PLEASE LOGIN TO KANNADANET.COM FOR REGULAR NEWS-UPDATES

 ಇಂದಿನ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಸಲುವಾಗಿ ಕರಾಟೆಯಂತಹ ಆತ್ಮರಕ್ಷಣೆ ಕಲೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ನಗರದ ಎಂಹೆಚ್‌ಪಿಎಸ್ ಶಾಲಾ ಆವರಣದಲ್ಲಿ ಕೊಪ್ಪಳದ ಝೆನ್ ಕರಾಟೆ ಐಕಿಡೋ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ೧೦ ದಿನಗಳ ಬೇಸಿಗೆ ಉಚಿತ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು, ಕೊಪ್ಪಳದಲ್ಲಿ ಒಂದು ಕಾಲದಲ್ಲಿ ಕರಾಟೆ ತುಂಬಾ ಆಸಕ್ತಿದಾಯಕವಾಗಿತ್ತು ಈಗದಿಲ್ಲ, ಆದರೆ ಪ್ರತಿಯೊಬ್ಬರೂ ಅದನ್ನು ಕಲಿಯಬೇಕು ಎಂಬ ಹಂಬಲದಿಂದ ಪತಿವರ್ಷ ಉಚಿತ ತರಬೇತಿ ಹಮ್ಮಿಕೊಳ್ಳುವ ಶ್ರೀನಿವಾಸ ಪಂಡಿತ್ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಪರ್ವತಗೌಡ್ರ, ಕರಾಟೆ, ನೃತ್ಯ, ವ್ಯಾಯಾ

ಮ ಮನುಷ್ಯನನ್ನ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ, ಪ್ರತಿಯೊಬ್ಬ ಪೋಷಕರು, ತಮ್ಮ ಮಕ್ಕಳು ಉತ್ತಮ ಅಂಕಗಳನ್ನು ಗಳಿಸಬೇಕು ಎಂಬುದರ ಕಡೆಗೆ ಮುಖಮಾಡಿ ಕುಳಿತಿರುವದು ತಪ್ಪು, ಅವರಿಗೆ ಇತರೆ ಕ್ರಿಯಾತ್ಮಕ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು. ಝೆನ್ ಕರಾಟೆ ಸಂಸ್ಥೆಯ ತರಬೇತುದಾರ ಶ್ರೀನಿವಾಸ ಪಂಡಿತ್ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಶುಭಕೋರಿದರು.

Advertisement

0 comments:

Post a Comment

 
Top