PLEASE LOGIN TO KANNADANET.COM FOR REGULAR NEWS-UPDATES

 ಲೋಕಸಭೆ ಚುನಾವಣೆ ನಿಮಿತ್ಯವಾಗಿ ದೇಶದ ವಿವಿಧೆಡೆ ಮತದಾನ ಪ್ರಕ್ರಿಯೆ ಏ. ೦೭ ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ ೭ ಗಂಟೆಯಿಂದ ಮೇ. ೧೨ ರ ಸಂಜೆ ೬-೩೦ ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
  ಜೊತೆಗೆ ರಾಜ್ಯದಲ್ಲಿ ಏ. ೧೭ ರಂದು ಮತದಾನ ನಡೆಯಲಿರುವುದರಿಂದ, ಏ. ೧೫ ರ ಸಂಜೆ ೭ ಗಂಟೆಯಿಂದ ಏ. ೧೭ ರ ಸಂಜೆ ೭ ಗಂಟೆಯವರೆಗೆ ಯಾವುದೇ ರೀತಿಯ ಚುನಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶ ಪ್ರಕಟಿಸುವುದನ್ನು ಅಥವಾ ಇದಕ್ಕೆ ಸಂಬಂಧಿತ ರಾಜಕೀಯ ಚರ್ಚೆಗಳ ಪ್ರಕಟಣೆ ಅಥವಾ ಪ್ರಸಾರವನ್ನು ಸಹ ನಿಷೇಧಿಸಲಾಗಿದೆ .

Advertisement

0 comments:

Post a Comment

 
Top