PLEASE LOGIN TO KANNADANET.COM FOR REGULAR NEWS-UPDATES


 ಪಕ್ಷದಿಂದ ಟಿಕೇಟ್
ಕೊಪ್ಪಳ, ಫೆ. ೨೩: ಇಲ್ಲಿನ ನಗರಸಭೆ ಚುನಾವಣೆಗೆ ಅತ್ಯಂತ ಬಿರುಸಿನ ಪೈಪೋಟಿಯ ರಾಜಕೀಯ ವಿದ್ಯಾಮಾನಗಳ ಗೊಂದಲಗಳ ನಡುವೆ ಬಿಜೆಪಿ ಮುಖಂಡ ನಗರಸಭೆ ಸದಸ್ಯ ಈರಣ್ಣ ಹಂಚಿನಾಳ ಹಾಗೂ ಜೆಡಿಎಸ್ ಮುಖಂಡ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಿಬೂಬಸಾಬ ನಾಲಬಂದ್ ಇಂದೇ ಬಿಎಸ್‌ಆರ್ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ಪಕ್ಷದಿಂದ ಚುನಾವಣೆಗೆ ಟಿಕೇಟ್ ಪಡೆದುಕೊಂಡರು.
ಹಂಚಿನಾಳ ಹಾಗೂ ನಾಲಬಂದ್ ತಮ್ಮ ಅನೇಕ ಬೆಂಬಲಿಗರ ಸಮಕ್ಷಮದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಗರಸಭೆ ಸದಸ್ಯ ಈರಣ್ಣ ಹಂಚಿನಾಳ ಇಲ್ಲಿನ ವಾರ್ಡ ನಂ. ೧೮ ರಲ್ಲಿ ನಾಮಪತ್ರ ಸಲ್ಲಿಸಿದರೆ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಿಬೂಬ ನಾಲಬಂದ್ ವಾರ್ಡ ನಂ. ೧೩ ಕ್ಕೆ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದರು.
 ಈ ಸಂದರ್ಭದಲ್ಲಿ ಸಯ್ಯದ್ ಫೌಂಡೇಶನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ.ಸಯ್ಯದ್, ಬಿಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಪ್ರಭುಗೌಡ ಪಾಟೀಲ್, ಇಮಾಮ್ ಸಾಬ ಬಿಜಾಪುರ, ಗೌಸ್‌ಸಾಬ ನೀರಲಗಿ, ಶ್ಯಾಮೀದಸಾಬ ಕಿಲ್ಲೇದಾರ, ಲಕ್ಷ್ಮಿ ಪ್ರೀಯಾ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು, ವಾರ್ಡ್‌ನ ಮುಖ್ಯಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


Advertisement

0 comments:

Post a Comment

 
Top