PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ೨೩, ದಿನಾಂಕ ೨೪-೦೭-೨೦೧೪ ರಂದು ಗುರುವಾರ ಮದ್ನಾಹ್ನ ೩ ಗಂಟೆಗೆ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ರಂಜಾನ್ ಹಬ್ಬದ ಮಹತ್ವ ಮತ್ತು ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಜರುಗಲಿದೆ. 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಕ್ಫ ಬೋರ್ಡ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಷಾ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಡಾ. ರೋಹಿಣಿ ಸಪೇಟ್ ಕಟೋಜ, ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಯುಸೂಪೀಯಾ ಮಜೀದ್‌ನ ಮುಪ್ತಿ ನಜೀರ್ ಅಹ್ಮದ್ ಇಮಾಮ್, ನಗರ ಠಾಣೆ ಪಿಐ ಪಿ. ಮೋಹನ್ ಪ್ರಸಾದ್, ಜೆಡಿಎಸ್ ಜಿಲ್ಲಾ ಯುವ ಅಧ್ಯಕ್ಷ ಸಿ.ಹೆಚ್. ರಮೇಶ, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಎ.ಕೆ. ತುಪ್ಪದ, ಅಂಜುಮನ್ ಕಮೀಟಿ ಅಧ್ಯಕ್ಷ ಪಾಷಾ ಕಾಟನ, ಜೆಡಿಎಸ್ ತಾಲೂಕಾ ಅಧ್ಯಕ್ಷ ಅಂದಪ್ಪ ಮರೆಬಾಳ, ನಗರಸಭೆ ಸದಸ್ಯ ಖಾಜಾವಲಿ ಬನ್ನಿಕೊಪ್ಪ, ಮುಸ್ಲೀಂ ಸಮಾಜದ ಹಿರಿಯ ಮುಖಂಡ ಜಾಫರ್ ಖಾನ್ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ನಗರ ಘಟಕ ಯುವ ಅಧ್ಯಕ್ಷ ಸೈಯದ್ ಮೆಹಮೂದ್ ಹುಸೇನಿ ತಿಳಿಸಿದ್ದಾರೆ,

Advertisement

0 comments:

Post a Comment

 
Top