PLEASE LOGIN TO KANNADANET.COM FOR REGULAR NEWS-UPDATES


ಮರಳಿಯ  ಕನ್ನಡ ಸಿರಿಮಠದ ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ಶ್ರೀಮತಿ ಎಂ.ಎನ್.ಬಿ.ವಿ.ಟ್ರಸ್ಟ ಸಂ ಇವರ ಸಂಯುಕ್ತ ಆಶ್ರಯದಲ್ಲಿ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುಖ್ಯ ಅಥಿತಿ ಗಳಾಗಿ ಡಾ|| ಗುರುರಾಜ ಕರಜಿಗಿ ಆಹ್ವಾನಿತರಾಗಿ ಉದ್ಯಮಿಗಳಾದ ಸಂತೋಷ ಕೆಲೊಜಿ,ಹಾಗೂ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಂ .ಸಿದ್ಧರಾಮಸ್ವಾಮಿ ,  ಎಚ್.ಎಂ ಗುರುಪಾದಸ್ವಾಮಿ ,   ನಾಗರಾಜ.ಜಿ, ಕಾರ್ಯಕ್ರಮದ ಸಂಚಾಲಕರಾದ  ಮಂಜುನಾಥ ಹೊಸಕೆರಾ.ಪ್ರಾಚಾರ್ಯರುಗಳಾದ  ನಂದಕುಮಾರ ,   ರವಿಕುಮಾರ.ಎಸ್, ಅಮರಗುಂಡಯ್ಯ ಸ್ವಾಮಿ.ಕೆ ಹಾಗೂ ಮುಖ್ಯಗುರುಗಳಾದ ಕಂತೆಪ್ಪ.ಎಮ್ ಮತ್ತು ಮೂರುಕಾಲೇಜಿನ ಉಪನ್ಯಾಸಕರು ಹಾಗೂ ಫ್ರೌಡಶಾಲೆಯ ಶಿಕ್ಷಕರು ,ವಿದ್ಯಾರ್ಥಿ/ನಿಯರು  ಸಭೆಯಲ್ಲಿ ಭಾಗವಹಿಸಿದ್ದರು. 
ಡಾ|| ಗುರುರಾಜ ಕರಜಿಗಿ ಅವರು ಮಕ್ಕಳು ಮತ್ತು ಉಪನ್ಯಾಸಕರನ್ನು ಉದ್ದೇಶಿಸಿ ದೈಹಿಕವಾಗಿ, ಮಾನಸಿಕವಾಗಿ,ಆಧ್ಯಾತ್ಮೀಕವಾಗಿ ಸಧೃಡರಾಗಿ ಸಂಕೊಚವಿಲ್ಲದೆ ಶಿಕ್ಷಣವನ್ನು ನೀಡುವುದು ಮತ್ತು ಪಡೆಯವುದಾಗಿರಬೇಕು ಹಾಗಾದಾಗ ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತ ಈ ದೇಶಕ್ಕೆ ಕುಟುಂಬಕ್ಕೆ ಏನಾದರು ಸೇವೆಯನ್ನು ಒದಗಿಸುವುದಕ್ಕೆ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಅನೇಕ ಉದಾಹರಣೇಗಳನ್ನು  ನೀಡುತ್ತ ಅರಿವನ್ನು ಮೂಡಿಸಿದರು. ಅಧ್ಯಕ್ಷರು ಸಹ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು ಕಾರ್ಯಕ್ರದ ನಿರೊಪಣೆಯನ್ನು ಶ್ರೀಮತಿ ಸುರೇಖ ಹಾಗೂ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.   

Advertisement

0 comments:

Post a Comment

 
Top