PLEASE LOGIN TO KANNADANET.COM FOR REGULAR NEWS-UPDATES


  ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸೋನಾಮಸೂರಿ ಅಕ್ಕಿ ದೊರೆಯುವಂತೆ ಮಾಡುವ ಉದ್ದೇಶದಿಂದ ಕೊಪ್ಪಳದ ಎಪಿಎಂಸಿ ಪ್ರಾಂಗಣದಲ್ಲಿ ಅಕ್ಕಿ ಸಂತೆಯನ್ನು ಫೆ. ೨೮ ಗುರುವಾರದಿಂದ ಪ್ರಾರಂಭಿಸಲಾಗಿದ್ದು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಕ್ಕಿ ಸಂತೆ ಮಳಿಗೆಯ ಉದ್ಘಾಟನೆ ನೆರವೇರಿಸಿದರು.
  ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಳದಿಂದಾಗಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಅಕ್ಕಿ ಪೂರೈಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದವರ ಸಹಾಯದೊಂದಿಗೆ ಕೊಪ್ಪಳ ಎಪಿಎಂಸಿ ಪ್ರಾಂಗಣದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಿರ್ಮಿಸಲಾಗಿರುವ ಮಳಿಗೆ ಸಂಖ್ಯೆ ೦೬ ಮತ್ತು ೦೭ ರಲ್ಲಿ ಅಕ್ಕಿ ಸಂತೆ ಪ್ರಾರಂಭಿಸಲಾಗಿದೆ.  ಈ ಅಕ್ಕಿ ಸಂತೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ. ೩೫೦೦ ರಂತೆ ಸೋನಾಮಸೂರಿ ಅಕ್ಕಿ ಮಾರಾಟ ಮಾಡಲಾಗುವುದು.  ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ  ತಿಳಿಸಿದೆ.

Advertisement

0 comments:

Post a Comment

 
Top