ಕೊಪ್ಪಳ :: ನಗರದ ಕಿನ್ನಾಳ ರಸ್ತೆಯ ಹೇಮಗಿರಿ ಬಡಾವಣೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಾ.೫ ರಂದು ಹುಣ್ಣಿಮೆ ನಿಮಿತ್ತ ರಾತ್ರಿ ೮ ಗಂಟೆಗೆ ಬೆಳದಿಂಗಳೂಟ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ನೀಡಿದ್ದು, ಬೆಳದಿಂಗಳೂಟಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದ್ದಾರೆ. ಈ ಬಾರಿಯ ಬೆಳದಿಂಗಳೂಟದಲ್ಲಿ ರೊಟ್ಟಿ, ಮಡಿಕೆಕಾಳಿನ ನಾನಾ ಬಗೆಯ ಫಲ್ಯ ಹಾಗೂ ಬೂಂದಿಯನ್ನು ಮಾಡಲಾಗಿದೆ. ದೇವಸ್ಥಾನದ ಬಯಲಿನಲ್ಲಿ ಚಂದ್ರನ ಬೆಳಕಿನಲ್ಲಿ ನಡೆಯುವ ಈ ಬೆಳದಿಂಗಳೂಟವನ್ನು ಪ್ರತಿ ತಿಂಗಳು ದೇವಸ್ಥಾನ ಸಮಿತಿ ಆಯೋಜನೆ ಮಾಡುತ್ತಾ ಬರುತ್ತಿದೆ.
0 comments:
Post a Comment