PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ೨೦೧೨-೧೩ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದಿನಾಂಕ ೦೯  ಬೆಳಿಗ್ಗೆ ೧೦:೩೦ಕ್ಕೆ ಶಾಲಾ ಆವರಣದಲ್ಲಿ  ನರ್ಸರಿ ಮಕ್ಕಳ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ದಾನಪ್ಪ.ಜಿ.ಕೆ.ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಹ್ಯಾಟಿ, ತಾ.ಪಂ ಸದಸ್ಯರು ಮತ್ತು ಇನ್ನೋರ್ವ ಅತಿಥಿಗಳಾಗಿ   ಶ್ರೀಧರ ಹುರಕಡ್ಲಿ, ಉಪಾಧ್ಯಕ್ಷರು ಗ್ರಾ.ಪಂ.ಭಾಗ್ಯನಗರ ಮತ್ತೋರ್ವ   ದೇವೇಂದ್ರಪ್ಪ ಬಡಿಗೇರ, ಉಪನ್ಯಾಸಕರಾಗಿ ಬಾಲಕಿಯರ ಸ.ಪ.ಪೂ.ಕಾ ಕೊಪ್ಪಳ ಮತ್ತು ಈ ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ  ರಾಘವೇಂದ್ರರಾವ್ ಕರ್ಣಂ ಉಪನ್ಯಾಸಕರು ವಿದ್ಯಾನಂದ ಗುರುಕಲ ಕುಕನೂರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ  ರಾಘವೇಂದ್ರರಾವ್ ಕರ್ಣಂ ಉಪನ್ಯಾಸಕರು ಕೃಷ್ಣನ ಕುರಿತು ಹಲವಾರು ಹಿತವಚನಗಳನ್ನು ಹೇಳುತ್ತಾ ಶ್ರೀ ಕೃಷ್ಣನುಸೃಷ್ಠಿ ಸ್ಥಿತಿ ಲಯಗಳಿಗೆ ಮೂಲ ಕಾರಣನಾಗಿದ್ದಾನೆ. ಶ್ರೀ ಕೃಷ್ಣ ಬಾಲ ಲೀಲೆಗಳ  ಬಗ್ಗೆ ಅವನ ಚೇಷ್ಠೆಗಳ ವಿವರಿಸಿದರು. 
ಸಂಸ್ಕೃತ ಒಂದು ವಾಕ್ಯ ಹೇಳಿದರು ವೃದ್ಧಾರ್ಕೂ ಹೋಮ ಧೂಮಸ್ಯ ರಾತ್ರಿಯೆ ಧತಿಯನ್ನು ಭೋತಿಸ್ಯೆ ಆಯಕ್ಷೀಣ ದಿನೇ ದಿನೇ ತಂಕ್ರಾಂಥಾಣಿ ಭೋಜನ:ಶಾಲಾಕಾರ್ಯಕ್ರಮ ಸರಳವಾಗಿ ಶಿಸ್ತು ಬದ್ದವಾಗಿತ್ತು ಎಂದು  ಹೇಳಿದರು.
ಉಪನ್ಯಾಸಕರಾದ ಡಿ.ಎಂ.ಬಡಿಗೇರ ರವರು ಕೃಷ್ಣನ ಬಾಲ ಲೀಲೆಗಳು ಅರ್ಥಪೂರ್ಣವಾಗಿರುತ್ತವೆ. ಅವುಗಳನ್ನು ಅರಿತುಕೊಂಡಂತೆ ಆದ್ದರಿಂದ ಎಲ್ಲಾ ಜ್ಞಾನವೂ ಬೇಕು. ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷೆವಹಿಸಿದ ಗ್ರಾ.ಸೇ.ವಿ.ಸಮಿತಿಯ ಅಧ್ಯಕ್ಷರಾದ   ದಾನಪ್ಪ.ಜಿ.ಕೆರವರು ಮಕ್ಕಳಲ್ಲಿ ಧೈರ್ಯ ತುಂಬಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ. ನಮ್ಮ ಶಾಲೆಯಲ್ಲಿ ಶನಿವಾರ  -ಭಾನುವಾರ ರಂದು ಭರತನಾಟ್ಯ ಹಾಗೂ ಸೋಮುವಾರ ಮಂಗಳವಾರ ರಂದು ಸಂಗೀತ ನಮ್ಮ ಶಾಲಾ ಮಕ್ಕಳು ಹಾಗೂ ಬೇರಾ ಶಾಲಾ ಮಕ್ಕಳಿಗೂ ಸಹಿತ ಹೇಳಿಕೊಡಲಾಗುವದು  ಮತ್ತು ಕೇವಲ ಪಠ್ಯಕ್ರಮದಲ್ಲಿ  ಮಾತ್ರವಲ್ಲದೆ. ಮಕ್ಕಳ ಇತರ ಸಾಹಿತ್ಯ, ಸಂಗೀತ ಹೇಳಿಕೊಡಲಾಗುವರು ಮತ್ತು ಪಠ್ಯಕ್ರಮದಲ್ಲಿ ಮಾತ್ರವಲ್ಲದೆ. ಮಕ್ಕಳ ಇತರ ಸಾಹಿತ್ಯ, ಸಂಗೀತ, ಭರತ್ಯ ನಾಟ್ಯ, ಕ್ರಿಡೆ ಹಾಗೂ ಇನ್ನೂ ಇತರ ಕಲೆಗಳಲ್ಲಿ ಅಭಿರುಚಿ  ಇರಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸುತ್ತವೆ. ಎಂದು ಹೇಳಿದರು. ಸಹ ಶಿಕ್ಷಕಿಯಾದ ಕು|| ಚಾಮುಂಡಿ ಮೇಟಿಯವರು ನಿರೂಪಿಸಿದರೆ,  ಕು|| ರಾಧಾ ಪಾತ್ರದ ಸ್ವಾಗತಿಸಿದರು ನಂತರ ಶ್ರೀಮತಿ ಪಾರ್ವತಿ ಕಟ್ಟಿಮನಿಯವರು  ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. 

Advertisement

0 comments:

Post a Comment

 
Top