PLEASE LOGIN TO KANNADANET.COM FOR REGULAR NEWS-UPDATES

  ನಗರದ ಅಶೋಕ ವೃತ್ತದಲ್ಲಿ ಕಳೆದ ಸೆ: ೨೪ ರಂದಯ ಹೃದ್ರಾಬಾದ ಕರ್ನಾಟಕ ಭಾಗಕ್ಕೆ ಪೋಲಿಸ್ ಇಲಾಖೆಯ ನೇಮಕಾತಿಯಲ್ಲಿ ಅನ್ಯಾಯದ ವಿರುದ್ದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಜನಹಿತ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಅನ್ಯಾದ ವಿರುದ್ದ ಮನವಿಯನ್ನು ಸಲ್ಲಿಸಲಾಗಿತ್ತು ಪ್ರತಿಭಟನೆಯಿಂದ ಹೆಚ್ಚತ್ತುಕೊಂಡ ಸರಕಾರವು ತನ್ನ ಆದೇಸವನ್ನು ಹಿಂದೆಪಡಿಯಲು ಮುಂದಾಗಿರವದನ್ನು ಕಜವೆ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
ಹೈದ್ರಾಬಾದ ಕರ್ನಾಟಕ ೩೭೧(ಜೆ) ಕಾಲಂ ಮೀಸಲಾತಿ ಅನುಷ್ಠಾನ ಸಮಿತಿಯ ಅಧ್ಯಕ್ಷರಿಗು ತಾರತಮ್ಯದ ಕುರಿತು ಮನವಿ ಮಾಡಕೊಡಲಾಗಿತ್ತು ಇದರಿಂದ ಹೈದ್ರಾಬಾದ ಕರ್ನಾಟಕದ ಅಬ್ಯಾರ್ಥಿಗಳಿಗೆ ಪೋಲಿಸ್ ಇಲಾಖೆಯ ಎಲ್ಲಾ ಅಧಿಸೂಚನೆಯ ಹುದ್ದೆಗಳಿಗೆ ಒಪ್ಪಿಗೆ ನೀಡಿರುವುದು  ಸಂತಷವಾಗಿದೆ ಆದರೆ ಈಗಾಗಲೇ ಆನ್‌ಲೈನ್ ನಲ್ಲಿ ಬದಲಾವಣೆ ಮಾಡಲಾಗಿದ್ದು ಗೆಜೆಟ್‌ನಲ್ಲಿ ಶೀಘ್ರ ಅಧಿಸೂಚನೆ ಹೊರಡಿಸುವದು ಬಾಕಿ ಇರುವದರಿಂದ ಅದನ್ನು ಕೂಡ ಪೂರ್ಣ ಪ್ರಕ್ರಿಯಗೋಳಿಸಿ ಹೈದ್ರಾಬಾದ ಕರ್ನಾಟಕ ಭಾಗದ ಜನತೆಗೆ ನ್ಯಾಯ ದೊರಕಿಸಿದಂತಾದೆ ಎಂದು ಜಿಲ್ಲಾಧ್ಯಕ್ಷ ಬಸವರೆಡ್ಡಿ ಶಿವನಗೌಡ ಬೆಳವಿನಾಳ, ತಾಲೂಕಾದ್ಯಕ್ಷ ಶ್ರವಣಕುಮಾರ, ಈರಣ್ಣ, ನಗರಾದ್ಯಕ್ಷ ಮಹೇಶ ನೇಲಜೆರಿ, ತಾಲೂಕಾಉಪಾದ್ಯಕ್ಷ ನಾಗರಾಜ ಬಾರಕೇರಾ, ಹಾಲವರ್ತಿ ಗ್ರಾಮ ಘಟಕ ಅಧ್ಯಕ್ಷ ಗವಿಸಿದ್ದಪ್ಪ  ಶಶಿಕುಮಾರ ಬಸವರಾಜ, ಪವನಕುಮಾರ ಕೊಪ್ಪಳ, ಸುಧಾಕರ ಮಾಳಶೆಟ್ಟಿ, ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Advertisement

0 comments:

Post a Comment

 
Top