ಅವರು ಮಂಗಳವಾರ ಸಮೀಪದ ಭಾಗ್ಯನಗರ ಗ್ರಾಮದ ೧ ನೇ ವಾರ್ಡಿನ ನೂರಾರು ಮಹಿಳೆಯರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ನೆರೆದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಜನಸೇವೆ ಮಾಡುವದಾಗಿ ಅಧಿಕಾರಕ್ಕೆ ಬಂದರವು ಜನತೆಯನ್ನು ಮನೆಗೆ ಅಲೆಸುವಂತೆ ನಾನು ಮಾಡುವುದಿಲ್ಲ, ಆಯಾ ಮತದಾರರೆಲ್ಲಾ ಆಜ್ಞೆಮಾಡಿದರೆ ಸಾಕು ಅಲ್ಲಿನ ಯಾವುದೇ ಸಮಸ್ಯೆ ಇರಲಿ ತಕ್ಷಣ ಪರಿಹರಿಸುವೇ. ಎಸ್ಎಂಎಸ್ ಮೂಲಕ ಸಮಸ್ಯೆ ತಿಳಿಸಿದರೆ ಪರಿಹಾರ ಕಂಡುಕೊಳ್ಳುವುದು ಒಟ್ಟಾರೆ ಅಧಿಕಾರ ಮತದಾರರ ಕೈಯಲ್ಲಿ ಎಂಬುದನ್ನು ಸಾಬೀತು ಪಡಿಸುತ್ತೇನೆ. ಅದೇ ರೀತಿ ಜನತೆಯೂ ದಕ್ಷ, ಪ್ರಾಮಾಣಿಕ ಹಾಗೂ ಜನಚಿಂತಕರಿಗೆ ನಮ್ಮ ಮತ ಎಂಬುದನ್ನು ಸಾಬೀತು ಪಡಿಸಲು ಈ ಚುನಾವಣೆ ಸಾಕ್ಷಿಯಾಗಬೇಕಿದೆ. ಪ್ರತಿಯೊಬ್ಬ ಮತದಾರ ಈ ಚುನಾವಣೆಯಲ್ಲಿ ಅದನ್ನು ನಿಜಗೊಳಿಸಲು ಕಡ್ಡಾಯ ಮತದಾನದ ಮೂಲಕ ಜೆಡಿಎಸ್ ಪಕ್ಷ ಅತ್ಯಧಿಕ ಮತಗಳಿಂದ ವಿಜಯಶಾಲಿಯಾಗಲು ತಾವೇಲ್ಲಾ ಬೆಂಬಲಿಸಿ ಹರಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ದಿನದಿಂದ ದಿನಕ್ಕೆ ವಿವಿಧ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷದ ದಕ್ಷತೆ ಹಾಗೂ ಜನಪರ ಕಾರ್ಯಗಳನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಮತಷ್ಟು ಆನೆ ಬಲ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೊಪ್ಪಳ, ಏ.೧೬: ಸಮೀಪದ ಭಾಗ್ಯನಗರ ಗ್ರಾಮದ ೧ ನೇ ವಾರ್ಡಿನ ಕಲಾವತಿ ಪವಾರ, ಲಕ್ಷ್ಮವ್ವ ಮುದೇನಗುಡಿ ಹಾಗೂ ಸರೋಜಮ್ಮ ಹನುಮಂತಪ್ಪ ತಟ್ಟಿ ಯವರ ನೇತೃತ್ವದ ಸ್ತ್ರೀ ಶಕ್ತಿ ಗುಂಪುಗಳ ನೂರಾರು ಮಹಿಳೆಯರು ಮಂಗಳವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಎಂ. ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್ಖಾನ್, ಹನುಮಂತಪ್ಪ ಹೀರೆಸಿಂದೋಗಿ, ಪಿ.ಆರ್. ಚಿಗರಿ, ದೇವೆಂದ್ರಪ್ಪ, ಭಾಗ್ಯನಗರದ ಲಕ್ಷ್ಮಣ ಜಾಣ, ಪಾಂಡುರಂಗ ಜಾಣ, ಮಲ್ಲಿಕಾರ್ಜುನ ಎಸ್., ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
0 comments:
Post a Comment