PLEASE LOGIN TO KANNADANET.COM FOR REGULAR NEWS-UPDATES


ಗಂಗಾವತಿ ೩೦:- ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ಬಸವದಳ, ಕದಳಿ ಮಹಿಳಾ ವೇದಿಕೆ, ಶ್ರೀ ಚನ್ನಬಸವ ಚಾರಿಟೇಬಲ್ ಪ್ರತಿಷ್ಠಾನ, ಗಂಗಾವತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೯-೦೯-೨೦೧೪ ರ ಸೋಮವಾರ   ಗಂಗಾವತಿ ನಗರದ ಜಯನಗರದ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಚಾರಿಟೇಬಲ್ ಗ್ರಾಮೀಣ ವಿದ್ಯಾರ್ಥಿನಿಯರ ಪ್ರಸಾದ ಸಂಸ್ಥೆಯಲ್ಲಿ, ಡಾ|| ವಿ.ಎ.ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ವಚನಗಳಲ್ಲಿ ಮಾನವೀಯ ಮೌಲ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸವನ್ನು ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ   ಅರವಿಂದ ಜತ್ತಿಯವರು ನಡೆಸಿಕೊಟ್ಟರು. 
    ದಿನಾಂಕ ೩೦-೦೯-೨೦೧೪ ರಂದು ಗಂಗಾವತಿಯ ಬಸವಕೇಂದ್ರವು ಚಿತ್ರದುರ್ಗದಲ್ಲಿ ನಡೆಯುವ ೨೬ನೇ ಶರಣ ಸಂಸ್ಕೃತಿ ಉತ್ಸವದ ದಾಸೋಹಕ್ಕಾಗಿ ಗಂಗಾವತಿ ದಾಸೋಹಿಗಳಿಂದ ಸಂಗ್ರಹಿಸಿದ ಒಟ್ಟು ೩೦ ಕ್ವಿಂಟಲ್ ಅಕ್ಕಿಯನ್ನು ಚಿತ್ರದುರ್ಗದ ಮಠದ ದಾಸೋಹಕ್ಕೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ   ಕೆ. ಬಸವರಾಜ, ಉಪಾಧ್ಯಕ್ಷರಾದ ಶರಣಪ್ಪ ಹೆಚ್. ಹಿರೇಜಂತಕಲ್, ರಾಜಶೇಖರ ಹೇರೂರು, ಪರಸಪ್ಪ ಮತ್ತು ಕೇಂದ್ರದ ಕಾರ್ಯದರ್ಶಿಗಳಾದ ಎ.ಕೆ. ಮಹೇಶಕುಮಾರ ಉಪಸ್ಥಿತರಿದ್ದರು.

Advertisement

0 comments:

Post a Comment

 
Top