PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ನಗರದ ಪ್ರಸಿದ್ಧ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿರುವ ಶ್ರೀ ಜಂಬುನಾಥ ಸ್ವಾಮಿಯ ರಥೋತ್ಸವವು ಏಪ್ರಿಲ್ ೨ರಂದು ನಡೆಯಲಿದೆ.
ಅಂದು ಬೆಳಿಗ್ಗೆ ೯ರಿಂದ ಮಡಿತೇರು ಎಳೆಯಲಿದ್ದು, ಸಂಜೆ ೫ಕ್ಕೆ  ಜಂಬುನಾಥ ಸ್ವಾಮಿಯ ರಥೋತ್ಸವ ಜರುಗಲಿದೆ. ಏಪ್ರಿಲ್ ೩ರಂದು ಕಡುಬಿನ ಕಾಳಗ ಏಪ್ರಿಲ್ ೯ರಂದು ಗಂಗೆ ಪೂಜೆ ನಡೆಯಲಿದ್ದು, ರಥೋತ್ಸವದಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಈ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಂಬುನಾಥ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಜಂಬುನಾಥ ಸ್ವಾಮಿ ಅಭಿವೃದ್ಧಿ ಸೇವಾ ಸಮಿತಿ ಕೋರಿದೆ. 

Advertisement

0 comments:

Post a Comment

 
Top