PLEASE LOGIN TO KANNADANET.COM FOR REGULAR NEWS-UPDATES


ಯಲಬುಗಾ-  ಕೊಪ್ಪಳ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಶ್ವ ಮಹಾ  ಪರಿಷತ್ ಶ್ರೀಗುರು ಮಹಿಪತರಾಜ ನೇತ್ರ  ಸೇವಾ ಸಂಸ್ಥೆ, ವಿನಾಯಕ ಆಪ್ಟಿಕಲ್ಸ್ ಕುಷ್ಟಗಿ, ಹಾಗೂ ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ, ವಿನಾಯಕ ನೇತ್ರ ಸೆವಾ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಅ. ೩ ರಂದು ಸೋಮುವಾರ ದಿವಸ ತಾಲೂಕಿನ ಹಿರೇವಂಕಲಕುಂಟಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ.ಕಾರಣ ಆರ್ಥಿಕವಾಗಿ ಹಿಂದುಳಿದ, ಕಡು ಬಡವರಿಗಾಗಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ ಸಾರ್ವಜನಿಕರು ಇದರ ಸದುಪಯೋಗಪಡೆದುಕೋಳ್ಳಬೇಕು. ತಾಲೂಕಿನ ಹಿರೇವಂಕಲಕುಂಟಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ ೮:೦೦ ರಿಂದ ೧:೦೦ ಗಂಟೆಯವರೆಗೂ ಹೆಸರನ್ನು ನೊಂದಾಯಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ ವಿನಾಯಕ ಆಪ್ಟಿಕಲ್ಸ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರ ಸರಕಾರಿ ಆಸ್ಪತ್ರೆ ಎದುರಿಗೆ, ಕುಷ್ಟಗಿ ಹಾಗೂ ಬ್ರ್ಯಾಂಚ್ ಅಯ್ಯನಗೌಡ ಮಾಲಿ ಪಾಟೀಲ್ ಕಾಂಪ್ಲೇಕ್ಷ್, ಬಸ್ ನಿಲ್ದಾಣ ಹತ್ತಿರ ತಾವರಗೇರಾ. ವಿನಾಯಕ ನೇತ್ರ ಸೆವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ ೯೮೪೫೦೩೪೯೧೭, ಕಾರ್ಯದರ್ಶಿ ಪ್ರಭು ಜ್ಯಾಗೀರದಾರ ೯೬೬೩೬೯೭೮೪೮ ಇವರನ್ನು  ಸಂರ್ಪಕಿಸಲು ಕೋರಲಾಗಿದೆ.                                                                

Advertisement

0 comments:

Post a Comment

 
Top