ವಿ.ಎಸ್.ಎಸ್.ಎನ್ ಶಿವಪೂರ, ವಿಶ್ವನಾಥರಾಜು ನಾರಾಯಣ ಪೇಟೆ ಲ್ಯಾಂಡ್ ಲಾರ್ಡ, ಪಿ.ಎಮ್.ಜೆ.ಜೆವಾಯ್ ಯೋಜನೆಯಡಿಯಲ್ಲಿ ನಗರೇಶ ರವರಿಗೆ ಚಕ್ ವಿತರಣೆ ಮಾಡಲಾಯಿತು. ಮಾರುತಿ ಜಂಟಿ ಬಾದ್ಯತೆ ಗುಂಪು ಸಾಲ ವಿತರಣೆ ವಂದನಾರ್ಪಣೆಯನ್ನು ಹನುಮಂತಪ್ಪ ಶಿವಪೂರ.
ಗೂ ಸರರ್ಕಾರದ ಸಾಲ ಸೌಲಭ್ಯ ಪಡೆದುಕೊಳ್ಳಲ್ಲು ಸಾರ್ವಜನಿಕರಲ್ಲಿ ತಿಳಿಸಿದೆ.

Advertisement

0 comments:

Post a Comment

 
Top