PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ದಿನಾಂಕ ೨೬-೦೧-೨೦೧೩ ರಂದು ಬಳಗ್ಗೆ ೮:೦೦ ಗಂಟೆಗೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೇಯ ಅಧ್ಯಕ್ಷರಾದ ಎಂ. ಪಾಷಾ ಕಾಟನ ಇವರು ದ್ವಜಾರೋಹಣ ನೆರವೇರಿಸಿ ಈ ಸಂಧರ್ಭದಲಲಿ ಮಾತನಾಡಿದ ಅವರು ಭಾರತದ ಸ್ವತಂತ್ರ ಸಂಗ್ರಾಮಕ್ಕೆ ತ್ಯಾಗ ಬಲಿದಾನ ಮಾಡಿದ ಆ ಹುತಾತ್ಮರನ್ನು ನೆನೆಯುತ್ತಾ ಇಂದಿನ ಯುವಕರು ಸ್ವತಂತ್ರ ಸೇನಾನಿಗಳ ಆದರ್ಶಗಳನ್ನು ಹಾಗೂ ಅವರ ದೇಶಭಕ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೂ ಪ್ರತಿಯೊಬ್ಬ ಭಾರತೀಯನು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕೆಂದು ಹಾಗೂ ಅಲ್ಪ ಸಂಖ್ಯಾತರು ಶಿಕ್ಷಣದ ಕಡೆಗೆ ತಮ್ಮ ಮಕ್ಕಳಿಗೆ ಹೆಚ್ಚಿನ ಒಲವು ತೋರಿಸಿ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡೇಕೆಂದು ಕರೆ ನೀಡಿದರು. 
ಈ ಸಂದರ್ಭದಲ್ಲಿ ಮಾನ್ವಿ ಪಾಷಾ, ಜಿಲಾನ ಮೈಲೈಕ, ಗಫಾರ ದಿಡ್ಡಿ, ಜಾಫರ ಸಂಗಟಿ, ಆಶಿಫ್ ಕರಕೀಹಳ್ಳಿ, ಕಭೀರ ಸಿಂದೋಗಿ, ಧಾರವಾಡ ರಫಿ, ಮೈಬೂಬ ಅರಗಂಜಿ ಜಾವೀದ್ ಖಾದರಿ, ಶಿರಾಜ್ ಮನಿಯಾರ, ಅಬ್ದುಲ್ ಅಜೀಜ, ಪಾಷಾ ತಳಕಲ್, ಅಜೀಮ ಗ್ಯಾಸವಾಲಿ, ರುಸ್ತುಂ, ಇನ್ನು ಅನೆಕ ಸಂಸ್ಥೆಯ ಸದಸ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top