PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ನಗರದಲ್ಲಿ ಸೋಮವಾರ ಅಂಜುಮಾನ್ ಖಿದ್ಮತೆ ಇಸ್ಲಾಂ ಕಮಿಟಿಯ ಪದಾಧಿಕಾರಿಗಳ ಸ್ಥಾನಕ್ಕೆ ಮಹಮದ್ ಇಮಾಮ್ ನಿಯಾಜಿ ನೇತೃತ್ವದಲ್ಲಿ ೧೧ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ.
ಶಾದಿಮಹಲ್‌ನಲ್ಲಿ ಸಹಾಯಕ ಚುನಾವಣಾಧಿಕಾರಿ ಸೈಯದ್ ಫಿರೋಜ್ ಪೀರಾನ್ ಇವರಿಗೆ ಎಚ್.ಎನ್.ಎಫ್. ಮಹಮದ್ ನಿಯಾಜಿ ಸೇರಿದಂತೆ ಜಿ.ನಾಸೀರ್, ಸೈಯದ್ ಅಬ್ದುಲ್ ವಹಿದ್, ಬಿ.ಮಹಮ್ಮದ್ ಅನ್ಸರ್ ಬಾಷ, ಮಹಮ್ಮದ್  ಇಲಿಯಾಸ್, ಎನ್.ಅಬ್ದುಲ್ ಖದೀರ್, ಬಿ.ಬಾಷ, ಎಮ್.ಫೈರೋಜ್ ಖಾನ್, ಕೆ.ಅಮೀರ್ ಬಾಷ, ಬಿ.ಜಾಕೀರ್, ಕೆ.ತಬರೇಜ್ ರವರು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಎಚ್.ಎನ್.ಎಫ್. ಮಹಮದ್ ನಿಯಾಜಿ ಮಾತನಾಡಿ, ಅಂಜುಮಾನ್ ಖಿದ್ಮತೆ ಇಸ್ಲಾಂ ಕಮಿಟಿಗೆ ೨೭೭೨ ಸದಸ್ಯರು ಸದಸ್ಯತ್ವ ಪಡೆದಿರುವುದು ಪ್ರಥಮವಾಗಿದೆ. ೫೦ ವರ್ಷಗಳ ನಂತರ ಚುನಾವಣೆ ನಡೆಯುತ್ತಿದ್ದು ತಮ್ಮ ಎಲ್ಲಾ ಗುಂಪಿನ ಸದಸ್ಯರು ಆಯ್ಕೆಯಾಗುತ್ತಾರೆಂಬ ವಿಶ್ವಾಸ ವ್ಯಕ್ತ ಪಡಿಸಿದರು. 

Advertisement

0 comments:

Post a Comment

 
Top