PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ,ಡಿ. : ಸರ್ಕಾರದ ನಬಾರ್ಡ್ ಯೋಜನೆ ಅಡಿಯಲ್ಲಿ ಮಂಜೂರಾದ ಕೊಪ್ಪಳ ತಾಲೂಕಿನ ತಾಳಕನಕಾಪೂರ-ಇರಕಲ್‌ಗಡಾ, ಕಿನ್ನಾಳ-ಮುದ್ಲಾಪೂರ ಹಾಗೂ ಕಿನ್ನಾಳ-ಬುಡಶೆಟ್ನಾಳ ಗ್ರಾಮಗಳ ಒಟ್ಟು ೧೨೦.೦೦ ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗಳಿಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ರವಿವಾರ ಭೂಮಿ ಪೂಜೆ ನೆರವೇರಿಸಿ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಂತರ ತಾಳಕನಕಾಪುರ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತ, ಗ್ರಾಮೀಣ ಜನರ ಆಶೋತ್ತರಗಳಿಗೆ ಸರ್ಕಾರ ಸ್ಪಂಧನೆ ನೀಡಿ ರಸ್ತೆ ಉಪರಸ್ತೆಗಳ ಡಾಂಬರೀಕರಣ, ದುರಸ್ಥಿ ಕಾಮಗಾರಿಗಳಿಗೆ ನಬಾರ್ಡ್ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಿದೆ. ಇದನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಿ ಜನತೆಗೆ ಸಮರ್ಪಿಸಬೇಕೆಂದು ಶಾಸಕರಾದ ಪರಣ್ಣ ಮುನವಳ್ಳಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ವನೀತಾ ವೀರಣ್ಣ ಗಡಾದ್, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ್, ತಾ.ಪಂ.ಮಾಜಿ ಅಧ್ಯಕ್ಷ ಅಮರೇಶ ಉಪಲಾಪುರ, ಸಂಗನಗೌಡ ಪಾಟೀಲ್, ಲೇಬಗೇರಿ ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಚೌಡ್ಕಿ, ಸದಸ್ಯರಾದ ಪ್ರಾಣೇಶ ನಾಗನವರ, ಗವಿಸಿದ್ದಪ್ಪ ಪೊ|ಪಾ|, ದ್ಯಾಮಣ್ಣ ಹಾವಿನೂರ, ಗ್ರಾಮದ ಹಿರಿಯರಾದ ದ್ಯಾಮಣ್ಣ ಕುರಿ, ಯಮನೂರಪ್ಪ ಗದ್ದಿಗೇರಿ, ಯಮನೂರಪ್ಪ ಕಾರಬಾರಿ, ರಾಮಣ್ಣ ಈಳಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Advertisement

0 comments:

Post a Comment

 
Top