PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ಮಟ್ಕಾ ಜೂಜಾಟಗಳು ಬದುಕಿನಲ್ಲಿ ನೆಮ್ಮದಿ ಕಸಿದುಕೊಳ್ಳುತ್ತವೆ ಎಂದು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಧರ ದೊಡ್ಡಿ ಹೇಳಿದರು.
ನಗರದಲ್ಲಿ ಗುರುವಾರ ಸಂಜೆ ೩೩ನೇ ವಾರ್ಡಿನಲ್ಲಿ ಮಟ್ಕಾ ಬುಕ್ಕಿ ಕಣಿಮೆಪ್ಪ ಇವರ ಮನೆ ಮುಂದೆ ಸಭೆ ನಡೆಸಿ ಮಾತನಾಡಿದ ಅವರು, ಈ ಆಟಗಳು ಸಮಾಜದಲ್ಲಿ ಮರ್ಯಾದೆ ಕಳೆದು ಹರಾಜು ಹಾಕುತ್ತಿವೆ ಎಂದರು. ಈ ಸಂದರ್ಭದಲ್ಲಿ ಮಟ್ಕಾ ಬುಕ್ಕಿ ಕಣಿಮೆಪ್ಪ ಅವರ ಪತ್ನಿ ಶಿವಮ್ಮ ಮಾತನಾಡಿ, ಮಟ್ಕಾ ಜೂಜಾಟ ಇನ್ನೂ ಮುಂದೆ ನಡೆಸುವುದಿಲ್ಲ. ವ್ಯಾಪಾರ ಮಾಡಿ ಜೀವನ ನಡೆಸುತ್ತಿವೆ ಎಂದು ಪ್ರತಿಜ್ಞೆ ಮಾಡಿದರು. ಕೇರಿಯ ಯಜಮಾನರು ಕೂಡಾ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಭರವಸೆ ನೀಡುವ ಮೂಲಕ ಸಭೆ ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು. ಈ ಸಭೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.

Advertisement

0 comments:

Post a Comment

 
Top