PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿ ಕೆಲಸ ಮಾಡಿದ್ದ ಮತ್ತು ಸಾಮಾಜಿಕ ಕಳಕಳಿ ಹೊಂದಿದ್ದ ಶಿಕ್ಷಕ ಬಸವರಾಜ ಬಂಡಿಹಾಳ (೩೮) ಇಂದು ಬೆಳಿಗ್ಗೆ ನಿಧನರಾದರು. ಕಳೆದ ಕೆಲವು ತಿಂಗಳುಗಳಿಂದ ಬೋನ್ ಕಾನ್ಯರ್ ನಿಂದ ಬಳಲುತ್ತಿದ್ದರು.
    ಆಪ್ತವಲಯದಲ್ಲಿ ರ‍್ಯಾಂಬೋ ಬಸವರಾಜ ಎಂದೇ ಖ್ಯಾತರಾಗಿದ್ದರು. ಅಂತ್ಯಕ್ರಿಯೆ ಇಂದು  ಕೊಪ್ಪಳದಲ್ಲಿ ನೇರವೇರಿಸಲಾಗುವದು. ಮೃತರು ತಂದೆ,ತಾಯಿ, ಸಹೋದರ, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು,ಸ್ನೇಹಿತರನ್ನು ಅಗಲಿದ್ದಾರೆ. ಬಸವರಾಜ ಬಂಡಿಹಾಳರ ನಿಧನಕ್ಕೆ ನಗರದ ಗಣ್ಯರು, ಸ್ನೇಹಿತರು, ಶಿಕ್ಷಕರು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ಕುಟುಂಬವರ್ಗಕ್ಕೆ ಮತ್ತು ಆತ್ಮೀಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

Advertisement

0 comments:

Post a Comment

 
Top