PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ನ. 29: ಬೆಂಗಳೂರು ಪೊಲೀಸರು ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಂವಿ ಧಾನಿಕ ಹಕ್ಕುಗಳಿಗೆ ಗೌರವ ನೀಡಬೇಕಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಶಾಂತಿ ಯುತ ಸಭೆಗಳ ಕುರಿತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡ ಬೇಕು ಎಂದು ಇದೆಯೇ ಹೊರತು, ಅಧಿಕೃತ ಅನುಮತಿ ಪಡೆಯಲೇಬೇಕು ಎಂದೇನೂ ಇಲ್ಲ ಎಂದು ಅನೈತಿಕ ಪೊಲೀಸ್‌ಗಿರಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ವಿಜಯನ್ ಹೇಳಿದ್ದಾರೆ.

ನೈತಿಕ ಪೊಲೀಸ್‌ಗಿರಿ ವಿರೋಧಿಸಿ ನಗರದ ಟೌನ್‌ಹಾಲ್ ಬಳಿ ಹಮ್ಮಿಕೊಂಡಿದ್ದ ಕಿಸ್ ಆಫ್ ಲವ್ ಆಚರಣೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು ಇದೀಗ ಕೆಲವು ಸ್ವಯಂಸೇವಕ ಸಂಘಟನೆಗಳು ನ.30ರಂದು ಆಚರಣೆಯ ಬದಲಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿವೆ.
ಪ್ರತಿಭಟನೆಗೆ ಸುಮಾರು 500 ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ರವಿವಾರ ಸಂಜೆ 4 ರಿಂದ 5ಗಂಟೆಯವರೆಗೆ ಈ ಪ್ರತಿಭಟನೆ ನಡೆಯಲಿದೆ. ಪರಸ್ಪರ ಚುಂಬಿಸಿ ನೈತಿಕ ಪೊಲೀಸ್‌ಗಿರಿ ಖಂಡಿಸುವಂತೆ ಎಲ್ಲಿಯೂ ಸೂಚಿಸಿಲ್ಲ. ಆದರೆ ಪ್ರತಿಭಟನೆ ವೇಳೆ ಅವರೇ ಸ್ವಯಂಪ್ರೇರಿತವಾಗಿ ಚುಂಬಿಸಿಕೊಂಡರೆ ತಡೆಯುವುದಿಲ್ಲ ಎಂದು ವಿಜಯನ್ ಹೇಳಿದ್ದಾರೆ.
 ಕಿಸ್ ಆಫ್ ಲವ್ ಆಚರಣೆಯ ಸಂಘಟನೆಕಾರರಾಗಿದ್ದ ರಚಿತಾ ತನೇಜಾ ಅವರಿಗೆ ಹಲವು ಜೀವ ಬೆದರಿಕೆ ಕರೆಬಂದಿದ್ದು, ಕಿಸ್ ಆಫ್ ಲವ್ ಆಚರಣೆಯಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಕೆಲವು ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಕಿಸ್ ಆಫ್ ಲವ್ ಆಚರಣೆಗೆ ಬೆಂಬಲ ಸೂಚಿಸಿದ್ದವು. ಆದರೆ ಆಚರಣೆಗೆ ಅನುಮತಿ ಸಿಗದ ಕಾರಣ ನೈತಿಕ ಪೊಲೀಸ್‌ಗಿರಿಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ. ಪ್ರತಿಭಟನೆ ಕುರಿತು ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಪೊಲೀಸರ ಅನುಮತಿ ಇಲ್ಲದೆಯೇ ಇದೇ ರವಿವಾರದಂದು ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

 ‘‘ನಗರದಲ್ಲಿ ಕಿಸ್ ಆಫ್ ಲವ್ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದು ಕಾರ್ಯಕ್ರಮದ ಆಯೋಜಕರಿಗೆ ಲಿಖಿತ ಪತ್ರ ಕಳುಹಿಸಿರುವುದಲ್ಲದೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಲಾಗಿದೆ. ಕಾರ್ಯಕ್ರಮದ ಆಯೋಜಕರು ಈ ಆಚರಣೆ ಮಾಡೇ ಮಾಡುತ್ತೇವೆಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆಯೇ ವಿನಾ ನಮ್ಮ ಬಳಿ ಬಂದು ಹೇಳಿಲ್ಲ. ಅದಕ್ಕೂ ಮೀರಿದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ.’’ -ಅಲೋಕ್‌ಕುಮಾರ್, ಹೆಚ್ಚುವರಿ ಪೊಲೀಸ್ ಕಮಿಷನರ್

Advertisement

0 comments:

Post a Comment

 
Top