PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ದಿನಾಂಕ ೨೯-೦೩-೨೦೧೫ರಂದು ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರು ಆಯೋಜಿಸಿದ ’ವಿತ್ತ ಸಮರ-೨೦೧೫’ ಈ ಕಾರ್ಯಕ್ರಮದಲ್ಲಿ ’ಅಧ್ಯಾಪಕ’-ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಸ್ಪರ್ಧೆಯಲ್ಲಿ  ಅಜಯಕುಮಾರ, ಪ್ರಾಧ್ಯಾಪಕರು ಇವರ ಮಾರ್ಗದರ್ಶನದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಎಂ.ಕಾಮ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ   ಸಂದೇಶ ಸಿಂಗ್,  ಸಂತೋಷ ಮತ್ತು   ನವೀನಕುಮಾರಯ್ಯ ಇವರು ಭಾಗವಹಿಸಿ ದ್ವಿತೀಯ ಬಹುಮಾನ ನಗದು ರೂ. ೩೦೦೦/- ಪಡೆದಿದ್ದಕ್ಕಾಗಿ ಪರಮಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಸದರಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಮಹಾವಿದ್ಯಾಲಯಗಳ ಮೂವತ್ತಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. 

Advertisement

0 comments:

Post a Comment

 
Top