ಪುರಾತನ ಕಾಲದಿಂದಲೂ ನಾವು ಗ್ರಂಥಾಲಯಗಳನ್ನು ಕಾಣಬಹುದು ಆದರೆ ಅವು ಸಾವ೯ಜನಿಕರ ಸ್ವತ್ತಾಗದೇ ರಾಜರ , ಉಳ್ಳವರ ಸ್ವತ್ತಾಗಿದ್ದವು . ಕ್ರಮೇಣ ಗ್ರಂಥಾಲಯಗಳು ಸಾವ೯ಜನಿಕರಿಗೆ ಮುಕ್ತ ಪ್ರವೇಶ ನೀಡಿ ಓದುಗರಿಗೆ ಅನುಕೂಲ ಕಲ್ಪಿಸಿಕೊಟ್ಟವು . ಇದೀಗ ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ ಕೆಲಸ ನಿವ೯ಹಿಸುವ ಮತ್ತು ಸ್ಪದಾ೯ತ್ಮಕ ಅಧ್ಯಯನ
ಕೇಂದ್ರಗಳಾಗಿ ಕೆಲಸ ನಿವ೯ಹಿಸುವಷ್ಟು ಬೆಳದು ನಿಂತಿವೆ . ಹಿಂದೆ ಗ್ರಂಥಪಾಲಕನನ್ನು ಉಗ್ರಾಣಿಕನೆಂದು , ಗ್ರಂಥಾಲಯವನ್ನು ಉಗ್ರಾಣ ಎಂದು ಕರೆಯುತ್ತಿದ್ದರು . ಅಧುನಿಕ ಕಾಲದಲ್ಲಿ ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ , ಸ್ಪಧಾ೯ತ್ಮಕ ಅಧ್ಯಯನ ಕೇಂದ್ರ , ಮಕ್ಕಳ, ವೃದ್ದರ , ಸಂಶೋಧನಾ ,ಶೈಕ್ಷಣಿಕ , ವಿಶೇಷ,ವಿಶ್ವವಿದ್ಯಾಲಯ ಹೀಗೆ ಅನೇಕ ಪ್ರಕಾರದ ಗ್ರಂಥಾಲಯಗಳು ಓದುಗರಿಗೆ ಗ್ರಂಥ ದೊರಕಿಸಿಕೊಡುವ ಕೆಲಸ ಮಾಡುತ್ತಿವೆ ಇಂತಹ ಗ್ರಂಥಾಲಯಗಳ ಅಭಿವೃದ್ಧಿ ಗೆ ಶ್ರಮಿಸಿದ ಅನೇಕ ಮಹನೀಯರಿದ್ದಾರೆ . ಅವರ ಕಿರುಪರಿಚಯ ಹೀಗಿದೆ .
ಆಂಡ್ರ್ಯೂ ಕಾನೇ೯ಗಿ : ಇವರು ಅಮೇರಿಕಾದ ಕೈಗಾರಿಕೋದ್ಯಮಿ ಗ್ರಂಥಾಲಯ ಸ್ಥಾಪನೆಗಾಗಿ ಹೆಚ್ಚು ಹಣ ವಿನಿಯೋಗಿಸಿದ್ದಾರೆ . ಇವರು ವ್ಯಯ ಮಾಡಿದ ಹಣದಲ್ಲಿ ಸುಮಾರು ೨೮೧೧ , ಸಾವ೯ಜನಿಕ ಗ್ರಂಥಾಲಯಗಳನ್ನು ಕ್ರಿ . ಶ ೧೯೧೧ . ರ ಹೊತ್ತಿಗೆ ಸ್ಥಾಪಿಸಿದ್ದರು . ಗ್ರಂಥಾಲಯದಿಂದಾಗುವ ಮುಖ್ಯ ಲಾಭ ಜ್ಞಾನಾಜ್ಞ೯ನೆ , ನಾವೇನಾದರೂ ಕೊಡದಿದ್ದರೆ ಅವು ನಮಗೇನೂ ಕೊಡಲಾರವು ಎಂಬುದು ಅವರ ಅಭಿಪ್ರಾಯವಾಗಿತ್ತು .

