PLEASE LOGIN TO KANNADANET.COM FOR REGULAR NEWS-UPDATES


ದೇಶದ ಪ್ರಪ್ರಥಮ ಹೋರಾಟಗಾರ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಷೇರ್ ಎ ಮೈಸೂರು ಹಜರತ್ ಟಿಪ್ಪುಸುಲ್ತಾನ್ ರವರ ಜಯಂತಿ ಆಚರಣೆಯನ್ನು ಸರ್ಕಾರದಿಂದ ಆಚರಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಚರಿಸುವ ಅಧಿಕೃತ ಭರವಸೆ ಪ್ರಕಟಿಸಿರುವ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಮಂಗಳವಾರ ಸಂಜೆ ಟಿಪ್ಪು ಸುಲ್ತಾನ ಸರ್ಕಲ್ ಬಳಿ ಸಹಸ್ರಾರು ಜನ ಮುಸ್ಲಿಂ ಸಂಘಟನೆಗಳು ಸೇರಿ ಸಂಭ್ರಮ ಆಚರಿಸಿ, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಸಿ ಹರ್ಷ ವ್ಯಕ್ತಪಡಿಸಿ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕವಾಗಿ ಸ್ವಾಗತಿಸಿದರು.
ಕಳೆದ ಬಹುದಶಕಗಳಿಂದ ಈ ಬೇಡಿಕೆ ಸರ್ಕಾರದ ಮುಂದಿಟ್ಟು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದು, ಅದರಂತೆ ಮುಖ್ಯಮಂತ್ರಿಯವರು ಆಚರಣೆಗೆ ಮಾತ್ರ ಸರ್ಕಾರ ಸಿದ್ದವಿದೆ. ಅಂದು ರಜೆ ಘೋಷಿಸುವುದಿಲ್ಲ. ಜಯಂತಿ ಆಚರಣೆ ಮಾತ್ರ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಭರವಸೆಗೆ ಬೆಂಬಲಿಸಿ ಕೊಪ್ಪಳದಲ್ಲಿ ಮುಸ್ಲಿಂ ಸಂಘಟನೆ ಸಂಭ್ರಮಿಸಿದರು. 
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಟಿಪ್ಪು ಸುಲ್ತಾನ್ ಕಮೀಟಿ ತಾಲೂಕ ಅಧ್ಯಕ್ಷ ಶೌಖತ್ ಅಲಿ, ಸರ್ಕಲ್ ಕಮೀಟಿ ಅಧ್ಯಕ್ಷ ಚಾಂದಪಾಷಾ ಬೂದಿ, ಕಾರ್ಯದರ್ಶಿ ಖಾಜಿ ಸದ್ದಾಂ, ಮಹೆಬೂಬ ಮಚ್ಚಿ, ಶಬ್ಬೀರ್ ಕರ್ಕಿಹಳ್ಳಿ, ಆಜಂ ಹುಸೇನಿ, ಅಬ್ಬಾಸ್ ಅಲಿ, ಎಂ.ಡಿ.ಜಹೀರ್ ಅಲಿ, ಇಬ್ರಾಹಿಂ, ಅಯುಬ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 
  

Advertisement

0 comments:

Post a Comment

 
Top