ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನವತಿಯಿಂದ ಪ್ರತಿ ಜಿಲ್ಲೆಯಲ್ಲೂ ಜಾನಪದ ಅಧ್ಯಯನ ಕೇಂದ್ರಗಳನ್ನು ನಿರ್ಮಿಸಬೇಕು. ಪಿಆರ್ಟಿ ಕಲಾ ಸಂಭ್ರಮ ನಾಡಿನಾದ್ಯಾಂತ ನಡೆಯುವಂತಾಗಬೇಕು. ಅದಕ್ಕೆ ಬೇಕಾದ ಪೂರಕ ಸಹಕಾರವನ್ನು ಸರ್ಕಾರ ಮೂಲಕ ನೀಡಲಾಗುವುದು ಎಂದು ಸಹಕಾರ ಸಚಿವ ಮಹದೇವ ಪ್ರಸಾದ್ ಹೇಳಿದರು.


ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ ದಯಾನಂದ್ ಮಾತನಾಡಿ , ಇಂತಹ ಕಾರ್ಯಕ್ರಮಗಳ ಮೂಲಕ ನಾಡಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೋರಿಸಬಹುದು ನಿಜಕ್ಕೂ ಇಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದ ಸಂಗಮ ಕಂಡ ಸಂತಸವಾಗುತ್ತಿದೆ. ಮಕ್ಕಳ ಪ್ರತಿಭೆಗೆ ಪಾಲಕರು ನೀರೆರೆಯಬೇಕುಎಂದರು.
ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ನಿರ್ದೇಶಕರಾದ ಬಾಬುರಾವ್ ಮಾತನಾಡಿ, ನಾವು ಪಿಆರ್ಟಿ ಅವರೊಂದಿಗೆ ಮನೆ ಮನೆ ಅಲೆದಿದ್ದೇವೆ. ಊರುರು ಅಲೆದು ಜಾನಪದ ವಸ್ತುಗಳ ಸಂಗ್ರಹಿಸಿದ್ದೇವೆ. ಈ ಕಲಾನಿಕೇತ ಇಂದು ಅವರ ತಪಸ್ಸಿನಿಂದ ಆಗಿದೆ. ಹಲವೆಡೆ ವಸ್ತು ಸಂಗ್ರಹಾಲಯ ನಿರ್ಮಿಸಿದ್ದು ನಾವುಇನ್ನೂ ಅದನ್ನು ಕಾಪಾಡಬೇಕು ಎಂದರು.
ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ,ವಿಶ್ರಾಂತ ಕಾರ್ಯಪಾಲಕ ಅಭಿಯಂತರ ಲಿಂಗಪ್ಪ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ, ಕಾರ್ಯದರ್ಶಿ ಕೆ.ಸಿ ಮಹದೇವ ಶೆಟ್ಟಿ, ಕೋಶಾಧ್ಯಕ್ಷ ಪ್ರೋ ಎಚ್.ಎಂ ಪರಮೇಶ್ವರಯ್ಯ, ಸಂಚಾಲಕರಾದ ರುದ್ರಣ್ಣ ಹರ್ತಿಕೋಟೆ ಉಪಸ್ಥಿತರಿದ್ದರು.
0 comments:
Post a Comment