PLEASE LOGIN TO KANNADANET.COM FOR REGULAR NEWS-UPDATES

ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೪-೦೯-೨೦೧೪ ರಂದು ಅಮವಾಸ್ಯೆಯ ದಿನ ಬುಧವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೬೧ ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ  ರಾಜಶೇಖರ ಪಾಟೀಲ ಆಗಮಿಸುವರು. ಅಧ್ಯಕ್ಷತೆಯನ್ನು ವಕೀಲರಾದ ಗವಿಸಿದ್ದಪ್ಪ ಹಿಟ್ನಾಳ ವಹಿಸುವರು. ಕೊಪ್ಪಳದ ಮಾರುತಿ ಎಸ್ ಚಿತ್ರಗಾರ ಇವರಿಂದ ಸಂಗೀತ ಸೇವೆಯಿದೆ. ಕಾರ್ಯಕ್ರಮದ ಭಕ್ತಿ ಸೇವೆಯನ್ನು ತಾವರಗೇರಿಯ ಪರಪ್ಪ ಶರಣಪ್ಪ ಅಕ್ಕಿ ಇವರು ವಹಿಸಿದ್ದಾರೆ. ಸದ್ಬಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು  ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top