PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ : ಬದುಕಿನ ನೈಜ ಚಿತ್ರಣ, ನಮ್ಮ ಭಾಗದ ಭಾಷೆಯ ಪ್ರಯೋಗ, ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ,ಎಲ್ಲರನ್ನೂ ಎಚ್ಚರಿಸುವ ಗುಣ ಅಮರೇಶ ನುಗಡೋಣಿಯವರ ಕಥೆಗಳಲ್ಲಿ ನಾವು ಕಾಣುತ್ತೇವೆ ಎಂದು ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು  ಕನ್ನಡನೆಟ್ ಡಾಟ್ ಕಾಂ  ಕ"ಸಮೂಹದ ೯೧ನೇ ಕ"ಸಮಯ ಕಾರ್‍ಯಕ್ರಮದಲ್ಲಿ ಹ"ಕೊಂಡಿದ್ದ "ಅಮರೇಶ ನುಗಡೋಣಿಯವರ ಕಥಾ ವಾಚನ" ಕಾರ್‍ಯಕ್ರಮದ ನಂತರ ಮಾತನಾಡುತ್ತಿದ್ದರು.  ಅವರ ಸವಾರಿ ಕಥೆ ಓದುತ್ತಿದ್ದರೆ ನಮ್ಮ ಜಿಲ್ಲೆಯದೇ, ನಮ್ಮ ಊರಿನದೇ  ಕಥೆ ಓದುತ್ತಿದ್ದೇವೆ ಎನಿಸುತ್ತದೆ  ಎಂದು ಹೇಳಿದರು. 
ಡಾ.ಅಮರೇಶ ನುಗಡೋಣಿಯವರ "ಸವಾರಿ" ಕಥಾಸಂಕಲನದ ಕಥಾವಾಚನವನ್ನು ಮಹೇಶ ಬಳ್ಳಾರಿ ಮತ್ತು ಎನ್.ಜಡೆಯಪ್ಪ ಮಾಡಿದರು. 
ಹೋರಾಟಗಾರ, ಪತ್ರಕರ್ತ ಬಸವರಾಜ್ ಶೀಲವಂತರ  ಈ ಕಥೆಯಲ್ಲಿ ಬಂದಂತಹ ಸಮಸ್ಯೆಗಳೇ ನಮ್ಮ ಜಿಲ್ಲೆಯನ್ನು ಕಾಡುತ್ತಿವೆ.  ಪ್ರಸಕ್ತ ಪೋಸ್ಕೋದಂತಹ ಕಂಪನಿಗಳು "ಂಬಾಗಿಲ ಮೂಲಕ ನಮ್ಮ ಜಿಲ್ಲೆಯನ್ನು ಪ್ರವೇಶಿಸುತ್ತಿವೆ. ಇದರ ಬಗ್ಗೆ ಜನರು  ಎಚ್ಚರಗೊಳ್ಳಬೇಕು. ಯಾವುದೇ ಕಾರ್ಖಾನೆಗಳು ಸ್ಥಾಪನೆಯಾದರೂ ನಮ್ಮವರಿಗೆ ಕೆಲಸ ಸಿಗುತ್ತಿಲ್ಲ. ನಾವು ಕೇವಲ ಭೂ" ಕಳೆದುಕೊಳ್ಳುತ್ತಿದ್ದೇವೆ.  "ಶ್ವದ ಬೇರೆ ಬೇರೆ ದೇಶಗಳಲ್ಲಿ ಕಪ್ಪು ಪಟ್ಟಿಯಲ್ಲಿರುವ ಇಂತಹ ಕಂಪನಿಗಳು ನಮ್ಮ ಭೂ", ನೀರನ್ನು ಕಬಳಿಸಲು ಹೊಂಚು ಹಾಕುತ್ತಿವೆ. ಇದರ "ರುದ್ದ ಹೋರಾಟಕ್ಕೆ ಸಿದ್ದರಾಗಿ ಬೆಂಬಲಿಸಿ ಎಂದು ಹೇಳಿದರು. 
ಕಾರ್‍ಯಕ್ರಮದಲ್ಲಿ ಶಿವನಗೌಡ ಪಾಟೀಲ್, ಬಸವರಾಜ್ ಸಂಕನಗೌಡ್ರ, ಎನ್.ಜಡೆಯಪ್ಪ, ಮಹೇಶ ಬಳ್ಳಾರಿ, "ಜಯಲಕ್ಷ್ಮೀ ಮಠದ, ಶಾಂತಾದೇ" "ರೇಮಠ,ಕುರುವತ್ತಿಗೌಡ್ರ, ಶಿವಾನಂದ ಹೊದ್ಲೂರ, ಮಹಾಂತೇಶ ಕೊತಬಾಳ,"ರಣ್ಣ ಹುರಕಡ್ಲಿ, ಭರತ್, ಅಂದಣ್ಣ ಅಳ್ಳಿಗಿಡದ, ಪಡೆಯಪ್ಪ, ಶಂಕರ ಪ್ರಸಾದ, ನಾಗೇಶ ಮಡಿವಾಳರ, ನಟರಾಜ ಸವಡಿ, ತಿಪ್ಪೇಸ್ವಾ" ಮುಂತಾದವರು ಭಾಗವ"ಸಿದ್ದರು.
ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು ನಟರಾಜ್ ಸವಡಿ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 

Advertisement

0 comments:

Post a Comment

 
Top