ಖುದಾಭಕ್ಷ ಖಾನ್ : ಇವರು ಪ್ರಾಚ್ಯ ಸಾವ೯ಜನಿಕ ಗ್ರಂಥಾಲಯ ಸಂಸ್ಥಾಪಕರು . ತಮ್ಮ ತಂದೆಯ ಸಂಗ್ರಹದಿಂದ ದೊರೆತ ೧೪೦೦ ಹಸ್ತಪ್ರತಿಗಳೊಂದಿಗೆ ಸಾವ೯ಜನಿಕ ಗ್ರಂಥಾಲಯ ತೆರೆದರು , ಪ್ರಾಚೀನ ವಸ್ತು ಮಾರಲು ಬಂದವರಿಗೆ ಒಂದಕ್ಕೆ ಎರಡರಷ್ಟು ಬೆಲೆ ಕೊಟ್ಟು ಖರೀದಿಸಿ ಪ್ರಾಚ್ಯವಸ್ತು ಸಾವ೯ಜನಿಕ ಗ್ರಂಥಾಲಯ ಬೆಳೆಯುವಂತೆ ಅದರ ವಿಸ್ತಾರ ಹೆಚ್ಚಿಸಿದರು . ಕಾಲಾನಂತರ ಅದು ಖುದಾಭಕ್ಷ ಸಾವ೯ಜನಿಕ ಗ್ರಂಥಾಲಯ ಎಂದು ಪ್ರಸಿದ್ಧವಾಯಿತು . ಬಂಗಾಳ ಸಕಾ೯ರ ಗ್ರಂಥಾಲಯವನ್ನು ತನ್ನ ಆಡಳಿತಕ್ಕೆ ಒಳಪಡಿಸಿತು . ಇವರ ಸೇವೆಯನ್ನು ಗುರುತಿಸಿ ಅಂದಿನ ಬ್ರಿಟಿಷ್ ಸಕಾ೯ರ ಖಾನ್ ಬಹಾದೂರ ೧೮೮೧ , ಸಿ. ಐ. ಇ ೧೯೦೩ ರಲ್ಲಿ ,ಬಿರುದುಗಳನ್ನು ನೀಡಿ ಗೌರವಿಸಿವೆ .ಇದಲ್ಲದೆ ಅವರು ಪಾಟ್ನಾದಲ್ಲಿ ಪ್ರಸಿದ್ದ ವಕೀಲರಾಗಿದ್ದರು . ಹೈದಬಾದ ಸಂಸ್ಥಾನದ ಮುಖ್ಯ ನ್ಯಾಯಾಧೀಶರಾಗಿಯ ಸೇವೆ ಸಲ್ಲಿಸಿದ್ದಾರೆ .


ಡಾ.ಎಸ್.ಆರ್.ರಂಗನಾಥನ್: ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನರವರ ಪೂಣ೯ ಹೆಸರು ಶಿಯ್ಯಾಳಿ ರಾಮಾಮೃತ ರಂಗನಾಥನ್ ಇವರು ೧೨ ಆಗಸ್ಟ ೧೮೯೨ ರಲ್ಲಿ ತಮಿಳುನಾಡಿನ ತಂಜಾವುರ ಜಿಲ್ಲೆಯ ಶಿಯ್ಯಾಳಿ ಎಂಬ ಗ್ರಾಮದಲ್ಲಿ ಜನಿಸಿದರು ತಂದೆ ರಾಮಾಮೃತ ಅಯ್ಯಾರ ತಾಯಿ ಸೀತಾಲಕ್ಷ್ಮಿ ಮಗನಾಗಿ ಜನಿಸಿದ ರಂಗನಾಥನರವರು ಮುಂದೆ ಭಾರತೀಯ ಗ್ರಂಥಾಲಯ ಪಿತಾಮಹರಾಗುತ್ತಾರೆಂದು ಯಾರು ಅಂದು ಕೂಂಡಿರಲಿಲ್ಲ.
ಡಾ.ಎಸ್.ಆರ್.ರಂಗನಾಥನರವರು ಮೂಲತಹ ತಮ್ಮನ್ನು ಗುರುತಿಸಿಕೂಂಡಿದ್ದು. ಒಬ್ಬ ಗಣಿತ ಪ್ರಾಧ್ಯಾಪಕರಾಗಿ ನಂತರದ ದಿನಗಳಲ್ಲಿ ಶೈಕ್ಷಣಿಕ ವಿದ್ಯಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದರು. ಈ ಸೇವೆಯ ಅವರನ್ನು ಗ್ರಂಥಾಲಯಗಳ ಬಗ್ಗೆ ಚಿಂತೆ ಮಾಡುವಂತೆ ಮಾಡಿ ಮುಂದೆ ಗ್ರಂಥಾಲಯ ವಿಜ್ಞಾನಕ್ಕೆ ಮಹತ್ತರ ಕೂಡುಗೆ ನೀಡುವಂತೆ ಮಾಡಿತು.
