ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಂದುವರೆದು ಅನೇಕ ಮಹಾ ಚೇತನಗಳು ಹುತಾತ್ಮರಾಗುವದರ ಮೂಲಕ ಈ ಭಾಗಕ್ಕೆ ನಿಜಾಮಶಾಹಿ ಆಡಳಿತದಿಂದ ಬಿಡುಗಡೆ ದೊರೆತಿದೆ. ಇಂದು ನಾವುಗಳು ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಈ ಸಂದರ್ಭದಲ್ಲಿ ಎಲ್ಲ ಹೋರಾಟಗಾರರ ಆದರ್ಶಗಳು ಯುವಕರಿಗೆ ಮಾದರಿಯಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ಸಾಹಿತಿ ಎಚ್.ಎಸ್. ಪಾಟೀಲ ಹೈ.ಕ ಸ್ವಾತಂತ್ರ ಹೋರಾಟ ಹಾಗೂ ಕಲಂ ೩೭೧ ಅಗತ್ಯದ ಕುರಿತು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿದರು. ಸ್ವಾಗತ ಪ್ರಭುರಾಜ ನಾಯಕ್, ವಂದನಾರ್ಪಣೆ ಸುರೇಶ ಸೊನ್ನದ ನೆರವೇರಿಸಿದರು. ನಿರೂಪಣೆ ಡಾ. ಡಿ.ಎಚ್. ನಾಯಕ್ ಮತ್ತು ದ್ವಾರಕಸ್ವಾಮಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿ ಬಳಗ ಭಾಗವಹಿಸಿತ್ತು.
Home
»
koppal district information
»
News politics
»
school college koppal district
» ಶಾಸಕರಿಂದ ಧ್ವಜಾರೋಹಣ
Advertisement
Subscribe to:
Post Comments (Atom)
0 comments:
Post a Comment