PLEASE LOGIN TO KANNADANET.COM FOR REGULAR NEWS-UPDATES

ಚುನಾವಣೆ ಸಮೀಪಿಸುತ್ತಿರುವಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಂಡಿವೆ. ಇತ್ತೀಚಿಗೆ ಜಿಲ್ಲೆಗೆ ರಾಜ್ಯಮಟ್ಟದ ಎಲ್ಲಾ ನಾಯಕರು ಬಂದು ಹೋಗುತ್ತಿದ್ದಾರೆ. ಮೊನ್ನೆ ತಾನೆ ವೀರಪ್ಪ ಮೊಯ್ಲಿ, ಕೆ.ಎಸ್.ಈಶ್ವರಪ್ಪ ಬಂದು ಹೋದರೆ. ಇಂದು ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ  ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು ಆಗಮಿಸಿ ತಮ್ಮ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದರು. ಸಮಾವೇಶಕ್ಕೂ ಮುನ್ನ ನಗರದ ಐಬಿಯಲ್ಲಿ  ಮಾದ್ಯಮದವರೊಂದಿಗೆ ದೇವೇಗೌಡರು ಮಾತನಾಡಿದರು.  ಈ ಸಂದರ್ಭದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಜಿಲ್ಲಾಧ್ಯಕ್ಷ ಖಾದ್ರಿ, ಟಿಕೇಟ್ ಆಕಾಂಕ್ಷಿಗಳಾಗಿರುವ ಪ್ರದೀಪಗೌಡ ಮಾಲೀಪಾಟೀಲ್, ಸುರೇಶ ಭೂಮರಡ್ಡಿ, ಜಿ.ಟಿ.ಪಂಪಾಪತಿ ಹಾಗೂ ಜೆಡಿಎಸ್ ನ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.

ತಮ್ಮ ಆತ್ಮಚರಿತ್ರೆಯ ಬಗ್ಗೆ ಹೇಳಿದ್ದು ... 

Advertisement

0 comments:

Post a Comment

 
Top