ಗ್ರಂಥಾಲಯ ವಿಜ್ಞಾನಕ್ಕೆ ಹಲವಾರು ಮಹತ್ವದ ಕೂಡುಗೆಗಳನ್ನು ನೀಡಿದ್ದಾರೆ. ಅವುಗಳೆಂದರೆ. ಗ್ರಂಥಾಲಯದ ಪಂಚಸೂತ್ರಗಳು, ದ್ವಿಬಿಂದು ವಗಿ೯ಕರಣ, ಸೂಚೀಕರಣ ಪರಾಮಶ೯ನ ಸೇವೆ. ಹೀಗೆ ಮುಂತಾದ ಹಲವಾರು ಮಹತ್ವದ ಕೂಡುಗೆಯನ್ನು ನೀಡಿದ್ದಾರೆ. ಇವರು ನೀಡಿದ ಪಂಚಸೂತ್ರಗಳುಹೀಗಿವೆ. ೧) ಗ್ರಂಥಗಳು ಉಪಯೋಗಕ್ಕಾಗಿವೆ. ೨) ಪ್ರತಿಯೊಬ್ಬ ಓದುಗನಿಗೂ ಅವರದೇ ಆದ ಗ್ರಂಥ. ೩) ಪ್ರತಿಯೊಂದು ಗ್ರಂಥಕ್ಕೆ ಅದರದೇ ಆದ ಓದುಗ. ೪) ಓದುಗರ ಸಮಯವನ್ನು ಉಳಿಸಿ. ೫) ಗ್ರಂಥಾಲಯ ಬೆಳೆಯುತ್ತಿರುವ ಸಂಸ್ಥೆ. ಯಾವುದೇ ಗ್ರಂಥಾಲಯಗಳು ವ್ಯವಸ್ಥಿತವಾಗಿ ಕಾಯ೯ ನಿವ೯ಹಿಸಬೇಕಾದರೆ ಗ್ರಂಥಾಲಯ ಪಂಚಸೂತ್ರಗಳು ಅಗತ್ಯವಾಗಿವೆ.
ಡಾ.ಎಸ್.ಆರ್.ರಂಗನಾಥನರವರು ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಮತ್ತು ನೀಡಿದ ಕೂಡುಗೆಗಳನ್ನು ಪರಿಗಣಿಸಿ ಅನೇಕ ರಾಷ್ಟೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿ ಬಿರುದುಗಳು ಬಂದಿವೆ. ದೆಹಲಿ ವಿಶ್ವವಿದ್ಯಾಲಯವು ೧೯೪೮ ರಲ್ಲಿ ಪಿಟ್ಸ್ ಬಗ೯ ವಿಶ್ವವಿದ್ಯಾಲಯ ೧೯೬೪ ರಲ್ಲಿ ಇವರಿಗೆ ಡಿಲಿಟ್ ಪದವಿ ನೀಡಿ ಗೌರವಿಸಿದೆ. ೧೯೩೫ ರಲ್ಲಿ ಅಂದಿನ ಬ್ರಿಟಿಷ್ ಸಕಾ೯ರವು ಇವರಿಗೆ ರಾವ್ ಸಾಹೇಬ್ ಎಂಬ ಬಿರುದು ನೀಡಿತ್ತು. ೧೯೫೭ ರಲ್ಲಿ ಭಾರತ ಸರಕಾರ ಪದ್ಮಶ್ರೀಯನ್ನು ನೀಡಿ ಗೌರವಿಸಿದೆ. ೧೯೭೦ ರಲ್ಲಿ ಅಮೇರಿಕಾದ ಮಾಗ೯ರೆಟ್ ಮಾನ್ ಪಾರಿತೋಷಕ ಪಡೆದ ಪ್ರಥಮ ಭಾರತೀಯರು ಹೌದು. ಅಮೇರಿಕಾದ ಮಾಕ೯ಟೈನ್ ಸೊಸೈಟಿ ಗ್ರ್ಯಾಂಡ್ ನೈಟ್ ದಿ ಪೀಸ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ ಇನ್ನು ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಇವರಷ್ಟೇ ಅಲ್ಲದೆ ಖಲೀಫ್ ಮಹ್ಮದ ಅಸುದುಲ್ಲ , ಮಾಷ೯ಲ್.ಡಿ.ಎನ , ಇವರಲ್ಲದೆ ಇನ್ನು ಅನೇಕ ಮಹನೀಯರು ಗ್ರಂಥಾಲಯ ವಿಜ್ಞಾ ನ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳನ್ನು ನೀಡಿ ಗ್ರಂಥಾಲಯ ವಿಜ್ಙಾನ ಕ್ಷೇತ್ರದ ಭಾಷ್ಯ ಬರೆದ ಮಹನೀಯರೆನಿಸಿಕೊಂಡಿದ್ದಾರೆ .
ನಾಗರಾಜನಾಯಕ ಡಿ ಡೊಳ್ಳಿನ :
ಕೊಪ್ಪಳ ೫೮೩೨೩೧.
೯೯೦೧೧೩೫೮೭೪ .
0 comments:
Post a Comment