PLEASE LOGIN TO KANNADANET.COM FOR REGULAR NEWS-UPDATES

 ಗಂಗಾವತಿ ೨೯:- ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ಕದಳಿ ಮಹಿಳಾ ವೇದಿಕೆ, ಶ್ರೀ ಚನ್ನಬಸವ ಚಾರಿಟೇಬಲ್ ಪ್ರತಿಷ್ಠಾನ, ಗಂಗಾವತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೯-೦೯-೨೦೧೪ ರ ಸೋಮವಾರ ಸರಿಯಾಗಿ ಸಂಜೆ ೬.೦೦ ಗಂಟೆಗೆ ಗಂಗಾವತಿ ನಗರದ ಜಯನಗರದ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಚಾರಿಟೇಬಲ್ ಗ್ರಾಮೀಣ ವಿದ್ಯಾರ್ಥಿನಿಯರ ಪ್ರಸಾದ ಸಂಸ್ಥೆಯಲ್ಲಿ, ಡಾ|| ವಿ.ಎ.ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ವಚನಗಳಲ್ಲಿ ಮಾನವೀಯ ಮೌಲ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸವನ್ನು ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ  ಅರವಿಂದ ಜತ್ತಿಯವರು ನಡೆಸಿಕೊಡುವರು. 
        ಗಂಗಾವತಿಯ ಸರ್ವ ನಾಗರೀಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಗಂಗಾವತಿ ಬಸವಕೇಂದ್ರದ ಪ್ರಧಾನ ಕಾರ್ಯದರ್ಶಿಗಳು ಎ.ಕೆ. ಮಹೇಶಕುಮಾರ್  ತಿಳಿಸಿದ್ದಾರೆ.

Advertisement

0 comments:

Post a Comment

 
Top